ಬ್ರೇಕಿಂಗ್ ನ್ಯೂಸ್
25-12-20 11:07 am Mangalore Correspondent ಕರಾವಳಿ
ಮಂಗಳೂರು, ಡಿ.25: ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುವ ವಾಹನಗಳನ್ನು ಪೊಲೀಸರು ಟೋಯಿಂಗ್ ಮಾಡಿಕೊಂಡು ಹೋಗುವುದು, ದಂಡ ಕಟ್ಟಿಸುವುದು, ಚೌಕಾಸಿ ಮಾಡಿ ಬಿಡುವುದು ಹೀಗೆಲ್ಲ ನಡೆದುಬಂದಿದೆ. ಆದರೆ, ಇಲ್ಲೊಂದು ಪೊಲೀಸರ ತಂಡ ಮಗು ಮಲಗಿದ್ದಾಗಲೇ ಕಾರನ್ನು ಟೋಯಿಂಗ್ ವಾಹನದಲ್ಲಿ ಎತ್ತಿಕೊಂಡು ಹೋಗಿ ಜನರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಮೂಡುಬಿದ್ರೆಯ ಮಿಜಾರಿನ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಮಂಗಳೂರಿಗೆ ಶಾಪಿಂಗ್ ಬಂದಿದ್ದರು. ಐದು ವರ್ಷದ ಮಗು ಮಲಗಿದ್ದಕ್ಕಾಗಿ ಆ ಮಗುವನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದರು. ಕಾರಿನಲ್ಲಿ ಡ್ರೈವರ್ ಕೂಡ ಇದ್ದರು. ಆದರೆ, ಕಾರಿನ ಡ್ರೈವರ್ ಮಹಿಳೆಯ ಮೊಬೈಲ್ ಕಾರಿನಲ್ಲಿ ಉಳಿದಿರುವುದನ್ನು ಗಮನಿಸಿ, ಅದನ್ನು ಕೊಟ್ಟು ಬರಲು ಕಾರನ್ನು ರಸ್ತೆ ಬದಿ ಪಾರ್ಕ್ ಮಾಡಿ ಮಾಲ್ ನತ್ತ ತೆರಳಿದ್ದರು. ಇದೇ ವೇಳೆಗೆ, ಟೋಯಿಂಗ್ ವಾಹನ ಬಂದಿದ್ದು ರಸ್ತೆ ಬದಿ ಪಾರ್ಕ್ ಮಾಡಿದ್ದ ಕಾರನ್ನು ತೆರವು ಮಾಡಲು ಸೂಚನೆ ನೀಡಿದ್ದಾರೆ. ಒಂದಷ್ಟು ಹೊತ್ತು ಅಲ್ಲಿ ನಿಂತ ಟೋಯಿಂಗ್ ವಾಹನದವರು, ಕಾರನ್ನು ಎತ್ತಿ ಟೋಯಿಂಗ್ ಮಾಡಿಕೊಂಡು ಹೋಗಿದ್ದಾರೆ.
