ಬ್ರೇಕಿಂಗ್ ನ್ಯೂಸ್
03-11-25 12:37 pm Mangalore Correspondent ಕರಾವಳಿ
ಮಂಗಳೂರು, ನ.3 : ಬೆಂಗಳೂರಿನ ಕುಂಬಳಗೋಡಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ 2ನೇ ವರ್ಷದ ವಿದ್ಯಾರ್ಥಿಯೊಬ್ಬರು ಭಾನುವಾರ ಸಸಿಹಿತ್ಲು ಬೀಚ್ ಬಳಿಯ ನಂದಿನಿ ನದಿ ಅಳಿವೆಯಲ್ಲಿ ಈಜಾಡಲು ಹೋಗಿ ನೀರುಪಾಲಾಗಿದ್ದಾರೆ.
ಬೆಂಗಳೂರು ಗಿರಿನಗರ 80 ಅಡ್ಡ ರಸ್ತೆ ನಿವಾಸಿ ಪ್ರಸನ್ನ ಸಿ.ಎಲ್. ಎಂಬವರ ಪುತ್ರ ಪ್ರಣವ್ ಚಂದ್ರ (24) ನೀರುಪಾಲಾದ ವಿದ್ಯಾರ್ಥಿ. ಒಟ್ಟು ಏಳು ಮಂದಿ ಗೆಳೆಯರು ಶುಕ್ರವಾರ ಮಂಗಳೂರಿಗೆ ಬಂದಿದ್ದು ಎಲ್ಲರೂ ಹೈಸ್ಕೂಲ್, ಪಿಯು ಕಾಲೇಜಿನ ಸಹಪಾಠಿಗಳಾಗಿದ್ದು ಬೇರೆ ಬೇರೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಾಗಿದ್ದರು ಎನ್ನಲಾಗಿದೆ.
ಮಂಗಳೂರಿಗೆ ಬಂದ ಬಳಿಕ ಶುಕ್ರವಾರ ರೂಮ್ನಲ್ಲಿ ತಂಗಿದ್ದು, ಬಳಿಕ ಪ್ರವಾಸಿ ತಾಣಗಳಿಗೆ ತೆರಳಿದ್ದರು. ಭಾನುವಾರ ಸಸಿಹಿತ್ಲು ಬೀಚ್ ಬಳಿಯ ನಂದಿನಿ ನದಿ ಅಳಿವೆಗೆ ಆಗಮಿಸಿ ನೀರಾಟದಲ್ಲಿ ತೊಡಗಿದ್ದ ಸಂದರ್ಭ ಈ ದುರಂತ ಸಂಭವಿಸಿದೆ. ಇವರು ಸಮುದ್ರಕ್ಕೆ ಇಳಿದ ಸ್ಥಳದ ಬಳಿ ನಂದಿನಿ ನದಿ ಅಳಿವೆ ಹೆಜಮಾಡಿ ನೂತನ ಬಂದರಿನ ಬ್ರೇಕ್ವಾಟರ್ ಇದೆ. ಈ ಪ್ರದೇಶದಲ್ಲಿ ಸಮುದ್ರಕ್ಕೆ ಇಳಿಯದಂತೆ ಬೀಚ್ನ ಗೃಹರಕ್ಷಕ ದಳ ಸಿಬ್ಬಂದಿ, ಲೈಫ್ ಗಾರ್ಡ್ ಗಳು ಎಚ್ಚರಿಕೆ ನೀಡಿದ್ದರೂ ಅವರ ಮಾತು ಕೇಳದೆ ದೂರದ ಸ್ಥಳಕ್ಕೆ ಬಂದು ಅಪಾಯಕಾರಿ ಅಳಿವೆ ಜಾಗದಲ್ಲಿ ಇಳಿದಿದ್ದರು. ಅಲೆಗಳಿಗೆ ಸಿಲುಕಿದ್ದ ಪ್ರಣವ್ ಮೊದಲಿಗೆ ಬಂಡೆ ಕಲ್ಲು ಹಿಡಿದುಕೊಂಡು ಪಾರಾಗಲು ಯತ್ನಿಸಿದ್ದರು. ಆದರೆ ಬಂಡೆಯಿಂದ ದೂರವಿದ್ದ ಈ ಸ್ಥಳಕ್ಕೆ ಉಳಿದವರು ಧಾವಿಸಿ ರಕ್ಷಿಸಲು ಯತ್ನಿಸುವಷ್ಟರಲ್ಲಿ ಅವರು ನೀರುಪಾಲಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ, ಸ್ಥಳೀಯರು ಶೋಧ ಕಾರ್ಯ ನಡೆಸಿದ್ದಾರೆ. ಕುಟುಂಬಸ್ಥರು ರಾತ್ರಿ ವೇಳೆ ಸಸಿಹಿತ್ಲು ಕಿನಾರೆ ಬಳಿ ಆಗಮಿಸಿದ್ದಾರೆ.
ಬ್ರೇಕ್ ವಾಟರ್ ಅಪಾಯಕಾರಿ ಸ್ಥಳ
ಅಳಿವೆ ಪಕ್ಕದ ಬ್ರೇಕ್ ವಾಟರ್ ನೂತನ ಹೆಜಮಾಡಿ ಬಂದರಿಗೆ ಸೇರಿದ್ದು ಇದರ ಮೇಲೆ ಯಾರೂ ಹೊಗದಂತೆ ತಡೆಬೇಲಿಯಾಗಲಿ, ಎಚ್ಚರಿಕೆ ಫಲಕವಾಗಲೀ ಇಲ್ಲ. ಮಾತು ಕೇಳದೆ ಯುವಕರು ಬೈಕ್ ನಲ್ಲಿ ಹೋಗುತ್ತಾರೆ. ಗಾಳ ಹಾಕುವವರೂ ಹೋಗುತ್ತಾರೆ ಎನ್ನುತ್ತಾರೆ ಸ್ಥಳೀಯರು.
A 24-year-old engineering student from Bengaluru drowned while swimming near the estuary of the Nandini River at Sasihithlu Beach on Sunday. The deceased has been identified as Pranav Chandra (24), son of Prasanna C.L., a resident of Girinagar 80th Cross, Bengaluru, and a second-year student at a private engineering college in Kumbalgodu.
03-11-25 05:17 pm
Bangalore Correspondent
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 05:20 pm
Mangalore Correspondent
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm