ಬ್ರೇಕಿಂಗ್ ನ್ಯೂಸ್
05-11-25 10:19 pm Mangalore Correspondent ಕರಾವಳಿ
ಉಳ್ಳಾಲ, ನ.5 : ಕುರ್ನಾಡು ಗ್ರಾಮದ ಅಬೆಮಾರ್ ಎಂಬಲ್ಲಿ ವ್ಯವಸ್ಥಿತವಾದ ಸೂರಿಲ್ಲದೆ ಕುಸಿದು ಬೀಳಲು ಮುಂದಾಗಿದ್ದ ಹರಕಳು, ಮುರುಕಳು ಗುಡಿಸಲಿನಲ್ಲಿ ನಾಯಿ, ಬೆಕ್ಕಿನೊಂದಿಗೆ ವಾಸವಾಗಿದ್ದ ರುಕ್ಮಯ ಮತ್ತು ವಿಜಯ ಎಂಬ ಮಕ್ಕಳಿಲ್ಲದ ಹಿರಿಯ ದಂಪತಿಗೆ ಬಿಜೆಪಿ ಮುಖಂಡ ಹಾಗೂ ದಿ ಮೈಸೂರು ಇಲೆಕ್ಟ್ರಿಕಲ್ಸ್ (ಲಿ)ನ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೆಸರಲ್ಲಿ ನಿರ್ಮಿಸಿ ಕೊಡಲಿರುವ ಆರನೇ ನೂತನ ಮನೆ "ನಮೋ ಕುಟೀರ -6"ಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿಸಲಾಯಿತು.
ನೂತನ ಮನೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿದ ಬಳಿಕ ಮಾತನಾಡಿದ ಸಂತೋಷ್ ಕುಮಾರ್ ರೈ ರುಕ್ಮಯ ಮತ್ತು ವಿಜಯ ದಂಪತಿ ಮಕ್ಕಳಿಲ್ಲದ ಕೊರಗಲ್ಲೇ ತಮ್ಮ ಜೀವನ ಕಳೆದಿದ್ದಾರೆ. ಅವರು ನೆಲೆಸಿದ್ದ ಮನೆಯೂ ಕುಸಿದು ಬೀಳುವ ಸ್ಥಿತಿಯಲ್ಲಿತ್ತು. ಸ್ಥಳೀಯ ಪಂಚಾಯತ್ ನವರೂ ಸುರಕ್ಷತೆಯ ದೃಷ್ಟಿಯಲ್ಲಿ ಹಿರಿಯ ದಂಪತಿಯನ್ನ ಮನೆಯಿಂದ ಸ್ಥಳಾಂತರವಾಗುವಂತೆ ನೋಟೀಸು ನೀಡಿದ್ದರು. ದಂಪತಿಯ ಅಸಹಾಯಕ ಸ್ಥಿತಿಯ ಬಗ್ಗೆ ಗ್ರಾಮದ ಮುಖ್ಯಸ್ಥರು ನನಗೆ ತಿಳಿಸಿದ್ದರು. ಕಳೆದ ಜುಲೈ 27 ರಂದು ಅಸೈಗೋಳಿಯ ಅಭಯಾಶ್ರಮದಲ್ಲಿ ನಡೆದಿದ್ದ ನನ್ನ ಹುಟ್ಟುಹಬ್ಬ ದಿನಾಚರಣೆಯಂದು ಸೋಮೇಶ್ವರ ಉಚ್ಚಿಲದ ಬೋವಿ ಸಮುದಾಯದ ಗುರಿಕಾರರು ಮತ್ತು ಕುಲಾಲ ಸಮಾಜದ ರುಕ್ಮಯ ದಂಪತಿಗೆ ಮನೆ ನಿರ್ಮಿಸಿ ಕೊಡುವುದಾಗಿ ವಾಗ್ದಾನ ನೀಡಿದ್ದೆ. ವಿಪರೀತ ಮಳೆಯಿದ್ದ ಕಾರಣ ಮನೆ ನಿರ್ಮಾಣದ ಕೆಲಸ ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ರುಕ್ಮಯ ದಂಪತಿಗೆ ಮನೆ ನಿರ್ಮಿಸುವ ಭಾಗ್ಯ ಒದಗಿದ್ದು, ಫಲಾನುಭವಿಗಳ ಮುಖದ ನಗುವಿನಿಂದ ನನ್ನ ಮತ್ತು ಕುಟುಂಬಸ್ಥರ ಹೃದಯ ತುಂಬಿ ಬಂದಿದೆ.




ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲಿ ಅಶಕ್ತರಿಗೆ ನಿರ್ಮಿಸುತ್ತಿರುವ ಆರನೇ ನಮೋ ಕುಟೀರದ ಯೋಜನೆ ಇದಾಗಿದೆ. ಐದು ಕುಟೀರಗಳ ಗೃಹಪ್ರವೇಶವು ಭಾರೀ ವಿಜೃಂಭಣೆಯಿಂದ ನಡೆದಿದ್ದು ಆರನೆಯ ಕುಟೀರದ ಉದ್ಘಾಟನೆಯೂ ಅದಕ್ಕಿಂತಲೂ ವಿಜೃಂಭಣೆಯಿಂದ ನೆರವೇರಲಿದೆ. ಆರನೇ ಯೋಜನೆಯಲ್ಲೂ ಮನೆ ನಿರ್ಮಾಣದಿಂದ ಹಿಡಿದು ಗೃಹಪ್ರವೇಶದ ಎಲ್ಲಾ ಖರ್ಚು ವೆಚ್ಚಗಳನ್ನ ಭರಿಸುವ ಶಕ್ತಿ ನನಗೆ ಒದಗಿಸಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಈ ಕಾರ್ಯಕ್ಕೆ ನನ್ನ ಪತ್ನಿ, ಮಕ್ಕಳು ಸಂಪೂರ್ಣ ಬೆಂಬಲ ನೀಡುತ್ತಾ ಬಂದಿದ್ದಾರೆ. ವಾಸ್ತು ಪ್ರಕಾರವಾಗಿಯೇ ಎಲ್ಲಾ ವ್ಯವಸ್ಥೆಯುಳ್ಳ ಸುಸಜ್ಜಿತ ತಾರಸಿ ಮನೆಯನ್ನ ಮೂರು ತಿಂಗಳೊಳಗಾಗಿ ನಿರ್ಮಿಸಿ ಕೊಡಲಾಗುವುದೆಂದರು.
ಮಾಜಿ ಪಂಚಾಯತ್ ರಾಜ್ ಇಲಾಖೆಯ ಓಂಬುಡ್ಸ್ ಮೆನ್ ಶೀನ ಶೆಟ್ಟಿ ಮಾತನಾಡಿ ನಿಜವಾಗಿಯೂ ಇದೊಂದು ದೇವತಾ ಕಾರ್ಯವಾಗಿದೆ. ಸಂತೋಷ್ ಕುಮಾರ್ ಬೋಳಿಯಾರ್ ಅವರು ಅಶಕ್ತ ಕುಟುಂಬಕ್ಕೆ ಭರವಸೆಯ ಬೆಳಕಾಗಿದ್ದಾರೆ. ಇಂತಹ ಮಾನವೀಯ ಕಾರ್ಯಗಳನ್ನ ನಡೆಸಲು ವಿಶಾಲ ಮನಸ್ಸು ಅಗತ್ಯ. ಸಮಾಜಕ್ಕೆ ಇದೊಂದು ಮಾದರಿ ಕಾರ್ಯವಾಗಿದೆ ಎಂದರು.
ವೇದಮೂರ್ತಿ ಭಾಸ್ಕರ ಭಟ್ ಪೌರೋಹಿತ್ಯದಲ್ಲಿ ಶಿಲಾನ್ಯಾಸ ನೆರವೇರಿತು. ಸಂತೋಷ್ ಬೋಳಿಯಾರ್ ಪತ್ನಿ ವೀಣಾ ರೈ, ಪುತ್ರಿ ಸ್ಪರ್ಶ ಎಸ್.ರೈ, ಪುತ್ರ ಸಮ್ಯಕ್ತ್ ರೈ ಬೋಳಿಯಾರ್ , ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯವಾಹ ನಾಗೇಶ್ ಕುಂಪಲ, ತಾಲೂಕು ಕಾರ್ಯವಾಹ ಮನೋಹರ್ ಕುರ್ನಾಡು, ಸ್ಥಳದಾನಿ ದಮಯಂತಿ ಮೊದಲಾದವರು ಉಪಸ್ಥಿತರಿದ್ದರು.
In a heartwarming gesture, BJP leader and former chairman of Mysore Electricals Ltd., Santosh Kumar Rai Boliyar, laid the foundation stone for the sixth house under his ‘Namo Kutira’ initiative — providing a new home to an elderly childless couple living in dire conditions in Kurnadu village, Ullal.
16-12-25 03:08 pm
Bangalore Correspondent
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
ಹೊಟೇಲಿನಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದಾಗ ಪೊ...
15-12-25 02:20 pm
MLA Shamanur Shivashankarappa Death: ದೇಶದ ಅತಿ...
14-12-25 11:37 pm
16-12-25 06:33 pm
HK News Desk
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
ಸಿಡ್ನಿಯ ಕಡಲತೀರದಲ್ಲಿ ರಕ್ತದೋಕುಳಿ ; ಸಾಮೂಹಿಕ ಗುಂಡ...
14-12-25 07:20 pm
16-12-25 10:25 pm
Mangalore Correspondent
Bride Missing, Mangalore: ಬೇರೆ ಲವ್ ಇದೆಯೆಂದರೂ...
16-12-25 08:53 pm
ಕೇರಳಕ್ಕೆ ನಾಲ್ಕು ಲಕ್ಷ ಮೌಲ್ಯದ ಎಂಡಿಎಂ ಡ್ರಗ್ಸ್ ಸಾ...
16-12-25 05:24 pm
ಕೊರಗ ಸಮುದಾಯದಲ್ಲಿ ಮೊಟ್ಟಮೊದಲ ವೈದ್ಯಕೀಯ ಪದವಿ ಪಡೆದ...
16-12-25 04:26 pm
ಆವರಣ ಗೋಡೆ ಕಾಮಗಾರಿ ವೇಳೆ ಗುಡ್ಡ ಕುಸಿತ ; ಮಣ್ಣಿನಡಿ...
16-12-25 01:23 pm
16-12-25 10:35 pm
Mangalore Correspondent
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm
Bangalore crime, Fake Police: ಪೊಲೀಸ್ ಸಮವಸ್ತ್ರ...
15-12-25 11:42 am