ಬ್ರೇಕಿಂಗ್ ನ್ಯೂಸ್
12-10-24 07:08 pm Mangalore Correspondent ಕರಾವಳಿ
ಮಂಗಳೂರು, ಅ.12: ಜರ್ಮನಿಯಲ್ಲಿ ಸಾಫ್ಟ್ ವೇರ್ ಕಂಪನಿಯನ್ನು ಹುಟ್ಟುಹಾಕಿ ಪಾಲುದಾರಿಕೆಯಲ್ಲಿ ಮುನ್ನಡೆಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಉಜಿರೆ ಬಳಿಯ ಅತ್ತಾಜೆ ನಿವಾಸಿ ಆದಿತ್ಯ ಭಟ್ (29) ಹಠಾತ್ ಹೃದಯಾಘಾತಕ್ಕೀಡಾಗಿ ಸಾವು ಕಂಡಿದ್ದಾರೆ. ಮದುವೆಯಾಗಿ ಬಾಳಿ ಬದುಕಬೇಕಿದ್ದ ಆದಿತ್ಯ ಭಟ್ ಎದೆನೋವಿನ ಬಗ್ಗೆ ಸಣ್ಣ ನಿರ್ಲಕ್ಷ್ಯ ಮಾಡಿದ್ದರಿಂದ ಜೀವವನ್ನೇ ಕಳಕೊಂಡಿದ್ದಾರೆ.
ಆದಿತ್ಯ ಭಟ್ ಅವರು ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಇ ಮುಗಿಸಿ 2020ರಲ್ಲಿ ಜರ್ಮನಿಗೆ ತೆರಳಿ, ಅಲ್ಲಿ ಎಂಎಸ್ಸಿ ಪೂರೈಸಿದ್ದರು. ಆನಂತರ, ಜರ್ಮನಿಯದ್ದೇ ತನ್ನ ಕ್ಲಾಸ್ ಮೇಟ್ ಒಬ್ಬರ ಜೊತೆಗೂಡಿ 2022ರಲ್ಲಿ ಸ್ಟಾರ್ಟಪ್ ಕಂಪನಿಯನ್ನು ಆರಂಭಿಸಿದ್ದರು. 2023ರ ಡಿಸೆಂಬರ್ ತಿಂಗಳಲ್ಲಿ ತಂದೆಗೆ ಹುಷಾರಿಲ್ಲವೆಂದು ಊರಿಗೆ ಬಂದು ಉಜಿರೆ ಸಮೀಪದ ಅತ್ತಾಜೆಯ ಮನೆಯಲ್ಲೇ ನೆಲೆಸಿದ್ದರು. ಜೊತೆಗೆ, ತನ್ನೂರಿಂದಲೇ ಜರ್ಮನಿಗೆ ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಿದ್ದರು.
ಇದರ ಜೊತೆಗೆ, ತಂದೆ ರಮೇಶ್ ಭಟ್ 30 ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಅತ್ತಾಜೆ ಪಾಲಿಮರ್ಸ್ ಹೆಸರಿನ ರಬ್ಬರ್ ಫ್ಯಾಕ್ಟರಿ ಕೆಲಸ ಮತ್ತು ತೋಟವನ್ನೂ ನೋಡಿಕೊಂಡಿದ್ದರು. ನಿನ್ನೆ ಶುಕ್ರವಾರ, ರಬ್ಬರ್ ಫ್ಯಾಕ್ಟರಿಯಲ್ಲಿ ಆಯುಧ ಪೂಜೆ ಮುಗಿಸಿ ಉಜಿರೆಯಲ್ಲಿ ಶಾರದಾ ಪೂಜೆಯಲ್ಲಿ ಪಾಲ್ಗೊಂಡು ಸಂಜೆ ಹೊತ್ತಿಗೆ ಮನೆಗೆ ಮರಳಿದ್ದರು. ಅದೇ ವೇಳೆಗೆ, ಆದಿತ್ಯ ಭಟ್ ಮನೆಯಲ್ಲಿ ಕುಸಿದು ಬಿದ್ದಿದ್ದು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸಾವು ಕಂಡಿದ್ದಾರೆ.
