ಬ್ರೇಕಿಂಗ್ ನ್ಯೂಸ್
25-06-24 11:49 am Mangaluru Correspondent ಕರಾವಳಿ
ಉಳ್ಳಾಲ, ಜೂ.25: ರಸ್ತೆ ಬದಿಯಲ್ಲಿ ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡು ನರಳುತ್ತಿದ್ದ ಬೀದಿ ಶ್ವಾನವೊಂದನ್ನ ಕಂಡು ಮರುಗಿದ ಮಹಿಳೆಯೋರ್ವರು ಸಮಾಜ ಸೇವಕ ಉದಯ ಗಟ್ಟಿಯವರ ಮುಖೇನ ಸ್ವಂತ ಖರ್ಚಲ್ಲಿ ಶ್ವಾನವನ್ನ ಮಂಗಳೂರಿನ ಶಕ್ತಿನಗರದ ಆನಿಮಲ್ ಕೇರ್ ಟ್ರಸ್ಟ್ ಗೆ ರವಾನಿಸಿದ್ದು, ವೈದ್ಯರ ಚಿಕಿತ್ಸೆಯಿಂದ ಶ್ವಾನವು ಇದೀಗ ಚೇತರಿಸಿಕೊಂಡಿದೆ.
ಸೋಮೇಶ್ವರ ಗ್ರಾಮದ ಪಿಲಾರು ಪಂಜಂದಾಯ ದೈವಸ್ಥಾನದ ಬಳಿಯ ನಿವಾಸಿ ಪ್ರಿಯಾ ಹರಿಕುಮಾರ್ ಶ್ವಾನವನ್ನ ರಕ್ಷಿಸಿದ ಮಹಿಳೆ. ಅವರು ಆದಿತ್ಯವಾರ ಮಧ್ಯಾಹ್ನದ ವೇಳೆ ದ್ವಿಚಕ್ರ ವಾಹನದಲ್ಲಿ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ ದಾರಿಯಲ್ಲಿ ಸಾಗುತ್ತಿದ್ದಾಗ ರಸ್ತೆ ಬದಿಯಲ್ಲಿ ಬೀದಿ ಶ್ವಾನವೊಂದು ಅಪಘಾತದಿಂದ ಗಾಯಗೊಂಡು ನರಳಾಟ ನಡೆಸುತ್ತಿರುವುದನ್ನ ಕಂಡು ಮರುಗಿದ್ದಾರೆ. ಪ್ರಿಯಾ ಅವರು ತಕ್ಷಣ ಮಂಗಳೂರಿನ ಆನಿಮಲ್ ಕೇರ್ ಟ್ರಸ್ಟ್ ಗೆ ಕರೆ ಮಾಡಿದ್ದು ಕರೆಯನ್ನ ಯಾರೂ ಸ್ವೀಕರಿಸಿರಲಿಲ್ಲ. ಒಂಟಿಯಾಗಿದ್ದ ಪ್ರಿಯಾ ಅಸಹಾಯಕ ಸ್ಥಿತಿಯಿಂದ ಮನೆಗೆ ಮರಳಿದ್ದರು. ಸಂಜೆ ವೇಳೆ ಧಾರಾಕಾರ ಮಳೆ ಸುರಿದಿದ್ದು ಶ್ವಾನವನ್ನ ನೆನೆದು ಮರುಗಿದ ಮಹಿಳೆ ಮತ್ತೆ ದೇರಳಕಟ್ಟೆಗೆ ತೆರಳಿದ್ದಾರೆ. ಬಿದ್ದ ಜಾಗದಲ್ಲೇ ಜಡಿಮಳೆಗೆ ನೆನೆಯುತ್ತಿದ್ದ ಶ್ವಾನವನ್ನ ಸ್ಥಳೀಯರ ಸಹಕಾರದಿಂದ ಪ್ಲಾಸ್ಟಿಕ್ ಹೊದಿಸಿ ಮಳೆಯಿಂದ ರಕ್ಷಣೆ ನೀಡಿ ಉಪಚರಿಸಿದ್ದಾರೆ. ಮತ್ತೊಮ್ಮೆ ಅವರು ಆನಿಮಲ್ ಕೇರ್ ಟ್ರಸ್ಟ್ ಗೆ ಕರೆ ಮಾಡಿದ್ದು ಕರೆ ಸ್ವೀಕರಿಸಿದ ಸಿಬ್ಬಂದಿ ಭಾನುವಾರ ಆಗಿರುವುದರಿಂದ ವಾಹನ ಚಲಾಯಿಸಲು ಚಾಲಕರಿಲ್ಲ. ಶ್ವಾನವನ್ನ ಮಂಗಳೂರಿಗೆ ತಂದರೆ ಸೂಕ್ತ ಚಿಕಿತ್ಸೆ ನೀಡುವುದಾಗಿ ಹೇಳಿದ್ದಾರೆ.

