ಬ್ರೇಕಿಂಗ್ ನ್ಯೂಸ್
08-11-25 08:31 pm Mangalore Correspondent ಕರಾವಳಿ
ಮಂಗಳೂರು, ನ.8 : ಸುರತ್ಕಲ್ ಗುಡ್ಡೆಕೊಪ್ಲ ಸಮುದ್ರ ತೀರದಲ್ಲಿ ಆರು ವರ್ಷಗಳ ಹಿಂದೆ ಮರಳಿನಲ್ಲಿ ಹೂತು ಹೋಗಿದ್ದ ಭಗವತಿ ಪ್ರೇಮ್ ಡ್ರೆಜ್ಜರ್ ಹಡಗು ಬಹುತೇಕ ಭಾಗ ಈಗ ತಳ ಸೇರಿಕೊಂಡಿದೆ. ಹಡಗನ್ನು ಇನ್ನೂ ತೆಗೆಯದೇ ಇರುವುದರಿಂದ ಸ್ಥಳೀಯವಾಗಿ ಮೀನುಗಾರಿಕೆಗೆ ಅಡಚಣೆ ಎದುರಾಗಿದೆ. ಅಲ್ಲದೆ, ಸ್ಥಳೀಯ ನಿವಾಸಿಗಳ ಆತಂಕಕ್ಕೂ ಕಾರಣವಾಗಿದೆ.
ಪಣಂಬೂರು ಬಂದರಿನಲ್ಲಿ ಹೂಳೆತ್ತುವ ಗುತ್ತಿಗೆ ಪಡೆದಿದ್ದ ಮುಂಬೈ ಮೂಲದ ಕಂಪನಿಗೆ ಈ ಡ್ರೆಜ್ಜರ್ ಸೇರಿದ್ದು ತಾಂತ್ರಿಕ ಕಾರಣಗಳಿಂದಾಗಿ ತೀರಕ್ಕೆ ಬಂದು ಮರಳಿನಲ್ಲಿ ಹೂತು ಹೋಗಿದ್ದರಿಂದ ಬಾಕಿಯಾಗಿತ್ತು. 2019ರ ಅಕ್ಟೋಬರ್ 29ರಂದು ಹಡಗನ್ನು ನಿಲ್ಲಿಸಲಾಗಿತ್ತು. ಬಳಿಕ ಬೇರೆಡೆ ಕೊಂಡೊಯ್ಯಲು ಸಾಧ್ಯವಾಗದೆ ಸ್ಥಳದಲ್ಲೇ ಹಡಗನ್ಹು ಒಡೆದು ಹೊರ ತೆಗೆಯುವ ಬಗ್ಗೆ ಹಡಗು ಕಂಪನಿ ಭರವಸೆ ನೀಡಿತ್ತು. ಆದರೆ ಹಡಗನ್ನು ಪೂರ್ತಿ ಒಡೆದು ತೆಗೆಯುವುದು ಸಾಧ್ಯವಾಗಲಿಲ್ಲ.


ಒಂದು ವರ್ಷದ ಹಿಂದೆ ಬಾರ್ಜ್ ಆಧರಿತ ಕ್ರೇನ್ ಮೂಲಕ ಹಡಗನ್ನು ಒಡೆಯುವ ಯತ್ನ ನಡೆದಿತ್ತು. ಡ್ರೆಜ್ಜರ್ನ ಒಂದು ಭಾಗದಷ್ಟು ಮಾತ್ರ ತೆರವು ಮಾಡಲಾಗಿದ್ದು, ಎರಡು ಭಾಗ ಇನ್ನೂ ಸಮುದ್ರದಲ್ಲೇ ಇದೆ. ಶಾಸಕ ಭರತ್ ಶೆಟ್ಟಿ ಮಧ್ಯಸ್ಥಿಕೆಯಲ್ಲಿ ಹಡಗು ಕಂಪನಿ ಜೊತೆಗಿನ ಮಾತುಕತೆಯಲ್ಲಿ ಶೀಘ್ರದಲ್ಲೇ ತೆರವು ಕಾರ್ಯ ಮುಗಿಸಲು ಸೂಚಿಸಲಾಗಿದ್ದರೂ, ಚಂಡಮಾರುತ ಹಾಗೂ ತಾಂತ್ರಿಕ ತೊಂದರೆಗಳಿಂದ ವಿಳಂಬವಾಗಿದೆ.
