ಬ್ರೇಕಿಂಗ್ ನ್ಯೂಸ್
03-07-24 08:39 pm Mangalore Correspondent ಕರಾವಳಿ
ಮಂಗಳೂರು, ಜುಲೈ.3: ಬಲ್ಮಠದ ನಿರ್ಮಾಣ ಹಂತದ ಕಟ್ಟಡದ ತಳಪಾಯದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಧರೆ ಕುಸಿದ ಪ್ರಕರಣದಲ್ಲಿ ಮಣ್ಣಿನಡಿ ಸಿಲುಕಿದ್ದ ಮತ್ತೊಬ್ಬ ಕಾರ್ಮಿಕನ ಶರೀರವನ್ನು ಆರೂವರೆ ಗಂಟೆಗಳ ಪರಿಶ್ರಮದ ಬಳಿಕ ರಕ್ಷಣಾ ತಂಡ ಮೇಲೆತ್ತಿದೆ. ಅಷ್ಟರಲ್ಲಿ ಮಣ್ಣಿನಡಿಯಲ್ಲೇ ಕಾರ್ಮಿಕ ಉಸಿರು ಚೆಲ್ಲಿದ್ದಾನೆ.
ಬಲ್ಮಠದ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ವಾಣಿಜ್ಯ ಕಟ್ಟಡವೊಂದನ್ನು ಕಟ್ಟುತ್ತಿದ್ದು, ಅದರ ತಳಪಾಯದ ಕೆಲಸಕ್ಕಾಗಿ 20 ಅಡಿ ಆಳಕ್ಕೆ ಅಗೆಯಲಾಗಿದೆ. ಹೊಂಡದಲ್ಲಿ ಒಂದು ಕಡೆಯಿಂದ ತಳಪಾಯದ ಕಾಂಕ್ರೀಟ್ ಕೆಲಸ ಮಾಡುತ್ತಿದ್ದು, ಇದರ ನಡುವಲ್ಲೇ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಪಾರ್ಶ್ವದಲ್ಲಿ ಧರೆ ಕುಸಿದು ಬಿದ್ದಿತ್ತು. ಸುಮಾರು ಎಂಟಡಿ ಎತ್ತರಕ್ಕೆ ಸಪೂರವಾಗಿದ್ದ ಜಾಗದಲ್ಲಿ ಮಣ್ಣು ಕುಸಿದಿದ್ದು, ಬಿಹಾರ ಮೂಲದ ಇಬ್ಬರು ಕಾರ್ಮಿಕರು ಅದರೊಳಗೆ ಸಿಲುಕಿದ್ದರು.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸದಸ್ಯರು ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಮಧ್ಯಾಹ್ನ ಒಂದೂವರೆ ಗಂಟೆಗೆ ಘಟನೆ ನಡೆದಿದ್ದು, ಎರಡೂವರೆ ಗಂಟೆ ಹೊತ್ತಿಗೆ ರಾಜಕುಮಾರ್(18) ಎನ್ನುವ ಒಬ್ಬ ಕಾರ್ಮಿಕನನ್ನು ರಕ್ಷಣೆ ಮಾಡಲಾಗಿತ್ತು. ಆತನನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸೇರಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿರಿಸಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದೇ ವೇಳೆ, ಮತ್ತೊಬ್ಬ ಕಾರ್ಮಿಕನ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿತ್ತು. ಸತತ ಆರೂವರೆ ಗಂಟೆಗಳ ಪರಿಶ್ರಮದ ಬಳಿಕ ಸಂಜೆ 7.30ರ ವೇಳೆಗೆ ಚಂದನ್ ಎಂಬ ಮತ್ತೊಬ್ಬ ಕಾರ್ಮಿಕನ ಶರೀರ ಮೇಲೆತ್ತಲಾಗಿದೆ. ಅಷ್ಟರಲ್ಲಿ ಕಾರ್ಮಿಕ ಸಾವನ್ನಪ್ಪಿದ್ದಾನೆ. ಮಂಗಳೂರು ನಗರದ ಹೃದಯಭಾಗ ಬಲ್ಮಠದ ರಸ್ತೆ ಬದಿಯಲ್ಲೇ ಘಟನೆ ನಡೆದಿದ್ದರಿಂದ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಜನರನ್ನು ಚದುರಿಸಲು ಪೊಲೀಸರು ಅಷ್ಟೇ ಸಂಖ್ಯೆಯಲ್ಲಿ ಸೇರಿದ್ದರು. ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಥಳಕ್ಕೆ ಬಂದು ಕಾರ್ಯಾಚರಣೆಗೆ ನೇತೃತ್ವ ನೀಡಿದ್ದರು. ನಗರ ಮಧ್ಯದಲ್ಲೇ ಘಟನೆ ರಕ್ಷಣಾ ನಡೆದಿದ್ದರೂ ಕಾರ್ಯಾಚರಣೆ ವಿಳಂಬವಾಗಿದ್ದರಿಂದ ಮತ್ತೊಬ್ಬ ಕಾರ್ಮಿಕನ ಉಳಿವು ಸಾಧ್ಯವಾಗಲಿಲ್ಲ. ಮಳೆ ಇರುವಾಗ ಅಪಾಯ ಇರುವಲ್ಲಿ ಕಾರ್ಮಿಕರನ್ನು ಬಳಸಿ ಕಟ್ಟಡ ನಿರ್ಮಾಣ ಕೆಲಸ ಮಾಡಲು ಅವಕಾಶ ನೀಡಬಾರದಿತ್ತು. ಆಡಳಿತದ ನಿರ್ಲಕ್ಷ್ಯದಿಂದಲೋ ಏನೋ, ಒಬ್ಬ ಕಾರ್ಮಿಕನ ಸಾವಾಗಿದೆ.