ಸಕಾಲದಲ್ಲಿ ಸಹಾಯಕ್ಕೆ ಧಾವಿಸಿದ ಉದಯ ಗಟ್ಟಿ
ಶ್ವಾನವನ್ನ ಹೇಗೆ ರಕ್ಷಿಸುವುದೆಂದು ಪ್ರಿಯಾ ಅವರಿಗೆ ದಿಕ್ಕು ತೋಚದೆ ಇದ್ದಾಗ ಸಮಾಜ ಸೇವಕ ಉದಯ ಗಟ್ಟಿ ಪಿಲಾರು ಅವರಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಉದಯ್ ಗಟ್ಟಿ ಸುರಿಯುತ್ತಿರುವ ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಗಾಯಗೊಂಡಿದ್ದ ಶ್ವಾನವನ್ನು ಆಟೋ ರಿಕ್ಷಾದಲ್ಲಿ ಹಾಕಿ ಶಕ್ತಿನಗರದ ಆನಿಮಲ್ ಕೇರ್ ಟ್ರಸ್ಟ್ ಗೆ ರವಾನಿಸಿದ್ದಾರೆ. ಅನಿಮಲ್ ಕೇರ್ ವೈದ್ಯರ ಚಿಕಿತ್ಸೆಯಿಂದ ಇದೀಗ ಶ್ವಾನವು ಚೇತರಿಸಿಕೊಂಡಿದ್ದು ಅನ್ನಾಹಾರ ಸೇವಿಸುತ್ತಿದೆ. ಮೂಕ ಪ್ರಾಣಿಯ ವೇದನೆಗೆ ಮರುಗಿದ ಮಹಿಳೆಯ ಕಾಳಜಿಗೆ ಸಮಾಜ ಸೇವಕ ಉದಯ ಗಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನನಗೆ ಮೂಕ ಪ್ರಾಣಿಗಳೆಂದರೆ ಬಹಳ ಇಷ್ಟ. ಅದರಲ್ಲೂ ಶ್ವಾನಗಳೆಂದರೆ ತುಂಬಾ ಪ್ರೀತಿ. ಈ ಹಿಂದೆನೂ ಗಾಯಗೊಂಡಿರುವ ಅನಾಥ ಪ್ರಾಣಿಗಳಿಗೆ ಅನಿಮಲ್ ಕೇರ್ ಟ್ರಸ್ಟ್ ನವರಿಂದಲೇ ಚಿಕಿತ್ಸೆ ಕೊಡಿಸಿದ್ದೇನೆ. ಸಾರ್ವಜನಿಕ ಸ್ಥಳಗಳಲ್ಲಿ ಕೆಲವರ ಮನೆ ಮುಂದುಗಡೆಯೇ ನಾಯಿ ಇತರ ಪ್ರಾಣಿಗಳು ಸತ್ತರೆ ಮೃತದೇಹದ ವಿಲೇವಾರಿಯನ್ನು ಯಾರೂ ನಡೆಸಲ್ಲ. ಇಂತಹ ಅನೇಕ ಸಂದರ್ಭಗಳಲ್ಲಿ ಸಮಾಜ ಸೇವಕರಾದ ಉದಯ ಗಟ್ಟಿ ಅವರಿಂದಲೇ ಅನಾಥ ಪ್ರಾಣಿಗಳ ಮೃತದೇಹಗಳನ್ನ ವಿಲೇವಾರಿ ಮಾಡಿಸಿದ್ದೇನೆ ಎಂದು ಪ್ರಿಯಾ ಹರಿಕುಮಾರ್ ಹೇಳಿದ್ದಾರೆ.
Mangalore derlakatte street dog suffering due to an accident rushed to animal care in shaktinagar by dog lovers. Priya Harikumar, a resident near Pilaru Panjandaya deity of Someswara village, was the woman who rescued the dog. she was traveling on his two-wheeler on the way to Yenepoya Hospital in Deralkatte on Sunday afternoon when he saw a stray dog suffering from an accident on the side of the road.
11-02-26 01:34 pm
Bangalore Correspondent
ಸ್ತನ ಕ್ಯಾನ್ಸರ್ ಬಗ್ಗೆ ದೇಶವ್ಯಾಪಿ ಜಾಗೃತಿ ; ಕಲಬರಗ...
11-02-26 01:09 pm
ಛೆ… ಇವಳೆಂಥ ಮಗಳು! ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬ...
09-02-26 07:20 pm
ಶಿವಮೊಗ್ಗದ ಕಾರು ಚಾಲಕನಲ್ಲಿ 19 ಬಾಡಿಗೆ ಬ್ಯಾಂಕ್ ಖಾ...
09-02-26 01:30 pm
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರ...
09-02-26 12:29 pm
11-02-26 04:22 pm
HK News Desk
ಮಥುರಾದಲ್ಲಿ ಮೂವರು ಮಕ್ಕಳಿಗೆ ವಿಷವುಣಿಸಿ ದಂಪತಿ ಸಾವ...
10-02-26 07:31 pm
ಅಡೂರು ಮೂಲದ ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು...
10-02-26 02:15 pm
ರಾಮ ಮಂದಿರ ಸ್ಫೋಟಕ್ಕೆ ಸಂಚು ರೂಪಿಸಿದ್ದ ಕೈದಿ ಫರೀದಾ...
10-02-26 11:44 am
ಕೆನಡಾದಲ್ಲಿ ಗುಂಡಿಟ್ಟು ಕನ್ನಡಿಗ ಸಾಫ್ಟ್ವೇರ್ ಇಂಜಿ...
09-02-26 10:25 pm
11-02-26 03:45 pm
Mangalore Correspondent
Love Jihad, Mangalore: ಬಿಎಸ್ಸಿ ಕ್ರಿಮಿನಾಲಜಿ ಓದ...
10-02-26 11:03 pm
Mangaore, Marriage Fraud: ಹಲವಾರು ಹೆಂಡಿರ ಮುದ್ದ...
10-02-26 08:27 pm
Oman Accident: ಒಮಾನ್ ನಲ್ಲಿ ಭೀಕರ ಅಪಘಾತ ; ಕಾಪು...
09-02-26 11:20 pm
Mangalore Accident, Bus: ನಂತೂರಿನಲ್ಲಿ ಅಪಘಾತಕ್ಕ...
09-02-26 08:02 pm
10-02-26 09:05 pm
Bangalore Correspondent
Peter Caddy, Arrest: ಉದ್ಯಮಿಗಳಿಗೆ ಸಾಲ ಕೊಡಿಸುವು...
10-02-26 04:38 pm
Belthangady Fake Kidnap: ಕಾಲೇಜು ವಿದ್ಯಾರ್ಥಿನಿ...
10-02-26 10:59 am
ಜಾಲತಾಣದಲ್ಲೇ ಪಡ್ಡೆ ಹುಡುಗರಿಗೆ ಬಲೆ, ಖತರ್ನಾಕ್ ಪ್...
09-02-26 02:04 pm
ಬೆಳ್ತಂಗಡಿ ; ಕಾಲೇಜು ತೆರಳುತ್ತಿದ್ದ ಅಪ್ರಾಪ್ತ ಯುವತ...
09-02-26 11:26 am