ಬ್ರೇಕಿಂಗ್ ನ್ಯೂಸ್
15-02-24 06:04 pm Mangalore Correspondent ಕರಾವಳಿ
ಮಂಗಳೂರು, ಫೆ.15: ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹಿಂದು ದೇವರನ್ನು ನಿಂದಿಸಿದ್ದಾರೆಂದು ದೂರು ಕೊಟ್ಟರೂ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ. ಆದರೆ, ಶಾಸಕರು ಅಲ್ಲಿನ ಮಕ್ಕಳ ಪೋಷಕರ ಜೊತೆಗೆ ನಿಂತು ಜೈಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಎಫ್ಐಆರ್ ದಾಖಲು ಮಾಡಿದ್ದಾರೆ. ಇದು ಕಾಂಗ್ರೆಸ್ ಸರಕಾರದ ಹಿಂದು ವಿರೋಧಿ ನೀತಿಯನ್ನು ಸೂಚಿಸುತ್ತದೆ. ಜೆರೋಸಾ ಶಾಲೆಯ ಘಟನೆ ಮತ್ತು ಶಾಸಕರು ಮತ್ತು ಶರಣ್ ಪಂಪ್ವೆಲ್ ವಿರುದ್ಧ ಎಫ್ಐಆರ್ ದಾಖಲಿಸಿದ್ದನ್ನು ಖಂಡಿಸಿ ಫೆ.19ರಂದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಹರತಾಳ ನಡೆಸಲಾಗುವುದು ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಹೇಳಿದ್ದಾರೆ.
ಕದ್ರಿಯ ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಜೈಶ್ರೀರಾಮ್ ಘೋಷಣೆ ಕೂಗಿದ್ದು ರಾಜಕೀಯ ಘೋಷಣೆ ಅಲ್ಲ. ಅದು ಹಿಂದುಗಳು ಆರಾಧಿಸುವ ದೇವರ ಹೆಸರು. ಕೋಟ್ಯಂತರ ಭಕ್ತರ ಆರಾಧ್ಯ ದೇವರು, ಶ್ರೀರಾಮ ಈ ದೇಶದ ಅಸ್ಮಿತೆ. ಶಾಲೆಯ ಮಕ್ಕಳು ಪೋಷಕರ ಜೊತೆ ಸೇರಿ ಘೋಷಣೆ ಕೂಗಿದ್ದಾರೆ. ಅದರಲ್ಲಿ ರಾಜಕೀಯ ಅಥವಾ ಕೋಮು ದ್ವೇಷ ಎಲ್ಲಿ ಬರುತ್ತದೆ ಎಂದು ಪ್ರಶ್ನಿಸಿದರು.
ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗೆ ಅವಹೇಳನ ಮಾಡಿದ್ದಲ್ಲದೆ, ನಾಗದೇವರು, ಗಣಪತಿ ದೇವರನ್ನು ನಿಂದಿಸಿರುವ ಶಿಕ್ಷಕಿ ಸಿಸ್ಟರ್ ಪ್ರಭಾ ಅವರ ವಿರುದ್ಧ ಪೊಲೀಸರು ಕೇಸು ದಾಖಲಿಸಬೇಕು ಎಂದು ಆಗ್ರಹಿಸಿ ನಾವು ಮಂಗಳೂರಿನ ಎಲ್ಲ ಠಾಣೆಗಳ ಮುಂದೆ ಜೈಶ್ರೀರಾಮ್ ಘೋಷಣೆ ಕೂಗುತ್ತೇವೆ. ಹಿಂದು ದೇವರ ಅವಹೇಳನ ವಿಚಾರದಲ್ಲಿ ಪೋಷಕರು ಕೊಟ್ಟ ದೂರನ್ನು ಪೊಲೀಸರು ಸ್ವೀಕರಿಸಿಲ್ಲ. ಕಾಂಗ್ರೆಸ್ ಸರಕಾರದ ಒತ್ತಡದ ಕಾರಣದಿಂದಲೇ ಆ ದೂರನ್ನು ಪರಿಗಣಿಸಿಲ್ಲ ಎಂಬ ಮಾಹಿತಿ ಇದೆ. ಇದನ್ನು ಹಿಂದು ಸಮಾಜ ಸಹಿಸುವುದಿಲ್ಲ. ತಕ್ಷಣ ಸಿಸ್ಟರ್ ಪ್ರಭಾ ವಿರುದ್ಧ ಕೇಸು ದಾಖಲಿಸಿ ಬಂಧಿಸಬೇಕು. ಜೊತೆಗೆ, ನಮ್ಮ ನಾಯಕರ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದುಪಡಿಸಬೇಕು ಎಂದವರು ಆಗ್ರಹಿಸಿದರು.
ವಿಎಚ್ ಪಿ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ್ ಮಾತನಾಡಿ, ಪೊಲೀಸರು ಕಾಂಗ್ರೆಸ್ ಮುಖಂಡರ ಕುಮ್ಮಕ್ಕಿನಿಂದ ಕೇಸು ಹಾಕಿದ್ದಾರೆ. ಹಾಗಾದ್ರೆ ಪೊಲೀಸರು ಶರಣ್ ಪಂಪ್ವೆಲ್ ಸೇರಿ ಯಾರನ್ನಾದರೂ ಬಂಧಿಸಿ ನೋಡಲಿ. ಆಗ ನಾವು ನೋಡಿಕೊಳ್ಳುತ್ತೇವೆ ಎಂದು ಸವಾಲು ಹಾಕಿದರು.
Mangalore Vhp to hold protest near Police stations over filing case against Sharan Pumpwell in Gerosa School controversy. Even though we have filed case against the school no action has been taken but the Congress governmemt has made police register FIR against Sharan and MLA Vedavyas, Bharath Shetty intentionally arrangeintentionally alleged VHP.
23-09-24 07:46 pm
HK News Desk
Bangalore, North Indians, Video; ನಾವಿದ್ದರೆ ಬೆ...
23-09-24 04:42 pm
Tirupati laddu: ತಿರುಪತಿ ಲಡ್ಡಿನಲ್ಲಿ ಕೊಬ್ಬಿನಂಶ...
22-09-24 07:10 pm
Chikkaballapur, Accident: ಓವರ್ಟೇಕ್ ಮಾಡಲು ಹೋಗ...
22-09-24 06:52 pm
ಪ್ಯಾಲೆಸ್ತೀನ್ ಧ್ವಜದ ಬಗ್ಗೆ ಸಚಿವ ಜಮೀರ್ ಸಮರ್ಥನೆ ಬ...
21-09-24 11:17 pm
23-09-24 07:01 pm
HK News Desk
Arjun missing truck, Shiruru: ಶಿರೂರು ಗುಡ್ಡ ಕು...
21-09-24 08:05 pm
ರಾಜಕೀಯ ಬಿರುಗಾಳಿ ಎಬ್ಬಿಸಿದ ತಿರುಪತಿ ಲಡ್ಡು ವಿವಾದ ...
21-09-24 06:36 pm
ಲೆಬನಾನಲ್ಲಿ ಪೇಜರ್ ಸ್ಫೋಟ ; ವಯನಾಡಿನಲ್ಲಿ ಸುದ್ದಿ ಸ...
21-09-24 05:49 pm
Uttar Pradesh: ಗಂಡು ಮಗುವಿಗಾಗಿ ಪತ್ನಿ ಜೊತೆ ಜಗಳ...
20-09-24 07:39 pm
22-09-24 04:55 pm
Mangalore Correspondent
Shri Ram sene, Gangadhar Kulkarni, Mangalore:...
22-09-24 01:16 pm
Dasara 2024 School holiday; ಈ ಬಾರಿ ಅ.3ರಿಂದ 20...
21-09-24 01:15 pm
Nitte Tulu Study Centre, Mangalore: ನಿಟ್ಟೆ ತು...
20-09-24 11:08 pm
Mangalore Savad Sullia, NSUI: ಎನ್ಎಸ್ ಯುಐ ರಾಷ್...
20-09-24 10:57 pm
23-09-24 09:12 pm
Bangalore Correspondent
Bangalore Murder, Crime; ಕೂಲ್ ಸಿಟಿಯಲ್ಲಿ ಶ್ರದ್...
23-09-24 11:42 am
ಉಪ್ಪಳದ ಎರಡಂತಸ್ತಿನ ಮನೆಯಲ್ಲಿ ಮೂರು ಕೋಟಿ ಮೌಲ್ಯದ ಡ...
22-09-24 10:48 pm
ಪಾರ್ಟ್ ಟೈಮ್ ಉದ್ಯೋಗದ ಹೆಸರಲ್ಲಿ ಹೂಡಿಕೆ ; ಹಣ ಡಬಲ್...
22-09-24 10:40 pm
Mangalore cyber fraud, stock market: ಯೂಟ್ಯೂಬ್...
22-09-24 08:25 pm