ಚಾಲಕ ಮರಳಿ ಬಂದಾಗ ಸ್ಥಳದಲ್ಲಿ ಕಾರು ಇರಲಿಲ್ಲ. ಮಗು ಮತ್ತು ಕಾರು ನಾಪತ್ತೆಯಾಗಿದ್ದರಿಂದ ಮಹಿಳೆ ಗಾಬರಿಗೊಂಡು ಹುಡುಕಾಟ ನಡೆಸಿದರು. ಅಲ್ಲೇ ಇದ್ದ ಅಂಗಡಿಯವರಲ್ಲಿ ಕೇಳಿದಾಗ, ಟೋಯಿಂಗ್ ವಾಹನದ ಕಿತಾಪತಿ ವಿಚಾರ ತಿಳಿದುಬಂತು. ಘಟನೆ ನಗರದ ಕದ್ರಿ ಬಳಿ ನಡೆದಿದ್ದು ಅಲ್ಲಿನ ಸ್ಥಳೀಯರ ಸೂಚನೆಯಂತೆ ಕೂಡಲೇ ಮಹಿಳೆ ಮತ್ತು ಚಾಲಕ ಕದ್ರಿ ಠಾಣೆಗೆ ತೆರಳಿದ್ರು. ಠಾಣೆಯ ಪೊಲೀಸರಲ್ಲಿ ಮಗು ಮತ್ತು ಕಾರಿನ ಬಗ್ಗೆ ಹೇಳಿದಾಗ ಅವರೂ ಗಾಬರಿಗೊಂಡಿದ್ದಾರೆ. ಕಾರನ್ನು ಅಲ್ಲಿಯೇ ಹೊರಭಾಗದಲ್ಲಿ ಪಾರ್ಕ್ ಮಾಡಲಾಗಿತ್ತು. ಕಾರಿನ ಒಳಗೆ ಗಮನಿಸಿದಾಗ, ಮಗು ಕಾರಿನ ಹಿಂಬದಿಯಲ್ಲಿ ಹಾಗೇ ನಿದ್ರಿಸಿದ್ದು ಕಂಡುಬಂತು.
ಬಳಿಕ ಮಹಿಳೆ ಮತ್ತು ಚಾಲಕ ಅಲ್ಲಿನ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರಿನಲ್ಲಿ ಮಗು ಇರುವುದು ನಿಮ್ಮ ಕಣ್ಣಿಗೆ ಕಂಡಿಲ್ಲವೇ? ಅಷ್ಟು ಬೇಗ ಹೊತ್ತುಕೊಂಡು ಹೋಗಲು ನೀವು ಅಲ್ಲಿಯೇ ಕಾಯ್ಕೊಂಡು ಇದ್ರಾ ಅಂತ ಪ್ರಶ್ನೆ ಮಾಡಿದ್ದಾರೆ. ಟೋಯಿಂಗ್ ಮಾಡಿದ ಪೊಲೀಸರು ಬಂದು ಕಾರಿನ ಗ್ಲಾಸಿಗೆ ಟಿಂಟ್ ಹಾಕಿದ್ದರಿಂದ ಗಮನಕ್ಕೆ ಬರಲಿಲ್ಲ. ಮಗುವನ್ನು ಬಿಟ್ಟು ಹೋಗಿದ್ದೇ ತಪ್ಪು ಅಂತ ವಾದಿಸಿದರು. ಕೊನೆಗೆ, ಟಿಂಟ್ ಮತ್ತು ನೋ ಪಾರ್ಕಿಂಗ್ ವಿಚಾರದಲ್ಲಿ ದಂಡ ಕಟ್ಟಿಸಿಕೊಂಡು ಪೊಲೀಸರು ಕಾರನ್ನು ಬಿಟ್ಟು ಕೊಟ್ಟರು.
ಮಗು ಇರುವಾಗಲೇ ಕಾರನ್ನು ಟೋಯಿಂಗ್ ಮಾಡಿರುವ ವಿಚಾರ ಮಾತ್ರ ಪೊಲೀಸರನ್ನು ಕಣ್ಣು ಕಾಣದ ಗಾವಿಲರು ಎಂದು ಸಾರ್ವಜನಿಕರು ಟೀಕಿಸುವಂತಾಗಿದೆ. ಪುಣ್ಯಕ್ಕೆ ಕಾರನ್ನು ಎಳೆದೊಯ್ಯುವಾಗ ಮಗುವಿಗೇನೂ ಆಗಿಲ್ಲ. ಇಲ್ಲಾಂದ್ರೆ ಪೊಲೀಸರ ಕುತ್ತಿಗೆ ಹಿಡಿಯುವ ಸ್ಥಿತಿ ಬರ್ತಿತ್ತು !
In a bizarre case, a car was towed away by the Kadri traffic police while a 7-year-old child was still inside the vehicle. The incident took place in the limits of Mangaluru East police station on Thursday, December 24.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 06:22 pm
Giridhar Shetty, Mangaluru
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm