ಬ್ರೇಕಿಂಗ್ ನ್ಯೂಸ್
03-11-25 12:37 pm Mangalore Correspondent ಕರಾವಳಿ
ಮಂಗಳೂರು, ನ.3 : ಬೆಂಗಳೂರಿನ ಕುಂಬಳಗೋಡಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ 2ನೇ ವರ್ಷದ ವಿದ್ಯಾರ್ಥಿಯೊಬ್ಬರು ಭಾನುವಾರ ಸಸಿಹಿತ್ಲು ಬೀಚ್ ಬಳಿಯ ನಂದಿನಿ ನದಿ ಅಳಿವೆಯಲ್ಲಿ ಈಜಾಡಲು ಹೋಗಿ ನೀರುಪಾಲಾಗಿದ್ದಾರೆ.
ಬೆಂಗಳೂರು ಗಿರಿನಗರ 80 ಅಡ್ಡ ರಸ್ತೆ ನಿವಾಸಿ ಪ್ರಸನ್ನ ಸಿ.ಎಲ್. ಎಂಬವರ ಪುತ್ರ ಪ್ರಣವ್ ಚಂದ್ರ (24) ನೀರುಪಾಲಾದ ವಿದ್ಯಾರ್ಥಿ. ಒಟ್ಟು ಏಳು ಮಂದಿ ಗೆಳೆಯರು ಶುಕ್ರವಾರ ಮಂಗಳೂರಿಗೆ ಬಂದಿದ್ದು ಎಲ್ಲರೂ ಹೈಸ್ಕೂಲ್, ಪಿಯು ಕಾಲೇಜಿನ ಸಹಪಾಠಿಗಳಾಗಿದ್ದು ಬೇರೆ ಬೇರೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಾಗಿದ್ದರು ಎನ್ನಲಾಗಿದೆ.
ಮಂಗಳೂರಿಗೆ ಬಂದ ಬಳಿಕ ಶುಕ್ರವಾರ ರೂಮ್ನಲ್ಲಿ ತಂಗಿದ್ದು, ಬಳಿಕ ಪ್ರವಾಸಿ ತಾಣಗಳಿಗೆ ತೆರಳಿದ್ದರು. ಭಾನುವಾರ ಸಸಿಹಿತ್ಲು ಬೀಚ್ ಬಳಿಯ ನಂದಿನಿ ನದಿ ಅಳಿವೆಗೆ ಆಗಮಿಸಿ ನೀರಾಟದಲ್ಲಿ ತೊಡಗಿದ್ದ ಸಂದರ್ಭ ಈ ದುರಂತ ಸಂಭವಿಸಿದೆ. ಇವರು ಸಮುದ್ರಕ್ಕೆ ಇಳಿದ ಸ್ಥಳದ ಬಳಿ ನಂದಿನಿ ನದಿ ಅಳಿವೆ ಹೆಜಮಾಡಿ ನೂತನ ಬಂದರಿನ ಬ್ರೇಕ್ವಾಟರ್ ಇದೆ. ಈ ಪ್ರದೇಶದಲ್ಲಿ ಸಮುದ್ರಕ್ಕೆ ಇಳಿಯದಂತೆ ಬೀಚ್ನ ಗೃಹರಕ್ಷಕ ದಳ ಸಿಬ್ಬಂದಿ, ಲೈಫ್ ಗಾರ್ಡ್ ಗಳು ಎಚ್ಚರಿಕೆ ನೀಡಿದ್ದರೂ ಅವರ ಮಾತು ಕೇಳದೆ ದೂರದ ಸ್ಥಳಕ್ಕೆ ಬಂದು ಅಪಾಯಕಾರಿ ಅಳಿವೆ ಜಾಗದಲ್ಲಿ ಇಳಿದಿದ್ದರು. ಅಲೆಗಳಿಗೆ ಸಿಲುಕಿದ್ದ ಪ್ರಣವ್ ಮೊದಲಿಗೆ ಬಂಡೆ ಕಲ್ಲು ಹಿಡಿದುಕೊಂಡು ಪಾರಾಗಲು ಯತ್ನಿಸಿದ್ದರು. ಆದರೆ ಬಂಡೆಯಿಂದ ದೂರವಿದ್ದ ಈ ಸ್ಥಳಕ್ಕೆ ಉಳಿದವರು ಧಾವಿಸಿ ರಕ್ಷಿಸಲು ಯತ್ನಿಸುವಷ್ಟರಲ್ಲಿ ಅವರು ನೀರುಪಾಲಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ, ಸ್ಥಳೀಯರು ಶೋಧ ಕಾರ್ಯ ನಡೆಸಿದ್ದಾರೆ. ಕುಟುಂಬಸ್ಥರು ರಾತ್ರಿ ವೇಳೆ ಸಸಿಹಿತ್ಲು ಕಿನಾರೆ ಬಳಿ ಆಗಮಿಸಿದ್ದಾರೆ.
