ಬ್ರೇಕಿಂಗ್ ನ್ಯೂಸ್
16-09-24 09:09 pm Mangalore Correspondent ಕರಾವಳಿ
ಮಂಗಳೂರು, ಸೆ.16: ತಾಪಮಾನ ಹೆಚ್ಚಳದಿಂದಾಗಿ ಭೂಮಿಯ ಮೇಲೆ ತೀವ್ರ ತೆರನಾದ ಪರಿಣಾಮಗಳಾಗುತ್ತಿದ್ದು, ಒಂದೆಡೆ ವಾತಾವರಣದಲ್ಲಿ ಉಷ್ಣತೆ ಹೆಚ್ಚಳ ಮತ್ತು ಅತಿಯಾದ ಮಳೆಯಿಂದ ವಿಕೋಪಗಳು ಉಂಟಾಗಲಿವೆ. ಇದರಿಂದಾಗಿ ಮುಂದಿನ 20 ವರ್ಷಗಳಲ್ಲಿ ಜಗತ್ತಿನ ಒಟ್ಟು ಜನಸಂಖ್ಯೆಯ 70 ಶೇಕಡಾ ಜನರು ಪೀಡಿತರಾಗಲಿದ್ದಾರೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ತಾಪಮಾನ ಹೆಚ್ಚಳದ ಬಗ್ಗೆ ಗಂಭೀರ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ, ಜಗತ್ತಿನ 70 ಶೇಕಡಾ ಜನರು ತೀವ್ರ ಪೀಡನೆಗೆ ಒಳಗಾಗಲಿದ್ದಾರೆ. ಗಂಭೀರ ಕ್ರಮಗಳನ್ನು ತೆಗೆದುಕೊಂಡರೆ ಇದರಲ್ಲಿ 20 ಶೇಕಡಾ ಪರಿಣಾಮ ಇಳಿಕೆಯಾಗಲಿದೆ ಎಂದು ಸೆಂಟರ್ ಫಾರ್ ಇಂಟರ್ ನ್ಯಾಶನಲ್ ಕ್ಲೈಮೇಟ್ ರಿಸರ್ಚ್ ಸಂಸ್ಥೆಯ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಅತಿಯಾದ ಇಂಗಾಲದ ಹೊಸ ಸೂಸುವಿಕೆಯಿಂದಾಗಿ ಈಗಾಗಲೇ ಭೂಮಿಯ ಸಮತೋಲನ ತಪ್ಪಿದೆ. ಅತಿ ವೃಷ್ಟಿ, ಬರದಂತಹ ಸನ್ನಿವೇಶಗಳು ಎದುರಾಗಿವೆ. ಭೀಕರ ಮಳೆಯಿಂದಾಗಿ ಬಸವಳಿದರೆ, ಅತಿಯಾದ ಬಿಸಿಲಿನಿಂದಾಗಿ ಜನರು ತತ್ತರಿಸುವ ಸ್ಥಿತಿ ಬಂದಿದೆ. ಈ ರೀತಿಯ ತೊಂದರೆಗಳು ಮುಂದಿನ 20 ವರ್ಷಗಳಲ್ಲಿ ಭೀಕರ ರೂಪ ತಾಳಲಿವೆ. ವಿಶ್ವ ರಾಷ್ಟ್ರಗಳು ಈ ಬಗ್ಗೆ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಏಶ್ಯಾ ರಾಷ್ಟ್ರಗಳಲ್ಲಿ ವಾಯು ಮಾಲಿನ್ಯ ಹೆಚ್ಚಿದ್ದು, ಇದರಿಂದ ಮನುಷ್ಯನ ಮೇಲೆ ನೇರ ಪರಿಣಾಮ ಬೀರಲಿದೆ. ಇದಲ್ಲದೆ, ಜಾಗತಿಕ ತಾಪಮಾನಕ್ಕೂ ದೊಡ್ಡ ಕೊಡುಗೆ ನೀಡುತ್ತಿದೆ. ಮಾಲಿನ್ಯಕಾರಿ ಅನಿಲ ಬಿಡುಗಡೆಯನ್ನು ಅಗತ್ಯವಾಗಿ ಸ್ವಚ್ಛ ಮಾಡಬೇಕಿದೆ ಎಂದು ನೇಚರ್ ಜಿಯೋ ಸೈನ್ಸ್ ನಲ್ಲಿ ಪ್ರಕಟವಾದ ವರದಿಯಲ್ಲಿ ವಿಜ್ಞಾನಿಗಳು ಬೊಟ್ಟು ಮಾಡಿದ್ದಾರೆ. ಜಾಗತಿಕ ತಾಪಮಾನಕ್ಕೆ ಕೊಡುಗೆ ನೀಡಬಲ್ಲ ವಾಯುಮಾಲಿನ್ಯದ ಬಗ್ಗೆ ಅಗತ್ಯವಾಗಿ ಮುನ್ನೆಚ್ಚರಿಕೆ ವಹಿಸಬೇಕೆಂದು ವಿಜ್ಞಾನಿಗಳು ಒತ್ತಾಯ ಮಾಡಿದ್ದಾರೆ.
Nearly three-quarters of the global population could face rapid and intense changes in extreme weather patterns within the next two decades unless greenhouse gas emissions are significantly reduced, according to a new study published in Nature Geoscience.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm