ಬ್ರೇಕಿಂಗ್ ನ್ಯೂಸ್
17-06-24 08:54 pm Mangalore Correspondent ಕರಾವಳಿ
ಉಳ್ಳಾಲ, ಜೂ.17: ನಮ್ಮ ದೇಶದಲ್ಲಿ ಎಲ್ಲಾ ಧರ್ಮೀಯರ ಹಬ್ಬಗಳಲ್ಲೂ ಎಲ್ಲರೂ ಬೆರೆತು ಸಂಭ್ರಮಿಸುವ ಸಂಸ್ಕೃತಿಗೆ ಶತ, ಶತಮಾನದ ಇತಿಹಾಸ ಇದೆ. ಇಂದು ಆ ಸಂಸ್ಕೃತಿಯು ಹದಗೆಟ್ಟಿದ್ದು, ಸಮಾಜವನ್ನ ಜೋಡಿಸುವ ಕೆಲಸ ನಮ್ಮಿಂದಲೇ ನಡೆಯಬೇಕಿದೆ ಎಂದು ಮಂಗಳೂರು ಶಾಂತಿ ಪ್ರಕಾಶನದ ಅಧ್ಯಕ್ಷರಾದ ಜನಾಬ್ ಮಹಮ್ಮದ್ ಕುಂಞ ಇಂಗಿತ ವ್ಯಕ್ತಪಡಿಸಿದರು.
ಸೋಮೇಶ್ವರದ ಪಶ್ಚಿಮ್ ರಿಹ್ಯಾಬಿಲಿಟೇಷನ್ ಆಶ್ರಮದಲ್ಲಿ ಉಳ್ಳಾಲದ ಹೆಲ್ಪ್ ಇಂಡಿಯಾ ಫೌಂಡೇಷನ್ ವತಿಯಿಂದ ನಡೆದ ಬಕ್ರೀದ್ ಹಬ್ಬ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು. ನಾವಿಂದು ಸಂಬಂಧಗಳನ್ನೇ ನಂಬದ ಸ್ಥಿತಿಯ ಕಾಲಘಟ್ಟದಲ್ಲಿದ್ದೇವೆ. ನಮ್ಮ ದೇಶದಲ್ಲಿ ಎಲ್ಲಾ ಧರ್ಮೀಯರ ಹಬ್ಬದಲ್ಲೂ ಪರಸ್ಪರ ಬೆರೆತು ಸಂಭ್ರಮಿಸುವ ಪದ್ಧತಿ ಶತ ಶತಮಾನದಿಂದ ಪಾಲಿಸಿ ಬಂದ ಸಂಸ್ಕಾರವಾಗಿದ್ದು ಈಗ ಆ ಸಂಭ್ರಮವು ದುರ್ಬಲಗೊಂಡಿದೆ. ಎಲ್ಲಾ ಧರ್ಮೀಯರು ಇಂದು ಹಬ್ಬಗಳನ್ನ ಆಚರಿಸಲೂ ಪೊಲೀಸರ ಅನುಮತಿ ಕೇಳುವ ಅನಿವಾರ್ಯತೆ ಎದುರಾಗಿದೆ.
ಹದಗೆಟ್ಟಿರುವ ಸಾಮರಸ್ಯವನ್ನು ನಾವೇ ಸರಿಪಡಿಸಿ ಸಮಾಜಗಳನ್ನು ಜೋಡಿಸಿ, ಹಿಂದಿನ ಸಂಸ್ಕಾರವನ್ನ ಮತ್ತೆ ಬೆಳೆಸಬೇಕಿದೆ. ಧರ್ಮ, ಹಬ್ಬಗಳು ಮನುಷ್ಯರ ಒಳಿತು, ಸಂಬಂಧಗಳನ್ನ ಗಟ್ಟಿಗೊಳಿಸುವುದಕ್ಕಿರುವುದೇ ಹೊರತು ದೇವರನ್ನ ಉದ್ಧಾರ ಪಡಿಸಲು ಅಲ್ಲ. ಧಾರ್ಮಿಕ ಮುಖಂಡರು, ಸಾಧು, ಸಂತರು ದೇವರುಗಳನ್ನ ಹೇಗೆ ಕಾಪಾಡಬೇಕೆಂದು ನಮಗೆ ಕಲಿಸಿಲ್ಲ. ಮನುಷ್ಯ ಹೇಗೆ ಬದುಕಬೇಕೆಂದು ಅವರು ಕಲಿಸಿದ್ದಾರೆ. ನಾವು ದೇವರಿಗೆ ನಿಕಟರಾಗಬೇಕಾದರೆ ಮನುಷ್ಯರನ್ನು ಪ್ರೀತಿ ಮಾಡುವ ಮೂಲಕವೇ ಸಾಧ್ಯ ಎಂದು ಪ್ರವಾದಿಯವರು ಸಂದೇಶ ನೀಡಿದ್ದರಲ್ಲದೆ, ಜಗತ್ತಿನ ಎಲ್ಲಾ ಧರ್ಮಗಳೂ ಅದೇ ಸಂದೇಶವನ್ನ ಸಾರಿವೆ. ಮನುಷ್ಯರು ಪರಸ್ಪರ ಪ್ರೀತಿಸಿ, ಬೆರೆತು ಬಾಳಲು ಹಬ್ಬಗಳು ಸೇತುವಾಗಿದೆ ಎಂದರು.
ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ರಾಜೇಶ್ ಮಾತನಾಡಿ ಜಗತ್ತಲ್ಲಿ ಎಲ್ಲರೂ ಅನಾಥರೇ, ಕೆಲವೊಂದು ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರಿಗೂ ತಾನು ಅನಾಥನೆಂಬ ಕೊರಗು ಕಾಡುತ್ತಿರುತ್ತದೆ. ಹಣ, ಶ್ರೀಮಂತಿಕೆಯು ಮನುಷ್ಯನಿಗೆ ಸುಖ ನಿದ್ದೆ, ನೆಮ್ಮದಿ ಕೊಡದು. ಮಲಗಿದಾಕ್ಷಣ ಸುಖ ನಿದ್ದೆಗೆ ಜಾರುವವರೇ ಜಗತ್ತಿನ ಪರಮ ಸುಖಿ ಜೀವಿಗಳಾಗಿದ್ದಾರೆ. ಆ ನಿಟ್ಟಿನಲ್ಲಿ ಹೆಲ್ಪ್ ಇಂಡಿಯಾದವರು ಅನಾಥಾಶ್ರಮ ವಾಸಿಗಳೊಂದಿಗೆ ಬಕ್ರೀದ್ ಹಬ್ಬವನ್ನ ಆಚರಿಸಿದ್ದು ನಿಜಕ್ಕೂ ಅರ್ಥಪೂರ್ಣ ಎಂದರು.
ಉಳ್ಳಾಲ ಪೊಲೀಸ್ ಠಾಣೆ ನಿರೀಕ್ಷಕರಾದ ಹೆಚ್.ಎನ್. ಬಾಲಕೃಷ್ಣ, ಪಶ್ಚಿಮ್ ರಿಹ್ಯಾಬಿಲಿಟೇಷನ್ ಸೆಂಟರ್ ಸ್ಥಾಪಕರಾದ ರೋಹಿತ್ ಸಾಂಕ್ಟಸ್, ಹೆಲ್ಪ್ ಇಂಡಿಯಾ ಫೌಂಡೇಷನ್ ಸ್ಥಾಪಕರಾದ ರಾಝಿಕ್ ಉಳ್ಳಾಲ್, ಪ್ರಮುಖರಾದ ಝಾಕಿರ್ ಇಕ್ಲಾಸ್, ಕೆಪಿಸಿಸಿ ಕಾರ್ಯದರ್ಶಿ ನಝೀರ್ ಬಾರ್ಲೆ, ಸಾಮಾಜಿಕ ಕಾರ್ಯಕರ್ತ ಸಿದ್ಧಿಕ್ ಮೊದಲಾದವರು ಉಪಸ್ಥಿತರಿದ್ದರು.
Mangalore Police permission for celebration of festivals, need to work on social integration says Muhammad Kunni in Bakrid festival.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm