ಬ್ರೇಕಿಂಗ್ ನ್ಯೂಸ್
04-03-24 10:14 pm Mangalore Correspondent ಕರಾವಳಿ
ಉಳ್ಳಾಲ, ಮಾ.4: ಗಟ್ಟಿ ಸಮುದಾಯದವರು ಸೋಮೇಶ್ವರ ಸೋಮನಾಥ ದೇವಸ್ಥಾನವನ್ನ ನಮ್ಮದೆಂದು ಹೇಳುತ್ತಲೇ ಹೋರಾಟ ನಡೆಸಿದ್ದಲ್ಲದೆ ನಾವು ಲಾಸು, ಲಾಸು ಅಂತ ಅಳುತ್ತಿದ್ದರು. ಅದಕ್ಕಾಗಿಯೇ ನಾನು ಸೋಮೇಶ್ವರದ ಮಂಡಲ ಪ್ರಧಾನನಾಗಿದ್ದಾಗ ಸೋಮನಾಥ ದೇವಸ್ಥಾನವನ್ನ ಮುಜರಾಯಿ ಇಲಾಖೆಗೆ ಸೇರಿಸಿದ್ದೆ. ನಾನು ಅಂದು ತೆಗೆದ ನಿರ್ಧಾರ ಸರಿಯಾಗಿದೆ ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿರುವ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ವಿರುದ್ಧ ಗಟ್ಟಿ ಸಮಾಜ ಬಾಂಧವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕೊಂಡಾಣ ಕ್ಷೇತ್ರದ ಭಂಡಾರಮನೆ ಧ್ವಂಸ ಪ್ರಕರಣದ ವಿಚಾರದಲ್ಲಿ ಭಾನುವಾರ ತೊಕ್ಕೊಟ್ಟಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ್ದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರು ಗಟ್ಟಿ ಸಮಾಜ ಬಾಂಧವರಿಗೆ ಅವಹೇಳನ ಮಾಡಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಅಕ್ರೋಶ ವ್ಯಕ್ತವಾಗಿದೆ.
ಮಾಧ್ಯಮದ ಮುಂದೆ ಮಾತನಾಡಿದ್ದ ಸದಾಶಿವ ಅವರು ನಾನು ಸೋಮೇಶ್ವರದ ಮಂಡಲ ಪ್ರಧಾನನಾಗಿದ್ದಾಗ ಸೋಮನಾಥ ದೇವಸ್ಥಾನವನ್ನ ಗಟ್ಟಿ ಸಮುದಾಯದವರು ಯಾವಾಗಲೂ ನಮ್ಮದೆಂದು ಹೇಳಿ ಹೋರಾಟ ಮಾಡುತ್ತಿದ್ದರು. ವಾರ್ಷಿಕ ಜಾತ್ರೆ ಮುಗಿದ ನಂತರವೂ ಲಾಸು, ಲಾಸಂತ ಹೇಳುತ್ತಿದ್ದರು. ನನಗೆ ಊರವರು, ಭಕ್ತಾಧಿಗಳ ಒತ್ತಡ ಬಂದ ಹಿನ್ನಲೆಯಲ್ಲಿ ದೇವಸ್ಥಾನವನ್ನ ಅಂದು ಮುಜರಾಯಿ ಇಲಾಖೆಯ ಅಧೀನಕ್ಕೆ ಸೇರಿಸಿದ್ದೆ. ಅಂದು ನಾನು ತೆಗೆದ ನಿರ್ಧಾರವು ಸರಿಯಾಗಿದೆ. ಈವಾಗ ಸೋಮನಾಥ ಕ್ಷೇತ್ರವು ಎಷ್ಟು ಅಭಿವೃದ್ಧಿಗೊಂಡಿದೆ ಎಂದು ಸದಾಶಿವ ಉಳ್ಳಾಲ್ ಅವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದು ಅದರ ವೀಡಿಯೋ ವೈರಲ್ ಆಗಿದೆ. ಸದಾಶಿವ ಉಳ್ಳಾಲ್ ಅವರಿಗೆ ಕಳೆದ ವಾರ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಲಭಿಸಿತ್ತು.
ತಮ್ಮ ಜಾತಿಯ ಹೆಸರೆತ್ತಿ ತುಚ್ಚವಾಗಿ ಮಾತನಾಡಿದ ಸದಾಶಿವ ಉಳ್ಳಾಲ್ ವಿರುದ್ಧ ಗಟ್ಟಿ ಸಮಾಜ ಬಾಂಧವರು ಉರಿದು ಬಿದ್ದಿದ್ದು ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.
Mangalore kondana temple, Ullal Block Congress president sadashiv ullal statement sparks controversy among Gatti community.
27-04-24 03:30 pm
HK News Desk
Snake bite, Bangalore: ಆಟ ಆಡುತ್ತಿದ್ದಾಗ ಕಚ್ಚಿದ...
27-04-24 02:10 pm
ರಾಜ್ಯದ 14 ಕ್ಷೇತ್ರದಲ್ಲಿ ಶೇ. 69.23ರಷ್ಟು ಮತದಾನ,...
26-04-24 11:17 pm
ಬಿಜೆಪಿ ತನ್ನ ಭದ್ರಕೋಟೆಯಲ್ಲೂ ಗೆದ್ದೇ ಗೆಲ್ಲುತ್ತೇವೆ...
26-04-24 09:10 pm
Madikeri, election, heart attack; ಮಡಿಕೇರಿ ; ಮ...
26-04-24 06:14 pm
27-04-24 03:13 pm
HK News Desk
Arvind Kejriwal, Delhi High Court : ಜೈಲಿನಲ್ಲಿ...
27-04-24 02:20 pm
ಅಗ್ನಿ ಅವಘಡ ; ನವ ದಂಪತಿ ಸೇರಿ 6 ಮಂದಿ ಸಜೀವ ದಹನ, ಮ...
26-04-24 02:58 pm
Road Accident In Telangana: ಹಾಳಾಗಿ ನಿಂತಿದ್ದ ಲ...
25-04-24 03:49 pm
Groom electrocuted in Rajasthan: ರೆಸಾರ್ಟ್ ನಲ್...
24-04-24 05:01 pm
27-04-24 05:31 pm
HK News Desk
Sullia Banjarumale, Voting: ಪಶ್ಚಿಮ ಘಟ್ಟಗಳ ನಡು...
26-04-24 10:45 pm
Mangalore Voting, Election 2024; ದಕ್ಷಿಣ ಕನ್ನಡ...
26-04-24 10:32 pm
Karkala, Horse ride to cast his vote: ಕಾರ್ಕಳ...
26-04-24 09:28 pm
ಸುಳ್ಯ ; 18 ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಶಸ್ತ್ರಸ...
26-04-24 08:42 pm
27-04-24 02:53 pm
HK News Desk
Bangalore crime, Divorce: ಇನ್ನೊಬ್ಬಳ ಜೊತೆ ಪತಿಯ...
27-04-24 01:37 pm
Mangalore crime, stabbed, Pawan: ಫರಂಗಿಪೇಟೆ ;...
26-04-24 03:59 pm
Mangalore Fraud, crime, Krishnaprasad Shetty:...
25-04-24 10:18 pm
Bangalore crime, Dacoity gang, 40 lakhs, robb...
25-04-24 03:33 pm