ಬ್ರೇಕಿಂಗ್ ನ್ಯೂಸ್
27-11-20 11:59 am Mangalore Correspondent ಕರಾವಳಿ
ಬಂಟ್ವಾಳ, ನವೆಂಬರ್ 27: ಜಾಗದ ಪಹಣಿ ಪತ್ರದಲ್ಲಿ ಸರ್ವೆ ನಂಬ್ರ ಬದಲಾಗಿದ್ದನ್ನು ಸರಿಪಡಿಸಲು ಒಂದು ಸಾವಿರ ಲಂಚ ಕೇಳಿದ ಬಂಟ್ವಾಳದ ಉಪ ತಹಸೀಲ್ದಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಬಂಟ್ವಾಳ ತಾಲೂಕು ಕಚೇರಿಯಲ್ಲಿ ಉಪ ತಹಸೀಲ್ದಾರ್ ಆಗಿರುವ ರವಿಚಂದ್ರ ಲಂಚ ಪಡೆಯುತ್ತಿರುವಾಗಲೇ ಸಿಕ್ಕಿಬಿದ್ದವರು. ಪಜೀರು ನಿವಾಸಿ ವೆರೋನಿಕಾ ರೋಡ್ರಿಗಸ್ ಎಂವಬರು, ಬೆಂಜನಪದವಿನ ತಮ್ಮ ಜಾಗದ ದಾಖಲೆ ಪತ್ರದಲ್ಲಿ ಸರ್ವೆ ನಂಬ್ರ ಬದಲಾಗಿದ್ದನ್ನು ಸರಿಪಡಿಸಲು ಅರ್ಜಿ ಸಲ್ಲಿಸಿದ್ದರು.
ಸರ್ವೆ ನಂಬರ್ 107-14 ಆಗಬೇಕಾಗಿದ್ದಲ್ಲಿ 107-1ಎಚ್ ಎಂದು ನಮೂದಾಗಿತ್ತು. ಸಣ್ಣ ಬದಲಾವಣೆಯನ್ನು ಸರಿಪಡಿಸಲು 2018ರ ಜೂನ್ 12ರಂದು ತಹಸೀಲ್ದಾರ್ ಕಚೇರಿಗೆ ಅರ್ಜಿ ಬರೆದಿದ್ದರು. ಆದರೆ, ವರ್ಷ ಕಳೆದರೂ ಅರ್ಜಿ ಅಲ್ಲಿಂದ ಕದಲಿರಲಿಲ್ಲ. ಮತ್ತೆ ಮತ್ತೆ ತಹಸೀಲ್ದಾರ್ ಅವರನ್ನು ಭೇಟಿಯಾಗಿ ಗೋಗರೆದಾಗ, 2019 ಮೇ ತಿಂಗಳಲ್ಲಿ ಅರ್ಜಿ ಮೇರಮಜಲು ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಬಂದಿತ್ತು. ಆನಂತರವೂ ತಮ್ಮ ಕೆಲಸ ಆಗಲೇ ಇಲ್ಲ.
ಮತ್ತೊಂದು ವರ್ಷ ಕಳೆದ ಬಳಿಕ, 2020ರಲ್ಲಿ ಅರ್ಜಿ ಗ್ರಾಮಾಧಿಕಾರಿಯಿಂದ ಮತ್ತೆ ತಹಸೀಲ್ದಾರ್ ಕಚೇರಿಗೆ ಅಪ್ರೂವಲ್ ಗೆ ಬಂದಿತ್ತು. ಗ್ರಾಮಾಧಿಕಾರಿ ಕೊಟ್ಟ ಉಲ್ಲೇಖ ಪತ್ರಕ್ಕೆ ತಹಸೀಲ್ದಾರ್ ಸಹಿ ಹಾಕಿ ಅರ್ಜಿಯನ್ನು ಮುಂದಕ್ಕೆ ಕೊಡಬೇಕಿತ್ತು. ಅರ್ಜಿದಾರರು ಮತ್ತೆ ಮತ್ತೆ ಉಪ ತಹಸೀಲ್ದಾರ್ ಅವರನ್ನು ಭೇಟಿಯಾಗಿದ್ದು, ಕೊನೆಗೆ ಸಹಿ ಹಾಕಿ ಕೊಡಲು ಹಣದ ಬೇಡಿಕೆ ಇಟ್ಟಿದ್ದಾರೆ.