One of the workers, who got trapped under the mud due to a landslide at a construction site at Balmatta, has died. The National Disaster Response Force (NDRF) retrieved the body of one worker. The deceased has been identified as Chandan Kumar, a native of Uttar Pradesh.
04-07-24 06:03 pm
HK News Desk
ಡೆಂಗಿ ಪರೀಕ್ಷೆಗೆ ಹೆಚ್ಚಿನ ಬೆಲೆ ವಿಧಿಸುತ್ತಿದ್ದ ಆಸ...
03-07-24 09:23 pm
Kolar crime, College Baby; ಕಾಲೇಜಿನ ಶೌಚಾಲಯದಲ್ಲ...
03-07-24 08:07 pm
VRL Vijay Sankeshwar daughter husband, crime:...
02-07-24 09:58 pm
Kolar baby delivery college, crime: ಕೋಲಾರ ; ಕ...
02-07-24 08:38 pm
05-07-24 03:55 pm
HK News Desk
15 ವರ್ಷಗಳ ಬಳಿಕ ಮಹಿಳೆ ನಾಪತ್ತೆ ಪ್ರಕರಣ ಭೇದಿಸಿದ ಪ...
04-07-24 09:14 pm
ಜಾರ್ಖಂಡಿನಲ್ಲಿ ಮತ್ತೆ ಅಧಿಕಾರ ಗಿಟ್ಟಿಸಿದ ಹೇಮಂತ್ ಸ...
04-07-24 05:57 pm
ಬಿಹಾರದಲ್ಲಿ 17 ದಿನಗಳ ಅಂತರದಲ್ಲಿ 12 ಸೇತುವೆ ಕುಸಿತ...
04-07-24 03:40 pm
ಸೌದಿ ಅರೇಬಿಯಾದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಕ...
04-07-24 12:05 pm
05-07-24 11:55 pm
Mangaluru Correspondent
ಕೋಟ ಪರಿಷತ್ ಜಾಗಕ್ಕೆ ಸದ್ಯದಲ್ಲೇ ಚುನಾವಣೆ ; ಕಾಂಗ್ರ...
05-07-24 10:48 pm
Mangalore rain, Balmatta landslide: ಬಲ್ಮಠ ಮಣ್...
05-07-24 09:49 pm
Dinesh Gundu Rao, Mangalore: ಕೆಡಿಪಿ ಸಭೆ ; ಶಿಬ...
05-07-24 07:46 pm
Kumble Shridhar Rao, Mangalore: ತಮ್ಮ ಗಡಸು ಕಂಠ...
05-07-24 06:04 pm
05-07-24 10:34 pm
Mangalore Correspondent
WhatsApp fraud, crime, Udupi: ವಾಟ್ಸ್ ಆ್ಯಪ್ನ...
04-07-24 10:18 pm
Mangalore Ulaibettu Dacoity case, 10 arrested...
04-07-24 07:41 pm
Bitcoin scam, Mangalore, fraud: ಬಿಟ್ ಕಾಯಿನ್ ಹ...
03-07-24 08:04 pm
Mysuru crime: ಮೈಸೂರು ; ಮಗನನ್ನ ಕೊಂದ ಅಳಿಯ, ಅಗಲಿ...
02-07-24 06:03 pm