ಬ್ರೇಕಿಂಗ್ ನ್ಯೂಸ್
11-08-20 04:59 am Mangalore Reporter ಕರಾವಳಿ
ಪುತ್ತೂರು, ಆಗಸ್ಟ್ 11: ತುಂಡಾಗಿ ರಸ್ತೆಯಲ್ಲಿ ಬಿದ್ದಿದ್ದ ಹೈಟೆನ್ಶನ್ ವಿದ್ಯುತ್ ತಂತಿ ತಗಲಿ ಬೈಕ್ ಸಮೇತ ಸವಾರ ಸ್ಥಳದಲ್ಲೇ ಸುಟ್ಟು ಕರಕಲಾದ ಘಟನೆ ಸುಳ್ಯ ತಾಲೂಕಿನ ಪಡ್ಪಿನಂಗಡಿಯಲ್ಲಿ ನಡೆದಿದೆ.
ಮೃತರನ್ನು ಮಂಡೆಕೋಲು ನಿವಾಸಿ ಉಮೇಶ್ ಗೌಡ (44) ಎಂದು ಗುರುತಿಸಲಾಗಿದೆ. ಸುಬ್ರಹ್ಮಣ್ಯ ಬಳಿಯ ಬಳ್ಪದಲ್ಲಿ ಆತನ ಹೆಂಡ್ತಿ ಮನೆಯಿದ್ದು ನಿನ್ನೆ ಸಂಜೆ ಬಂದಿದ್ದ ಉಮೇಶ್, ಇಂದು ನಸುಕಿನಲ್ಲಿ 4.30ಕ್ಕೆ ಮನೆಯತ್ತ ಹೊರಟಿದ್ದ. ಮನೆಯಲ್ಲಿ ಹಾಲು ಕರೆಯಲು ಇದೆಯೆಂದು ಬೈಕಿನಲ್ಲಿ ಬೇಗ ಹೊರಟಿದ್ದ ಉಮೇಶ್ ಅರ್ಧ ದಾರಿಯಲ್ಲೇ ಬಾರದ ಲೋಕಕ್ಕೆ ಹೋಗಿದ್ದಾರೆ. ನಿಂತಿಕಲ್ಲು ಬಳಿಯ ಪಡ್ಪಿನಂಗಡಿ ಎಂಬಲ್ಲಿ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಮಳೆಯಿಂದ ಒದ್ದೆಯಾಗಿದ್ದ ಬೈಕಿಗೆ ಸುಲಭದಲ್ಲಿ ಪ್ರವಹಿಸಿದ್ದು ಬೆಂಕಿ ಹತ್ತಿಕೊಂಡಿದೆ. ಬೈಕ್ ಮತ್ತು ಸವಾರ ಸ್ಥಳದಲ್ಲಿಯೇ ಹೊತ್ತಿ ಉರಿದಿದ್ದು ಜೀವಂತ ದಹನವಾಗಿದ್ದಾರೆ. 5 ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಈ ಸಮಯದಲ್ಲಿ ರಸ್ತೆಯಲ್ಲಿ ಜನರ ಸಂಚಾರ ಇಲ್ಲದೇ ಇದ್ದುದರಿಂದ 6 ಗಂಟೆ ಬಳಿಕವೇ ಘಟನೆ ಸ್ಥಳೀಯರಿಗೆ ತಿಳಿದುಬಂದಿದೆ.
ಪುತ್ತೂರು - ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ವಿದ್ಯುತ್ ತಂತಿ ಹೈವೇ ರಸ್ತೆಗೆ ಅಡ್ಡಲಾಗಿ ಬಿದ್ದಿರುವುದು ಹೇಗೆ ಎನ್ನುವುದು ತಿಳಿದುಬಂದಿಲ್ಲ. ಘಟನೆ ನೋಡಿದರೆ ಬೆಚ್ಚಿ ಬೀಳುವ ರೀತಿಯಿದೆ. ಬೈಕ್ ಮತ್ತು ಅದರಲ್ಲಿನ ಸವಾರ ಬಿದ್ದಿರುವ ಜಾಗದಲ್ಲೇ ಧಗ ಧಗನೆ ಉರಿಯುವ ದೃಶ್ಯ ಮನ ಕಲಕುವಂತಿದೆ.
Video:
29-03-25 03:13 pm
HK News Desk
Naxal Karanataka, Anti Naxal Force: ನಕ್ಸಲ್ ನಿ...
28-03-25 10:47 pm
Minister Rajanna, honeytrap, Son, Murder atte...
28-03-25 12:19 pm
Yatnal expulsion, Ramesh Jarkiholi: ಯತ್ನಾಳ್...
27-03-25 06:41 pm
Nandini Milk Rate: ಬೆಲೆ ಏರಿಕೆ ಬಿಸಿಯಿಂದ ತತ್ತರಿ...
27-03-25 04:49 pm
29-03-25 01:27 pm
HK News Desk
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
Elon Musk, Fraud India: ವಿಶ್ವದ ನಂಬರ್ 1 ಶ್ರೀಮಂ...
28-03-25 01:38 pm
Vladimir Putin, Zelensky: ರಷ್ಯಾ ಅಧ್ಯಕ್ಷ ಪುಟಿನ...
28-03-25 01:07 pm
Uber, Ola, Sahkar Taxi: ಓಲಾ, ಉಬರ್ ರೀತಿಯಲ್ಲೇ ಸ...
27-03-25 04:07 pm
28-03-25 11:16 pm
Udupi Correspondent
Mangalore University, Rajendra Kumar, Rohan M...
28-03-25 07:38 pm
Cow Transport, Kaikamba, Bajrang Dal, Mangalo...
28-03-25 11:52 am
Mangalore Jail, Mobile Jammer: ಎತ್ತಿಗೆ ಜ್ವರ ಬ...
27-03-25 08:45 pm
Mangalore Kukke Subrahmanya Temple: ರಾಜ್ಯದ ಶ್...
27-03-25 07:53 pm
28-03-25 09:25 pm
Mangalore Correspondent
Ccb Mangalore, Drugs, Charas, Crime: ಸಿಸಿಬಿ ಪ...
28-03-25 08:37 pm
Bangalore Murder, Techie: ಮುದ್ದಾದ ಪತ್ನಿಯನ್ನು...
28-03-25 06:12 pm
Kodagu Murder, Four Killed: ಕೊಡಗು ; ಅತ್ತೆ - ಮ...
28-03-25 05:41 pm
CISF Arrest, Robbery, Kolkata: ಐಟಿ ಅಧಿಕಾರಿಗಳ...
27-03-25 01:37 pm