ಬ್ರೇಕಿಂಗ್ ನ್ಯೂಸ್
28-01-25 04:40 pm Mangalore Correspondent ಕರಾವಳಿ
ಮಂಗಳೂರು, ಜ.28: ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ತೆರಳುತ್ತಿದ್ದಾಗ ಮಹಿಳೆಯ ಜೊತೆಗಿದ್ದ ಮಗುವಿನ ಚಿನ್ನದ ಸರ ಬಿದ್ದು ಹೋಗಿದ್ದು, ಅದನ್ನು ಸಿಐಎಸ್ಎಫ್ ಸಿಬಂದಿ ಸಕಾಲಿಕ ಪ್ರಯತ್ನದಿಂದ ಮತ್ತೆ ವಾಪಸ್ ಮಾಡಿಸಿದ ಘಟನೆ ನಡೆದಿದೆ.
ಜ.26ರಂದು ಬೆಳಗ್ಗೆ 8.30ಕ್ಕೆ ರಚನಾ ಮಾರ್ಲ ಎಂಬ ಮಹಿಳೆ ತನ್ನ ಮಗುವಿನ ಜೊತೆಗೆ ಏರ್ಪೋರ್ಟ್ ನಲ್ಲಿ ಚೆಕ್ಕಿಂಗ್ ಆಗಿ ವಿಮಾನದ ಬಳಿ ತಲುಪುತ್ತಿದ್ದಂತೆ ಮಗುವಿನ ಸರ ಇಲ್ಲದಿರುವುದು ಗಮನಕ್ಕೆ ಬಂದಿತ್ತು. ಆನಂತರ, ಹೊರಗೆ ಬಂದು ಸರ ಬಿದ್ದು ಹೋಗಿದೆಯೇ ಎಂದು ಪರಿಶೀಲನೆ ಮಾಡುವುದಕ್ಕೆ ಸಮಯ ಇರಲಿಲ್ಲ. ಹೀಗಾಗಿ ಏರ್ಪೋರ್ಟಿನ ಸಿಐಎಸ್ಎಫ್ ಭದ್ರತಾ ಸಿಬಂದಿಗೆ ಸರ ಬಿದ್ದುಹೋಗಿರುವ ಬಗ್ಗೆ ದೂರು ಕೊಟ್ಟು ಬೆಂಗಳೂರಿಗೆ ತೆರಳಿದ್ದರು.
ಆನಂತರ, ಸಿಐಎಸ್ಎಫ್ ಭದ್ರತಾ ಸಿಬಂದಿ ತಪಾಸಣೆ ನಡೆಸಿದಾಗ ಏರ್ಪೋರ್ಟ್ ಮೇಲಂತಸ್ತಿನಲ್ಲಿ ಕಾರಿನಿಂದ ಇಳಿದು ಒಳಗೆ ಬರುವಾಗಲೇ ಮಗುವಿನ ಸರ ಬಿದ್ದು ಹೋಗಿರುವುದು ಪತ್ತೆಯಾಗಿತ್ತು. ಅಲ್ಲದೆ, ಆ ಸರವನ್ನು ಇನ್ನೊಬ್ಬ ವಾಹನದ ಚಾಲಕ ಹೆಕ್ಕಿ ತನ್ನ ಜೊತೆಗೆ ತೆಗೆದುಕೊಂಡು ಹೋಗಿದ್ದು ದೃಶ್ಯದಲ್ಲಿತ್ತು. ಹೀಗಾಗಿ ಆ ವಾಹನದ ನಂಬರ್ ಮೂಲಕ ಚಾಲಕನ ಪತ್ತೆ ಮಾಡಿ ಪೊಲೀಸರು ಕರೆ ಮಾಡಿದ್ದರು. ಈ ವೇಳೆ, ಸರ ಬಿದ್ದು ಸಿಕ್ಕಿರುವುದನ್ನು ಒಪ್ಪಿಕೊಂಡ ಚಾಲಕ, ಅದನ್ನು ವಾರೀಸುದಾರರಿಗೆ ನೀಡಲು ರೆಡಿ ಇದ್ದೇನೆ ಎಂದೂ ಹೇಳಿದ್ದ.
ಸಿಐಎಸ್ಎಫ್ ಕಡೆಯಿಂದ ಮರಳಿ ಆ ಮಹಿಳೆಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದ್ದರು. ತನಗೆ ಸರ ಸಿಕ್ಕಿದರಾಯ್ತು, ಕಂಪ್ಲೇಂಟ್ ಕೊಡುವ ಆಸಕ್ತಿ ಇಲ್ಲ ಎಂದರು. ಅದರಂತೆ, ಸಿಐಎಸ್ಎಫ್ ಅಧಿಕಾರಿಗಳು ಚಾಲಕನನ್ನು ಕರೆಸಿ ವಿಮಾನ ನಿಲ್ದಾಣದ ಕಚೇರಿಯಲ್ಲಿ ತಪ್ಪೊಪ್ಪಿಗೆ ಪತ್ರ ಬರೆಸಿ ಚಿನ್ನದ ಸರವನ್ನು ಪಡೆದು ಬಿಟ್ಟು ಕಳಿಸಿದ್ದಾರೆ. ಮಹಿಳೆಯ ಕುಟುಂಬಸ್ಥರು ಬಳಿಕ ಏರ್ಪೋರ್ಟಿಗೆ ಬಂದು ಚಿನ್ನದ ಸರವನ್ನು ಪಡೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಸ್ವತಃ ಮಹಿಳೆ ರಚನಾ ಮಾರ್ಲ ವಿಡಿಯೋ ಮಾಡಿದ್ದು, ಸಿಐಎಸ್ಎಫ್ ಭದ್ರತಾ ಸಿಬಂದಿ ಒಂದೇ ದಿನದಲ್ಲಿ ಸಿಸಿಟಿವಿ ನೋಡಿ ಸರವನ್ನು ಪತ್ತೆ ಮಾಡಿದ್ದಲ್ಲದೆ, ಕುಟುಂಬಸ್ಥರನ್ನು ಕರೆಸಿ ಅವರ ಕೈಗೊಪ್ಪಿಸಿದ್ದಾರೆ. ಆ ಸರದ ಜೊತೆಗೆ ಭಾವನಾತ್ಮಕ ನಂಟಿದೆ. ಇದಕ್ಕಾಗಿ ಪತ್ತೆ ಮಾಡಿ ಸರ ಮರಳಿಸಿದ ಭದ್ರತಾ ಸಿಬಂದಿಗೆ ತುಂಬ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
Mangalore CISF restore lost gold chain lost in the airport. Women who lost the chain also shared video of testimony about the CISF officala being prompt in their service.
09-02-26 01:30 pm
HK News Desk
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರ...
09-02-26 12:29 pm
Gadag, No phone, Tv: ಎಸ್ಸೆಸ್ಸೆಲ್ಸಿ ಮಕ್ಕಳ ಭವಿಷ...
07-02-26 05:09 pm
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
Sanjana Bus Fire Accident, Nelamangala: ಮತ್ತೊ...
06-02-26 12:30 pm
09-02-26 12:27 pm
HK News Desk
ಬಿಜೆಪಿಯಿಂದ ನಮಗೆ ಅಚ್ಛೇ ದಿನ್ ಬಂದಿಲ್ಲ, ಸ್ವಯಂಸೇವಕ...
08-02-26 10:18 pm
25 ವರ್ಷಗಳ ಬಳಿಕ ಮುಂಬೈ ಪಾಲಿಕೆ ಬಿಜೆಪಿ ತೆಕ್ಕೆಗೆ ;...
07-02-26 10:53 pm
ಕಣ್ಣೆದುರೇ ನಡೆದ ಅಚ್ಚರಿ ; 1 ಲಕ್ಷ ರೂ. ಮೌಲ್ಯದ ಚಿನ...
06-02-26 10:58 pm
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
08-02-26 11:17 pm
HK News Desk
ಜಾಗತಿಕ ಪ್ರವಾಸಿ ತಾಣಗಳ ಅಭಿವೃದ್ಧಿ ; ಕೋಡಿ- ಕನ್ಯಾನ...
08-02-26 10:10 pm
ಬೈಂದೂರು ಕ್ಷೇತ್ರದ ಮಾಜಿ ಶಾಸಕ, ಜನತಾ ಪರಿವಾರದ ಹಿರಿ...
07-02-26 12:55 pm
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
ಬಿಜೆಪಿಯವರು ತಿಪ್ಪರಲಾಗ ಹೊಡೆದ್ರೂ ಅಧಿಕಾರಕ್ಕೆ ಬರಲ್...
06-02-26 10:56 pm
09-02-26 11:26 am
Mangalore Correspondent
Mangalore Jail Raid: ಮಂಗಳೂರು ಜೈಲಿನಲ್ಲಿ ಬರ್ಕೆ...
08-02-26 02:07 pm
MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಪೊಲೀಸ್ ದಾ...
08-02-26 12:59 pm
Mangalore Robbery, Crime: ಕಳವಾರಿಗೆ ಮೆಹಂದಿ ಹೋಗ...
08-02-26 12:37 pm
ಫ್ರೀ ಫೈರ್ ಗೇಮ್ ಚಟ ; ಅಕ್ಕನ ಮಗನ ಕೊಂದಿದ್ದ ಮಾವ, ಪ...
07-02-26 10:48 pm