ಅರ್ಜಿದಾರ ವೆರೋನಿಕಾ ರೋಡ್ರಿಗಸ್, ಈ ವಿಚಾರವನ್ನು ಮಂಗಳೂರಿನ ಎಸಿಬಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಅಧಿಕಾರಿಗಳು ಮೊದಲೇ ಕೊಟ್ಟಿದ್ದ ಒಂದು ಸಾವಿರ ರೂ. ಹಣವನ್ನು ಅರ್ಜಿದಾರರಿಂದ ಪಡೆಯುತ್ತಿದ್ದಾಗಲೇ ಉಪ ತಹಸೀಲ್ದಾರ್ ಈಗ ಎಸಿಬಿ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಎಸಿಬಿ ಡಿವೈಎಸ್ಪಿ ಕೆ.ಸಿ ಪ್ರಕಾಶ್ ನೇತೃತ್ವದಲ್ಲಿ ಇನ್ ಸ್ಪೆಕ್ಟರ್ ಗಳಾದ ಗುರುರಾಜ್ ಮತ್ತು ಶ್ಯಾಮಸುಂದರ್ ದಾಳಿ ಕಾರ್ಯಾಚರೆ ನಡೆಸಿದ್ದರು. ಒಂದು ಸಣ್ಣ ಫೈಲ್ ಮುಂದಿಟ್ಟು ಕಂದಾಯ ಇಲಾಖೆ ಅಧಿಕಾರಿಗಳು ಹೇಗೆಲ್ಲಾ ಪೀಡಿಸುತ್ತಾರೆ, ಹಣ ಕೊಡದಿದ್ದರೆ ವರ್ಷಗಟ್ಟಲೆ ಹೇಗೆ ಸತಾಯಿಸುತ್ತಾರೆ ಎಂಬುದಕ್ಕೆ ಈ ಪ್ರಕರಣ ನಿದರ್ಶನ.
The Anti-Corruption Bureau (ACB) officials caught deputy tahsildar in Bantwal taluk office, Ravishankar, when accepting a bribe.
03-03-26 08:39 pm
HK News Staffer
ಜೀವನಾಂಶ ಕೇಳಿದ ಪತ್ನಿಯನ್ನು ಸುಪಾರಿ ಕೊಟ್ಟು ಕೊಲ್ಲಿ...
03-03-26 08:37 pm
ತಮ್ಮದೇ ಶಾಸಕರ ಫೋನ್ ಕದ್ದಾಲಿಕೆ - ಡಿಕೆಶಿ ಬಗ್ಗೆ ಎಚ...
03-03-26 08:25 pm
1ನೇ ತರಗತಿ ಸೇರಲು 6 ವರ್ಷ ಕಡ್ಡಾಯ; ಸರ್ಕಾರದ ವಯೋಮಿತ...
02-03-26 09:19 pm
ಗಲ್ಫ್ ಯುದ್ಧ; ಬಳ್ಳಾರಿಯಿಂದ ದುಬೈ ಟೂರ್ ತೆರಳಿದ್ದ 5...
01-03-26 09:20 pm
03-03-26 04:30 pm
HK News Staffer
ಊಟಕ್ಕೂ ಹಣವಿಲ್ಲ, ದಯವಿಟ್ಟು ಸಹಾಯ ಮಾಡಿ..! ಮಾಸ್ಕೋ...
03-03-26 04:14 pm
ಗಲ್ಫ್ ಉದ್ವಿಗ್ನ ; ವಿವಿಧೆಡೆ ಸಿಲುಕಿರುವ ಭಾರತೀಯರನ್...
03-03-26 04:11 pm
ಗಲ್ಫ್ ದೇಶಗಳ ತೈಲ ಘಟಕಗಳೇ ಟಾರ್ಗೆಟ್ ; ಇರಾನ್ ಕ್ಷಿಪ...
03-03-26 12:26 pm
ಗಲ್ಫ್ ಯುದ್ಧ ಹೊಡೆತ ; 80 ಡಾಲರ್ ದಾಟಿದ ಕಚ್ಚಾ ತೈಲದ...
02-03-26 09:23 pm
03-03-26 09:33 pm
HK News Staffer
'ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ' ಎಂದು...
03-03-26 08:42 pm
ವಿದ್ಯುತ್ ಗುತ್ತಿಗೆದಾರರಲ್ಲಿ ಪರ್ಸೆಂಟ್ ಲೆಕ್ಕದಲ್ಲಿ...
03-03-26 03:10 pm
ನಿಷ್ಠಾವಂತ ಆರೆಸ್ಸೆಸ್ ಕಾರ್ಯಕರ್ತ, ಮಂಗಳೂರಿನ ಬಿಜೆಪ...
03-03-26 02:39 pm
ನಾಲ್ಕು ವರ್ಷಗಳ ಪ್ರೀತಿ ನಿರಾಕರಿಸಿದ ಪ್ರೇಯಸಿ; ವಿರಸ...
03-03-26 10:37 am
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm