ಬ್ರೇಕಿಂಗ್ ನ್ಯೂಸ್
17-10-24 04:34 pm Mangalore Correspondent ಕರಾವಳಿ
ಮಂಗಳೂರು, ಅ.17: ವಿಶ್ವಕ್ಕೆ ಮಹಾಕಾವ್ಯ ರಾಮಾಯಣವನ್ನು ಕೊಟ್ಟ ವಾಲ್ಮೀಕಿ ಮಹರ್ಷಿಯವರ ಜಯಂತಿಯನ್ನು ರಾಜ್ಯದಲ್ಲಿ ದುಃಖದಲ್ಲಿ ಆಚರಿಸುವ ಸ್ಥಿತಿ ಬಂದಿದೆ. ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹ ಪರಿಸ್ಥಿತಿ ತಂದಿಟ್ಟಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆಸಿದ ವ್ಯಕ್ತಿಯೇ ಜೈಲಿನಿಂದ ಮುಖ್ಯಮಂತ್ರಿಯನ್ನು ಸನ್ಮಾನಿಸಿದ್ದಾರೆ, ಆಮೂಲಕ ಹಗರಣದಲ್ಲಿ ಸಿದ್ದರಾಮಯ್ಯ ಅವರೂ ಭಾಗಿ ಎಂದು ಸಾಬೀತು ಪಡಿಸಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಅವರು, ವಾಲ್ಮೀಕಿ ಮಹರ್ಷಿಯವರ ಬದುಕು, ಆದರ್ಶ ದಾರಿದೀಪ ಆಗಬೇಕಿತ್ತು. ಆದರೆ ರಾಜ್ಯ ಸರ್ಕಾರ ವಾಲ್ಮೀಕಿ ನಿಗಮದಲ್ಲೇ ಹಗರಣ ನಡೆಸಿದ್ದು ಹಿಂದುಳಿದ ಸಮುದಾಯಗಳ ಏಳಿಗೆಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದೆ. ತೆಲಂಗಾಣ ಚುನಾವಣೆಗೆ ಈ ಹಣವನ್ನು ಕಾಂಗ್ರೆಸ್ ಖರ್ಚು ಮಾಡಿದೆ. ಹಗರಣದ A1 ಆರೋಪಿ ಮಾಜಿ ಸಚಿವ ನಾಗೇಂದ್ರ ಬೇಲ್ ಮೇಲೆ ಬಿಡುಗಡೆಯಾಗಿರುವುದು ದುರದೃಷ್ಟಕರ. ಜೈಲಿನಿಂದ ಹೊರಬಂದು ವಿಜಯೋತ್ಸವ ಆಚರಿಸಿದ್ದಾರೆ. ಜೈಲಿನಿಂದ ನೇರವಾಗಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸನ್ಮಾನಿಸಲಾಗಿದೆ. ಜೈಲಿನಿಂದ ಹೊರಬಂದ ಒಬ್ಬಾತ ಮುಖ್ಯಮಂತ್ರಿ ಅವರನ್ನು ಸನ್ಮಾನಿಸಿರುವುದು ರಾಜ್ಯದ ಜನರನ್ನು ತಲೆತಗ್ಗಿಸುವಂತೆ ಮಾಡಿದೆ.
ವಾಲ್ಮೀಕಿ ನಿಗಮದ ಹಗರಣ ಮುಖ್ಯಮಂತ್ರಿ ಅವರ ನಿರ್ದೇಶನದ ಮೇರೆಗೆ ಆಗಿರೋದು ಎಂಬುದೀಗ ಸಾಬೀತಾಗಿದೆ. 187 ಕೋಟಿ ಹಗರಣ ಅಲ್ಲ, 84 ಕೋಟಿ ಎಂದು ಸದನದಲ್ಲೇ ಮುಖ್ಯಮಂತ್ರಿಯವರು ಒಪ್ಪಿಕೊಂಡಿದ್ದರು. ಹಗರಣದ ಹಿನ್ನೆಲೆಯಲ್ಲಿ ರಾಜಿನಾಮೆ ಪಡೆದ ಸಚಿವರಿಂದಲೇ ಈಗ ಮುಖ್ಯಮಂತ್ರಿ ಸನ್ಮಾನಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಅವರೇ ಈ ಹಗರಣದಲ್ಲಿ ನೇರವಾಗಿ ಭಾಗಿಯಾಗಿರುವುದು ಈಗ ಸಾಬೀತಾಗಿದೆ. ಇಂಥ ಕೆಟ್ಟ ಮುಖ್ಯಮಂತ್ರಿ ಅಧಿಕಾರದಲ್ಲಿ ಮುಂದುವರಿಯಬಾರದು, ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮತ್ತೆ ಚುನಾವಣೆ ಘೋಷಣೆಯಾಗಿದೆ, ಹಣ ಖರ್ಚು ಮಾಡಲು ಮತ್ತೆ ನಿಗಮಗಳ ಮೇಲೆ ಕಣ್ಣಿಡಲಾಗಿದೆ. ಈಗ ಮುಖ್ಯಮಂತ್ರಿ ಯಾವ ನಿಗಮದ ಮೇಲೆ ಕಣ್ಣಿಟ್ಟಿದ್ದಾರೆ ಗೊತ್ತಿಲ್ಲ. ಚುನಾವಣಾ ಖರ್ಚಿಗೆ ಕಾಂಗ್ರೆಸ್ ಗೆ ಕರ್ನಾಟಕ ಎಟಿಎಂ ಇದ್ದಂತಾಗಿದೆ. ನಿಗಮ, ಮಂಡಳಿಗಳ ಖಾತೆಯಲ್ಲಿರುವ ಹಣವನ್ನೂ ಖಾಲಿ ಮಾಡುತ್ತಿದ್ದಾರೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹರಿಹಾಯ್ದಿದ್ದಾರೆ.
CM Siddaramaiah insulted Maharshi Valmiki by accepting shawl from B Nagendra slammed Mangalore MP Brijesh Chowta.
17-10-24 05:29 pm
HK News Desk
ಮುಸ್ಲಿಂ ವಿವಾಹ ನೋಂದಣಿ ಅಧಿಕಾರ ವಕ್ಪ್ ಇಲಾಖೆಗೆ ; ಹ...
17-10-24 03:36 pm
2026 ರಲ್ಲಿ ಕೆಎಫ್ಡಿ ಲಸಿಕೆ ಲಭ್ಯ ; ಐಸಿಎಂಆರ್ ನಿರ...
17-10-24 12:37 pm
Eshwarappa, Mallikarjun Kharge: ಹಿಂದುಳಿದ, ದಲಿ...
16-10-24 10:19 pm
ಜೈಶ್ರೀರಾಮ್ ಘೋಷಣೆ ಕೂಗಿದ ಮಾತ್ರಕ್ಕೆ ಧಾರ್ಮಿಕ ಭಾವನ...
16-10-24 05:08 pm
17-10-24 11:16 am
HK News Desk
Mumbai Road Rage Video; ಮುಂಬೈ ; ಕಾರಿಗೆ ಆಟೋ ರಿ...
15-10-24 03:51 pm
ಡಿ ಕಂಪನಿ ಹಾದಿಯಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್...
14-10-24 10:12 pm
Actor Sanjay Dutt Mangalore,Baba Siddique; ಬಾ...
13-10-24 06:13 pm
ಮೈಸೂರು ದರ್ಭಾಂಗ್ ಬಾಗಮತಿ ಎಕ್ಸ್ ಪ್ರೆಸ್ ರೈಲು ಅಪಘಾ...
13-10-24 03:48 pm
17-10-24 10:29 pm
Mangalore Correspondent
Ullal News, Mangalore, Satish Kumpala: ಪೊಲೀಸ್...
17-10-24 07:56 pm
CM Siddaramaiah, Valmiki, Nagendra, Brijesh...
17-10-24 04:34 pm
Hadrian Vegas, Swimming, Mangalore: ಈಜುಕೊಳದಲ್...
17-10-24 12:34 pm
Mangalore crime, Ullal, Fight: ಉಳ್ಳಾಲ ಠಾಣೆ ಇನ...
17-10-24 10:57 am
17-10-24 11:03 pm
Mangalore Correspondent
Bangalore crime, Double Murder, Illecit affai...
17-10-24 08:02 pm
Fake Aadhar, Mangalore Fraud, Crime: ಹತ್ತು ಸಾ...
16-10-24 02:44 pm
Chikkamagaluru, Online Fraud: ಹಣ ಡಬಲ್ ಆಸೆಗೆ...
15-10-24 09:56 pm
Mangalore, Murder, crime: ಬಸ್ ನಿಲ್ದಾಣದಲ್ಲಿ ಕಂ...
15-10-24 09:49 pm