ಬ್ರೇಕಿಂಗ್ ನ್ಯೂಸ್
03-06-24 09:37 pm Mangalore Correspondent ಕರಾವಳಿ
ಪುತ್ತೂರು, ಜೂನ್ 3: ಸೋಮವಾರ ಸಂಜೆ ಪುತ್ತೂರು ಪೇಟೆಯಲ್ಲಿ ಮೇಘಸ್ಫೋಟ ಆದ ರೀತಿ ಮಳೆಯಾಗಿದೆ. ಸಂಜೆ 4 ಗಂಟೆಯಿಂದ 45 ನಿಮಿಷ ಕಾಲ ಭಾರೀ ಮಳೆ ಸುರಿದಿದ್ದು ಪುತ್ತೂರು ಪೇಟೆ ಇಡೀ ಮಳೆನೀರಿನಲ್ಲಿ ತೋಯ್ದು ಹೋಗಿದೆ. ಪುತ್ತೂರು ಪೇಟೆಯ ಜನರ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಕಂಡರಿಯದ ರೀತಿ ಮಳೆ ಆಗಿದ್ಯಂತೆ.
ಒಂದೇ ಸಮನೆ ಧೋ ಎಂದು ಮಳೆ ಸುರಿದಿದ್ದು, ರಸ್ತೆಯಲ್ಲಿ ನೀರು ನದಿಯಂತೆ ತುಂಬಿಕೊಂಡಿದೆ. ದರ್ಭೆಯಲ್ಲಿ ಆಟೋ ರಿಕ್ಷಾಗಳು, ದ್ವಿಚಕ್ರ ವಾಹನಗಳು ಸಾಗಲು ಸಾಧ್ಯವಾಗದೆ ನಿಂತುಬಿಟ್ಟಿದ್ದವು. ಕೋರ್ಟ್ ರೋಡಿನಲ್ಲಿ ತಗ್ಗಿನ ಪ್ರದೇಶದಲ್ಲಿದ್ದ ಜುವೆಲ್ಲರಿ ಅಂಗಡಿಗೆ ನೀರು ನುಗ್ಗಿದ್ದು ಮೊಣಕಾಲು ಮುಳುಗುವಷ್ಟು ಮಳೆ ನೀರು ಶೇಖರಗೊಂಡಿತ್ತು.




ಕೋರ್ಟ್ ರೋಡ್, ಮಹಾಲಿಂಗೇಶ್ವರ ದೇವಸ್ಥಾನ ಆಸುಪಾಸಿನಲ್ಲಿ ತಗ್ಗಿನ ಜಾಗದ ಹಲವಾರು ಅಂಗಡಿಗಳಿಗೆ ನೀರು ನುಗ್ಗಿದೆ. ದೇವಸ್ಥಾನ ಪರಿಸರದಲ್ಲಿ ಜನರ ಸಂಚಾರಕ್ಕೆ ತೊಡಕಾಗಿದೆ. ಆದರೆ ಅರ್ಧ ಗಂಟೆಯ ಮಳೆಯ ಬಳಿಕ ಮಳೆಯೇ ಬಂದಿಲ್ಲವೇನೋ ಎನ್ನುವಂತೆ ಹಠಾತ್ ನಿಂತುಬಿಟ್ಟಿದೆ. ಪುತ್ತೂರು ಆಸುಪಾಸಿನಲ್ಲಿ ಅಷ್ಟು ಮಳೆಯಾಗಿಲ್ಲ. ಒಂದೇ ಕಡೆ ಮಳೆಯಾಗಿರುವುದು ಭಾರೀ ವಿಶೇಷ ಅಂತ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಡೀ ದಿನ ಮೋಡ ಕವಿದ ವಾತಾವರಣ ಇತ್ತು. ಸಂಜೆಯ ಹೊತ್ತಿಗೆ ಕಪ್ಪಗಿನ ಮೋಡ ಆವರಿಸಿದ್ದರಿಂದ ಭಾರೀ ಮಳೆಯಾಗುತ್ತೆ ಅನ್ನುವ ಸುಳಿವು ನೀಡಿತ್ತು. ಆದರೆ ಮಂಗಳೂರಿನಲ್ಲಿ ಹನಿ ಹನಿ ಸುರಿದಿದ್ದು ನೆಲ ಒದ್ದೆಯಾಗುವಷ್ಟು ಮಾತ್ರ ಮಳೆಯಾಗಿದೆ.
Heavy rains in Puttur causes havoc, water enters shops, most of the shops were filled with shops causing huge damage to many business people.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
12-09-26 01:10 pm
HK News Staffer
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
12-09-26 03:09 pm
HK News Staffer
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm