ಬ್ರೇಕಿಂಗ್ ನ್ಯೂಸ್
22-02-24 01:08 pm Mangalore Correspondent ಕರಾವಳಿ
ಮಂಗಳೂರು, ಫೆ.22: ರಾಜ್ಯದ ಕರಾವಳಿಯ ಸಮುದ್ರ ವ್ಯಾಪ್ತಿಯಲ್ಲಿ ಚೀನಾ ಮೂಲದ ಬೋಟ್ ಪತ್ತೆಯಾಗಿದ್ದು, ಮಂಗಳೂರಿನ ಮೀನುಗಾರರು ಅದರ ಫೋಟೊ, ವಿಡಿಯೋ ಸೆರೆಹಿಡಿದು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
BVKV5 ಹೆಸರಿನ ಬೋಟ್ ಇದಾಗಿದ್ದು, ಚೀನಾದ ಕೆಂಪು ಬಾವುಟವನ್ನು ಹಾರಿಸಿಕೊಂಡಿದೆ. ಬೋಟ್ ನೋಡಿದ ಮಂಗಳೂರಿನ ಮೀನುಗಾರರು ಚೀನಾ ಬೋಟ್ ಎಂಬ ಶಂಕೆಯಲ್ಲಿ ಫೋಟೋ ಸೆರೆಹಿಡಿದಿದ್ದಾರೆ. ಅಲ್ಲದೆ, ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಕಾವಲು ಪೊಲೀಸ್ ಪಡೆಯ ಗಮನಕ್ಕೆ ತಂದಿದ್ದಾರೆ. ಮೀನುಗಾರರ ಮಾಹಿತಿ ಪ್ರಕಾರ, ಇದನ್ನು ಕುಮಟಾದಿಂದ ಅಂದಾಜು 200 ಕಿಮೀ ದೂರದ ಆಳ ಸಮುದ್ರದಲ್ಲಿ ಸೆರೆಹಿಡಿಯಲಾಗಿದೆ. ಚೀನಾ ಬೋಟಿನವರು ರಾತ್ರಿ ವೇಳೆ ನಿಷೇಧಿತ ಲೈಟ್ ಫಿಶಿಂಗನ್ನೂ ನಡೆಸುತ್ತಿದ್ದರು ಎಂದವರು ತಿಳಿಸಿದ್ದಾರೆ. ಈ ವಿಡಿಯೋವನ್ನು ಮೂರು ದಿನಗಳ ಹಿಂದೆ ತೆಗೆದಿದ್ದಾರೆ ಎನ್ನಲಾಗಿದೆ.

ಬೋಟ್ ಬಗ್ಗೆ ಇಂಟೆಲಿಜೆನ್ಸ್ ಮೂಲಕ ಮಾಹಿತಿ ಪಡೆದಾಗ, ಅದು ಚೀನಾದ್ದೇ ಬೋಟ್ ಎಂದು ಖಾತರಿಯಾಗಿದೆ. ಚೀನಾದ ಫುಝು ಎನ್ನುವ ಹೆಸರಿನ ಬಂದರಿನಲ್ಲಿ ಬೋಟ್ ರಿಜಿಸ್ಟರ್ ಆಗಿದ್ದು, 25 ಮಂದಿಯಷ್ಟು ಸಿಬಂದಿ ಇದ್ದಾರೆ. ಬೋಟಿನ ಫ್ಲಾಗ್ ಚೀನಾದ್ದೇ ಎಂದು ಖಚಿತಪಡಿಸಲಾಗಿದೆ. ಬೋಟ್ ಫು ಯುವಾನ್ ಯು 676 ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ತಿಳಿದುಬಂದಿದೆ.
ಭಾರತ ಜಲಪ್ರದೇಶಕ್ಕೆ ಅತಿಕ್ರಮಣ
ಸಾಮಾನ್ಯವಾಗಿ ಹೊರದೇಶದ ಯಾವುದೇ ಬೋಟುಗಳಿಗೆ ಭಾರತೀಯ ಜಲಪ್ರದೇಶ ವ್ಯಾಪ್ತಿಯ ತೀರದಿಂದ 200 ಕಿಮೀ ಒಳಗೆ ಬರಲು ಅವಕಾಶ ಇರುವುದಿಲ್ಲ. ಅದರಲ್ಲೂ ಶತ್ರು ರಾಷ್ಟ್ರ ಚೀನಾದ ಬೋಟ್ ಸೇನೆಯ ಕಣ್ಣು ತಪ್ಪಿಸಿ ಭಾರತದ ಸಮುದ್ರ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವುದು ದೇಶದ ಭದ್ರತೆಗೆ ಸವಾಲಾಗಿದೆ. ಕಾರವಾರದಲ್ಲಿ ನೌಕಾಪಡೆಯ ಸೀಬರ್ಡ್ ನೆಲೆ ಇರುವುದರಿಂದ ಅದರ ಪರಿಸರದಲ್ಲಿಯೇ ಈ ಬೋಟ್ ಕಾಣಿಸಿಕೊಂಡಿದೆ ಎನ್ನಲಾಗುತ್ತಿದ್ದು, ಚೀನಾ ಈ ಬೋಟ್ ಮೂಲಕ ಗೂಢಚಾರಿಕೆ ನಡೆಸುತ್ತಿದೆಯೇ ಎಂಬ ಅನುಮಾನ ಮೂಡಿಸಿದೆ. ಬೋಟ್ ಪತ್ತೆ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಕಾವಲು ಪಡೆ ಅಲರ್ಟ್ ಆಗಿದ್ದು, ಹುಡುಕಾಟದಲ್ಲಿ ತೊಡಗಿದೆ.
ತನಿಖೆಗಿಳಿದ ಕರಾವಳಿ ಪೊಲೀಸ್ ಪಡೆ
ಚೀನಾ ಬೋಟ್ ಪತ್ತೆ ಹಿನ್ನೆಲೆಯಲ್ಲಿ ಕರಾವಳಿ ಪೊಲೀಸ್ ಪಡೆ ಎಲರ್ಟ್ ಆಗಿದ್ದು, ತನಿಖೆ ಆರಂಭಿಸಿದ್ದಾರೆ. ಮೀನುಗಾರರಿಂದ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಕುಮಟಾದಿಂದ ತೆರಳಿದ್ದ ಬೋಟಿನಲ್ಲಿದ್ದ ಮಂಗಳೂರು ಮೂಲದ ಮೀನುಗಾರರು ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎನ್ನುವ ಮಾಹಿತಿಯಿದೆ. ತನಿಖೆಗೆ ಹೊನ್ನಾವರ ಕರಾವಳಿ ಪೊಲೀಸ್ ಪಡೆ ಇನ್ಸ್ ಪೆಕ್ಟರ್ ವಿಕ್ಟರ್ ಸೈಮನ್ ಅವರನ್ನು ನೇಮಿಸಲಾಗಿದೆ.
China baot BVKV5 with flag found near Kumta near Honnavar over illegal fishing, coastal police on high alert. Honnavar coastal Inspector Victor Simon is now investigating the case of China illegal boat.
23-07-26 08:05 pm
HK News Desk
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
24-07-26 11:18 am
HK News Staffer
ಮತ್ತೆ ಪ್ರತಿಭಟನೆಗೆ ಬಂದ್ರೆ ಜೇಬಿನಲ್ಲಿ 50 ಗ್ರಾಂ ಡ...
23-07-26 06:26 pm
ಮೋದಿ ಮೌನ ಹೊಸದೇನಲ್ಲ, 'ನಾವು ತಪ್ಪು ಮಾಡಿದ್ದೇವೆ' ಎ...
23-07-26 05:57 pm
ರಾಜಧಾನಿ ದೆಹಲಿಯಲ್ಲಿ ಹೆಚ್ಚಿದ ಪ್ರತಿಭಟನೆ ಕಿಚ್ಚು ;...
23-07-26 05:48 pm
ಅಯೋಧ್ಯೆ ದೇಣಿಗೆ ಕಳವು ದೇಶದ ಆತ್ಮಸಾಕ್ಷಿಗೆ ಬಿದ್ದ ಪ...
23-07-26 01:51 pm
23-07-26 10:27 pm
Mangaluru Staffer
ವಿದ್ಯಾರ್ಥಿಗಳಿಗೆ ಲಾಠಿಚಾರ್ಜ್ ದೇಶದ ಭವಿಷ್ಯದ ಮೇಲಿನ...
22-07-26 09:18 pm
2,000 ರೂ. ಆಸೆಗೆ ಬಿದ್ದು ಬ್ಯಾಂಕ್ ಅಕೌಂಟ್ ಹಸ್ತಾಂತ...
21-07-26 11:02 pm
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
24-07-26 03:03 pm
HK News Staffer
14 ವರ್ಷಗಳ ಹಿಂದೆ ಕುಂಬಳೆಯಲ್ಲಿ ಮನೆ ಮಂದಿಯನ್ನು ಕಟ್...
24-07-26 02:18 pm
ಸುಳ್ಯದಲ್ಲಿ ವಿವಾಹಿತ ಮಹಿಳೆ ಶಂಕಾಸ್ಪದ ಸಾವು ಪ್ರಕರಣ...
22-07-26 10:24 pm
ಎಸ್ಐಆರ್ ಪರಿಷ್ಕರಣೆ ನೆಪದಲ್ಲಿ ಎಪಿಕೆ ಫೈಲ್ ಕಳುಹಿಸಿ...
22-07-26 09:03 pm
ಬಂಟ್ವಾಳ ; ಮಳೆ-ಗಾಳಿಗೆ ಶಾಲಾ ಬಸ್ಸಿಗೆ ಉರುಳಿ ಬಿದ್ದ...
22-07-26 07:37 pm