ಬ್ರೇಕ್ ವಾಟರ್ ಅಪಾಯಕಾರಿ ಸ್ಥಳ
ಅಳಿವೆ ಪಕ್ಕದ ಬ್ರೇಕ್ ವಾಟರ್ ನೂತನ ಹೆಜಮಾಡಿ ಬಂದರಿಗೆ ಸೇರಿದ್ದು ಇದರ ಮೇಲೆ ಯಾರೂ ಹೊಗದಂತೆ ತಡೆಬೇಲಿಯಾಗಲಿ, ಎಚ್ಚರಿಕೆ ಫಲಕವಾಗಲೀ ಇಲ್ಲ. ಮಾತು ಕೇಳದೆ ಯುವಕರು ಬೈಕ್ ನಲ್ಲಿ ಹೋಗುತ್ತಾರೆ. ಗಾಳ ಹಾಕುವವರೂ ಹೋಗುತ್ತಾರೆ ಎನ್ನುತ್ತಾರೆ ಸ್ಥಳೀಯರು.
A 24-year-old engineering student from Bengaluru drowned while swimming near the estuary of the Nandini River at Sasihithlu Beach on Sunday. The deceased has been identified as Pranav Chandra (24), son of Prasanna C.L., a resident of Girinagar 80th Cross, Bengaluru, and a second-year student at a private engineering college in Kumbalgodu.
04-12-25 05:36 pm
HK News Desk
Bagalakote Accident, Four Killed: ಬಾಗಲಕೋಟೆ ;...
03-12-25 03:01 pm
ಜೈಷ್-ಇ-ಮೊಹಮ್ಮದ್ ಹೆಸರಲ್ಲಿ ಬೆಂಗಳೂರು ಏರ್ಪೋರ್ಟ್,...
02-12-25 10:17 pm
ಸಂಪುಟ ಪುನಾರಚನೆಯಾದ್ರೆ ಮುನಿಯಪ್ಪ, ಮಹದೇವಪ್ಪ, ಪರಮೇ...
02-12-25 06:29 pm
ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕ...
01-12-25 10:59 pm
04-12-25 05:39 pm
HK News Desk
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
ಅಮೆರಿಕದ ಡಾಲರ್ ಎದುರು ನೈಂಟಿ ಕ್ರಾಸ್ ಮಾಡಿದ ರೂಪಾಯಿ...
03-12-25 05:32 pm
04-12-25 06:39 pm
Mangalore Correspondent
ಅಜ್ಜನ ಕೈಹಿಡಿದು ಹೆದ್ದಾರಿ ದಾಟಿ ತಿಂಡಿಗೆ ಹೋಗಿದ್ದ...
04-12-25 12:38 pm
Cm Siddaramaiah Mangalore: ಆಹ್ವಾನ ಇಲ್ಲದೆ ನಾನೇ...
03-12-25 10:35 pm
Mangalore, CM Siddaramaiah, High Court: ಮಂಗಳೂ...
03-12-25 07:23 pm
CM Siddaramaiah, Mangalore, Narayan Guru: ದೇವ...
03-12-25 04:52 pm
04-12-25 11:15 pm
Mangalore Correspondent
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm
ಬೆಂಗಳೂರು ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ; ರಕ್ತಚ...
04-12-25 04:18 pm
ಹೊಸ ವರ್ಷದ ಸಂಭ್ರಮಾಚರಣೆಗೆ ಡ್ರಗ್ಸ್ ಮಾರಾಟ ಮಾಡಲು ಸ...
03-12-25 01:41 pm
ಲೈಂಗಿಕ ಸಮಸ್ಯೆಗಳಿಗೆ ಆಯುರ್ವೇದ ಔಷಧ ನೆಪದಲ್ಲಿ ವಂಚನ...
02-12-25 10:48 pm