ಬಾರ್ಜ್ ಆಧರಿತ ಕ್ರೇನ್ ಮತ್ತೆ ಸುರತ್ಕಲ್ ಬರಲಿದೆ ಎನ್ನಲಾಗುತ್ತಿದ್ದು ಮುಂಬೈನಿಂದ ಕಟ್ಟರ್ಸ್ ಹಾಗೂ ಕಾರ್ಮಿಕರ ತಂಡ ಆಗಮಿಸಲಿದೆ ಅಂತೆ. ಡ್ರೆಜ್ಜರ್ ಹಡಗು ನಿಂತಿರುವ ಜಾಗ ಮೀನುಗಾರಿಕೆಯ ಪ್ರಮುಖ ವಲಯ. ಆದರೆ ಡ್ರೆಜ್ಜರ್ ಅವಶೇಷದಿಂದಾಗಿ ಈ ಭಾಗದಲ್ಲಿ ಮೀನುಗಾರಿಕೆ ನಡೆಸಿದರೆ ಬಲೆಗಳಿಗೆ ಹಾನಿಯಾಗುತ್ತಿದೆ. ಮೀನುಗಾರರು ಅಸಹಾಯಕರಾಗಿದ್ದಾರೆ ಎಂದು ಗುಡ್ಡೆಕೊಪ್ಲ ಮೊಗವೀರ ಸಭಾದ ಅಧ್ಯಕ್ಷ ಕೇಶವ ಕುಂದರ್ ಹೇಳಿದ್ದಾರೆ. ಒಂದೆಡೆ ಡ್ರೆಜ್ಜರ್ನ ಅವಶೇಷದಿಂದ ಮೀನುಗಾರರು ಸಂಕಷ್ಟದಲ್ಲಿದ್ದರೆ, ಪ್ರವಾಸಿಗರಿಗೆ ಮಾತ್ರ ಕುತೂಹಲದ ಕೇಂದ್ರವಾಗಿದೆ. ಡ್ರೆಜ್ಜರ್ ವೀಕ್ಷಣೆಗೆ ಹೊರ ಜಿಲ್ಲೆಗಳಿಂದಲೂ ಜನರು ಬರುತ್ತಿದ್ದಾರೆ. ಈಗ ಪ್ರೀವೆಡ್ಡಿಂಗ್ ಫೋಟೋ ಶೂಟ್ ತಾಣವಾಗಿಯೂ ಪ್ರಸಿದ್ಧಿ ಪಡೆದಿದೆ ಎಂದು ಸ್ಥಳೀಯರು ಹೇಳುತ್ತಾರೆ.
The Bhagwati Prem dredger ship, which got stuck in the sand at Surathkal’s Gudddekopla beach nearly six years ago, is now almost completely buried under the sand. However, the stranded vessel continues to disrupt fishing activities and has become a cause of concern for local fishermen and residents.
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
21-07-26 09:03 pm
HK News Staffer
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
ಕೇರಳದಲ್ಲಿ ಫುಟ್ಬಾಲ್ ಜ್ವರ ; ಮಧ್ಯರಾತ್ರಿ ಫೈನಲ್ ವೀ...
19-07-26 09:37 pm
21-07-26 11:02 pm
HK News Desk
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
22-07-26 10:55 am
HK News Staffer
₹200 ಕೋಟಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ...
22-07-26 10:53 am
Lavanya Murder case: ಲಾವಣ್ಯ ಹತ್ಯೆ ಪ್ರಕರಣ ; ಒಂ...
21-07-26 08:03 pm
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಶುರುವಾದ ಪ್ರೀತಿ ; ಮದು...
21-07-26 04:54 pm
Ravi Shetty, Accident, Mangalore: ನಿಯಂತ್ರಣ ತಪ...
21-07-26 12:18 pm