ಆದಿತ್ಯ ಭಟ್ ಅವರಿಗೆ ಮದುವೆ ನಿಶ್ಚಯ ಆಗಿತ್ತು. ಮುಂದಿನ ಡಿಸೆಂಬರ್ ನಲ್ಲಿ ಮದುವೆಯಾಗುವ ಬಗ್ಗೆ ಸಿದ್ಧತೆ ನಡೆದಿತ್ತು. ಈ ನಡುವೆಯೇ ಆದಿತ್ಯ ಭಟ್ ಇಹಲೋಕ ತ್ಯಜಿಸಿದ್ದು, ಕುಟುಂಬಸ್ಥರಿಗೆ ತೀವ್ರ ಶಾಕ್ ಉಂಟು ಮಾಡಿದೆ. ಆದಿತ್ಯ ಅವರಿಗೆ ಎರಡು ದಿನಗಳ ಹಿಂದೆಯೇ ಎದೆನೋವು ಕಾಣಿಸಿಕೊಂಡಿತ್ತು. ಗ್ಯಾಸ್ ಟ್ರಬಲ್ ಎಂದೆನಿಸಿ ಮನೆಯಲ್ಲೇ ಮದ್ದು ಮಾಡಿದ್ದರು. ಆದರೆ, ಅದೇ ನಿರ್ಲಕ್ಷ್ಯ ಯುವಕನ ಜೀವ ಕಿತ್ತುಕೊಂಡಿದೆ.
ಆದಿತ್ಯ ಭಟ್ ಅವರು ಕಳೆದೊಂದು ವರ್ಷದಿಂದ ರಬ್ಬರ್ ಫ್ಯಾಕ್ಟರಿಯನ್ನು ನವೀಕರಣ ಮಾಡುತ್ತಿದ್ದರು. ಆಧುನಿಕ ಮಾದರಿಯ ಯಂತ್ರೋಪಕರಣ ಬಳಸಿ ದೊಡ್ಡದಾಗಿಸಲು ಪ್ಲಾನ್ ಹಾಕಿದ್ದರು. ಇದಕ್ಕಾಗಿ ಸಾಕಷ್ಟು ಕೆಲಸಗಳನ್ನೂ ಮಾಡಿದ್ದರು. ಇನ್ನೊಂದು ವರ್ಷದಲ್ಲಿ ಜರ್ಮನಿಯ ಸಾಫ್ಟ್ ವೇರ್ ಕಂಪನಿಯನ್ನು ಮಂಗಳೂರಿಗೆ ಸ್ಥಳಾಂತರಿಸುವ ಯೋಜನೆಯನ್ನೂ ಹಾಕ್ಕೊಂಡಿದ್ದರು. ಆದರೆ ಬಾಳಿ ಬದುಕಬೇಕಿದ್ದ ಯುವಕ ಹಠಾತ್ತಾಗಿ ಜೀವ ಕಳಕೊಂಡಿದ್ದಾರೆ.
Mangalore 29 year old software engineer dies of heart attack at ujre. The deceased has been identified as Aditya Bhat. His marriage also was fixed in few months time. He had a software company in Germany.
12-08-25 10:39 pm
Bangalore Correspondent
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
KN Rajanna resigns: ಸಹಕಾರ ಸಚಿವ ಕೆ.ಎನ್ ರಾಜಣ್ಣ...
11-08-25 03:29 pm
12-08-25 02:49 pm
HK News Desk
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
ಮದುವೆಯಾಗುತ್ತೇನೆಂದು ನಂಬಿಸಿ ಮೋಸ, ಇಸ್ಲಾಮಿಗೆ ಮತಾಂ...
11-08-25 08:55 pm
Rabies Death, Supreme Court: ರಾಜಧಾನಿಯಲ್ಲಿ ರೇಬ...
11-08-25 02:48 pm
12-08-25 11:06 pm
Mangalore Correspondent
ಕೆಂಪು ಕಲ್ಲು ಗಣಿಗಾರಿಕೆಗೆ ಶೀಘ್ರದಲ್ಲೇ ಹೊಸ ನಿಯಮ ;...
12-08-25 08:34 pm
Pilikula Zoo Director, Mangalore Police: ಪಿಲಿ...
12-08-25 01:49 pm
Mangalore, Manipal Health Card, Silver Jubile...
12-08-25 01:09 pm
Dharmasthala Case, SIT, Radar: ಧರ್ಮಸ್ಥಳ 13ನೇ...
11-08-25 07:39 pm
12-08-25 12:36 pm
Bangalore Correspondent
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm