ಬ್ರೇಕಿಂಗ್ ನ್ಯೂಸ್
14-11-24 02:48 pm Udupi Correspondent ಕರಾವಳಿ
ಉಡುಪಿ, ನ.14: ಸಕಲೇಶಪುರ ಸುಬ್ರಹ್ಮಣ್ಯ ಘಾಟಿ ಭಾಗದಲ್ಲಿ ರೈಲಿನ ವೇಗ ಹೆಚ್ಚಿಸುವುದು, ಕ್ರಾಸಿಂಗ್ ನಿಲ್ದಾಣವಾಗಿ ಅರೆಬೆಟ್ಟದಲ್ಲಿ ಅಭಿವೃದ್ಧಿ ಪಡಿಸುವುದು ಸೇರಿದಂತೆ ಹಲವು ಸುಧಾರಣೆ ವಿಷಯದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ರೈಲ್ವೇ ಸಚಿವರ ಜತೆ ಮಾತುಕತೆ ನಡೆಸಿದ್ದು ಮುಂದಿನ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಸುದೀರ್ಘ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕರಾವಳಿಯ ರೈಲು ಸೇವೆಗಳು ಮತ್ತು ಹೆದ್ದಾರಿ ಸುಧಾರಣೆಗಳ ಕುರಿತು ಕುಂದಾಪುರ ರೈಲು ಸಮಿತಿ ಸಂಸದರಿಗೆ ಮನವಿ ಕೊಟ್ಟು ಚರ್ಚೆ ಮಾಡಿದೆ. ರೈಲು ಮತ್ತು ಹೆದ್ದಾರಿ ಸುಧಾರಣೆ ಕುರಿತು ಹಲವು ಮಾರ್ಗೋಪಾಯಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ. ಈ ಸಂದರ್ಭ ಸಂಸದರು ಸಮಿತಿಯ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿದರು.
ಪಂಚಗಂಗಾ ರೈಲು ಸೇರಿದಂತೆ ಹಲವು ವಿಶೇಷ ರೈಲು ಸೇವೆಗಳು ಪಶ್ಚಿಮ ಘಟ್ಟದ ಘಾಟಿ ಭಾಗದಲ್ಲಿ ನಿಧಾನಗತಿಯ ಕಾರಣದಿಂದ ಬೆಂಗಳೂರು ತಲುಪುವಾಗ ವಿಳಂಬವಾಗುವುದು, ಸರಿಯಾದ ಸಮಯಪಟ್ಟಿ ಸಿಗದೆ ಇರುವುದು, ಹೀಗೆ ಹಲವು ಸಮಸ್ಯೆಗಳಿಗೆ ಸಿಲುಕಿವೆ. ಅದರಲ್ಲೂ ಪಂಚಗಂಗಾ ರೈಲು ಕರಾವಳಿಯ ಜೀವನಾಡಿಯಾಗಿದ್ದು, ಈ ರೈಲು ಇನ್ನೂ ಬೇಗನೆ ಬೆಂಗಳೂರು ತಲುಪಿಸಲು ಬೇಡಿಕೆ ಇದೆ. ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಸಚಿವರ ಜತೆ ಚರ್ಚಿಸಲಾಗಿದೆ ಎಂದು ಸಂಸದರು ತಿಳಿಸಿದರು.
ಬ್ರಹ್ಮಾವರ, ಕುಂದಾಪುರ ಸೇರಿದಂತೆ ಹಲವೆಡೆ ಅಪಘಾತ ವಲಯಗಳು ತುಂಬಿರುವ ರಾಷ್ಟ್ರೀಯ ಹೆದ್ದಾರಿಯ ಸಮಗ್ರ ಸುಧಾರಣೆಗೆ ತಂತ್ರಜ್ಞರ ತಂಡವನ್ನು ಕುಂದಾಪುರ, ಬ್ರಹ್ಮಾವರ, ಉಡುಪಿ ಮಧ್ಯೆ ನೇರ ವೀಕ್ಷಣೆ ಮತ್ತು ಪರಿಹಾರೋಪಾಯಗಳ ಕುರಿತು ಪ್ರಸ್ತಾವ ರಚಿಸುವ ಕುರಿತು ನಿರ್ಧರಿಸಲಾಗಿದ್ದು, ಈ ಬಗ್ಗೆ ಕೆಲವೇ ದಿನಗಳಲ್ಲಿ ದಿಲ್ಲಿಗೆ ತೆರಳಲಿರುವುದಾಗಿ ಸಂಸದರು ತಿಳಿಸಿದ್ದಾರೆ.
Railway issue at Sakaleshpur ghat, Railway committee appeals to kota srinivas poojary in Udupi. discussion with the Minister of Railways regarding many improvements including increasing the speed of the train in the Sakaleshpura Subrahmanya Ghati section, developing Arebetta as a crossing station and said that they will hold a long discussion in the next winter session of Parliament.
11-06-25 09:35 pm
HK News Desk
No Cabinet Reshuffle, Karnataka: ಸದ್ಯಕ್ಕಿಲ್ಲ...
11-06-25 05:23 pm
ರಾಜ್ಯದಲ್ಲಿ ಮತ್ತೊಮ್ಮೆ ಜಾತಿ ಗಣತಿ ; ಪ್ರಬಲ ಸಮುದಾಯ...
10-06-25 09:24 pm
Kumta Snake Knife: ಕೋಡಗನ ಕೋಳಿ ನುಂಗಿತ್ತಾ... ಅಲ...
10-06-25 06:49 pm
ದಿನೇಶ್ ಅಮೀನ್ ಮಟ್ಟು, ರಮೇಶ್ ಬಾಬು ಸೇರಿ ಮೇಲ್ಮನೆಗೆ...
10-06-25 06:10 pm
09-06-25 05:16 pm
HK News Desk
# Arrest kohli ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್...
07-06-25 09:54 pm
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
11-06-25 11:06 pm
Mangalore Correspondent
Red Alert, Mangalore, Udupi, Rain: ದಕ್ಷಿಣ ಕನ್...
11-06-25 10:26 pm
Chakravarthy Sulibele, Mangalore Police: ಐಜಿ...
11-06-25 07:03 pm
Former MLA Moideen Bava, FIR: ಪಣಂಬೂರು ಎನ್ಎಂಪಿ...
11-06-25 06:04 pm
Mangalore Boliyaar School: ಎಲ್ಲ ಕಡೆ ಶಾಲಾರಂಭ,...
11-06-25 01:34 pm
11-06-25 07:26 pm
Mangalore Correspondent
ಅಡಿಕೆ ಖರೀದಿಸಿ 50ಕ್ಕೂ ಹೆಚ್ಚು ರೈತರಿಗೆ ಹಣ ಕೊಡದೆ...
11-06-25 02:03 pm
Kundapura News, Assault, crime: ಚಿಲ್ಲರೆ ಕೇಳಿದ...
10-06-25 10:57 pm
Digital Arrest, Bangalore, crime: ಕ್ರೆಡಿಟ್ ಕಾ...
10-06-25 12:44 pm
Bangalore Murder, Crime, Techie; ಕಾಮತೃಷೆ ತೀರಿ...
10-06-25 11:26 am