ಬ್ರೇಕಿಂಗ್ ನ್ಯೂಸ್
23-02-24 06:02 pm Mangalore Correspondent ಕರಾವಳಿ
ಉಳ್ಳಾಲ, ಫೆ.23: ತೊಕ್ಕೊಟ್ಟಿನಲ್ಲಿ ನಡೆಯಲಿರುವ ಡಿವೈಎಫ್ಐ ರಾಜ್ಯ ಸಮ್ಮೇಳನದ ಪ್ರಚಾರಾರ್ಥ ನಗರದೆಲ್ಲೆಡೆ ಹಾಕಲಾಗಿರುವ ಫ್ಲೆಕ್ಸ್ ಗಳಲ್ಲಿ ತುಳುನಾಡಿನ ವೀರರು, ಕಾರಣಿಕ ಶಕ್ತಿಗಳಾದ ಕೋಟಿ-ಚೆನ್ನಯರ ಚಿತ್ರಗಳನ್ನ ಹಾಕಿ ಅವಮಾನಿಸಲಾಗಿದ್ದು ಎರಡು ದಿವಸದಲ್ಲಿ ವಿವಾದಿತ ಫ್ಲೆಕ್ಸ್ ಗಳನ್ನ ತೆರವುಗೊಳಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಉಳ್ಳಾಲದ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ.ಟಿ. ಸುವರ್ಣ ಗಡುವು ನೀಡಿದ್ದಾರೆ.
ಕಲ್ಲಾಪಿನ ಯುನಿಟಿ ಸಭಾಂಗಣದಲ್ಲಿ ಫೆ.25, 26, 27ರಂದು ನಡೆಯಲಿರುವ ಡಿವೈಎಫ್ಐ ರಾಜ್ಯ ಸಮ್ಮೇಳನದ ಪ್ರಚಾರಾರ್ಥ ಅಳವಡಿಸಿರುವ ಫ್ಲೆಕ್ಸ್ ಗಳಲ್ಲಿ ತುಳುನಾಡಿನ ಆರಾಧ್ಯ ದೈವ ಸಂಭೂತರೆನಿಸಿರುವ ಕೋಟಿ- ಚೆನ್ನಯರ ಚಿತ್ರಗಳನ್ನ ಅಳವಡಿಸಿರುವ ನಡೆಯನ್ನ ಖಂಡಿಸಿ, ವಿವಾದಿತ ಫ್ಲೆಕ್ಸ್ ಗಳನ್ನ ತಕ್ಷಣ ತೆರವುಗೊಳಿಸುವಂತೆ ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆ ವತಿಯಿಂದ ಉಳ್ಳಾಲ ಪೊಲೀಸ್ ಠಾಣಾಧಿಕಾರಿ ಬಾಲಕೃಷ್ಣ ಅವರಿಗೆ ಶುಕ್ರವಾರ ಮನವಿ ನೀಡಲಾಯಿತು.


ವೇದಿಕೆಯ ಅಧ್ಯಕ್ಷ ಕೆ.ಟಿ. ಸುವರ್ಣ ಮಾತನಾಡಿ ನಮ್ಮೆಲ್ಲರ ಆರಾಧ್ಯ ಕೋಟಿ-ಚೆನ್ನಯರ ಚಿತ್ರವನ್ನ ಕಾಲ ಕೆಳಭಾಗದಲ್ಲಿ ಫ್ಲೆಕ್ಸಲ್ಲಿ ಮುದ್ರಿಸಿ ಅವಮಾನಿಸಿದ್ದಾರೆ. ನಮ್ಮ ಯುವಕರು ವಿವಾದಿತ ಫ್ಲೆಕ್ಸ್ ಗಳನ್ನ ತೆರವುಗೊಳಿಸಲು ಮುಂದಾದರೂ ನಾವು ಶಾಂತಿ ಕದಡಲು ಅವಕಾಶ ನೀಡಿಲ್ಲ. ಎರಡು ದಿವಸದಲ್ಲಿ ವಿವಾದಾತ್ಮಕ ಫ್ಲೆಕ್ಸ್ ಗಳನ್ನ ತೆರವುಗೊಳಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಬಿಜೆಪಿ ಮಂಗಳೂರು ಮಂಡಲದ ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಮಾತನಾಡಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರೇ ನಾವು ಎಡಪಂಥೀಯರೆಂದು ಹೇಳಿದ್ದಾರೆ. ಎಡಪಂಥೀಯರ ಸಮಾವೇಶದ ಫ್ಲೆಕ್ಸಲ್ಲಿ ನಮ್ಮ ಆರಾಧ್ಯ ಕೋಟಿ-ಚೆನ್ನಯರ ಭಾವಚಿತ್ರ ಏಕೆ ಬೇಕು..? ಸಮಾಜ ಸುಧಾರಕರ ಫೋಟೊ ಬಳಸಿ ನಮ್ಮದೇನೂ ಅದಕ್ಕೆ ಆಕ್ಷೇಪವಿಲ್ಲ, ಆದರೆ ಕಾರಣೀಕ ದೈವೀ ಸಂಭೂತರಾದ ಕೋಟಿ-ಚೆನ್ನಯರ ಫೊಟೊ ಬಳಸಿ ಸುಮ್ಮನೆ ವಿವಾದ ಹುಟ್ಟಿಸಿ, ಆಸ್ತಿಕ ಬಾಂಧವರ ಭಾವನೆಗಳಿಗೆ ಘಾಸಿ ಉಂಟು ಮಾಡಿ ನಿಮ್ಮ ಸಮಾವೇಶಕ್ಕೆ ಪ್ರಚಾರ ಪಡೆಯುವ ಹುನ್ನಾರ ಫಲಿಸದು ಎಂದರು.
ಶನಿವಾರ ಉಳ್ಳಾಲದಲ್ಲಿ ಅಬ್ಬಕ್ಕ ಉತ್ಸವ ನಡೆಯಲಿದ್ದು ಉಳ್ಳಾಲದ ಅಬ್ಬಕ್ಕ ಸರ್ಕಲ್ ನಲ್ಲಿ ಡಿವೈಎಫ್ ಐ ಸಂಘಟನೆಯ ಬಂಟಿಗ್ಸ್ ಹಾಕಲಾಗಿದ್ದು, ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಆಗ್ರಹಕ್ಕೆ ಮಣಿದು ಉಳ್ಳಾಲ ನಗರಸಭೆ ಸಿಬ್ಬಂದಿಗಳು ಬಂಟಿಗ್ಸ್ ಗಳನ್ನ ತೆರವು ಮಾಡಿದರು. ಬಿಜೆಪಿ ಮುಖಂಡರಾದ ಸಂತೋಷ್ ಬೋಳಿಯಾರ್, ಜಗದೀಶ ಆಳ್ವ ಕುವೆತ್ತಬೈಲು, ಬಿಲ್ಲವ ವೇದಿಕೆ ಪ್ರಮುಖರಾದ ಎ.ಜೆ. ಶೇಖರ್, ಜೀವನ್ ಕೆರೆಬೈಲು, ಗಣೇಶ ಕಾಪಿಕಾಡು, ವಕೀಲರಾದ ಮೋಹನರಾಜ್ ಕೋಟೆಕಾರು ಮೊದಲಾದವರು ಉಪಸ್ಥಿತರಿದ್ದರು.
DYFI Conference in Mangalore, Koti Chennayya picture used in banner, Billava organisation demands to remove picture from the banners posted in the city.
23-07-26 08:05 pm
HK News Desk
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
24-07-26 11:18 am
HK News Staffer
ಮತ್ತೆ ಪ್ರತಿಭಟನೆಗೆ ಬಂದ್ರೆ ಜೇಬಿನಲ್ಲಿ 50 ಗ್ರಾಂ ಡ...
23-07-26 06:26 pm
ಮೋದಿ ಮೌನ ಹೊಸದೇನಲ್ಲ, 'ನಾವು ತಪ್ಪು ಮಾಡಿದ್ದೇವೆ' ಎ...
23-07-26 05:57 pm
ರಾಜಧಾನಿ ದೆಹಲಿಯಲ್ಲಿ ಹೆಚ್ಚಿದ ಪ್ರತಿಭಟನೆ ಕಿಚ್ಚು ;...
23-07-26 05:48 pm
ಅಯೋಧ್ಯೆ ದೇಣಿಗೆ ಕಳವು ದೇಶದ ಆತ್ಮಸಾಕ್ಷಿಗೆ ಬಿದ್ದ ಪ...
23-07-26 01:51 pm
23-07-26 10:27 pm
Mangaluru Staffer
ವಿದ್ಯಾರ್ಥಿಗಳಿಗೆ ಲಾಠಿಚಾರ್ಜ್ ದೇಶದ ಭವಿಷ್ಯದ ಮೇಲಿನ...
22-07-26 09:18 pm
2,000 ರೂ. ಆಸೆಗೆ ಬಿದ್ದು ಬ್ಯಾಂಕ್ ಅಕೌಂಟ್ ಹಸ್ತಾಂತ...
21-07-26 11:02 pm
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
24-07-26 03:03 pm
HK News Staffer
14 ವರ್ಷಗಳ ಹಿಂದೆ ಕುಂಬಳೆಯಲ್ಲಿ ಮನೆ ಮಂದಿಯನ್ನು ಕಟ್...
24-07-26 02:18 pm
ಸುಳ್ಯದಲ್ಲಿ ವಿವಾಹಿತ ಮಹಿಳೆ ಶಂಕಾಸ್ಪದ ಸಾವು ಪ್ರಕರಣ...
22-07-26 10:24 pm
ಎಸ್ಐಆರ್ ಪರಿಷ್ಕರಣೆ ನೆಪದಲ್ಲಿ ಎಪಿಕೆ ಫೈಲ್ ಕಳುಹಿಸಿ...
22-07-26 09:03 pm
ಬಂಟ್ವಾಳ ; ಮಳೆ-ಗಾಳಿಗೆ ಶಾಲಾ ಬಸ್ಸಿಗೆ ಉರುಳಿ ಬಿದ್ದ...
22-07-26 07:37 pm