ಗೃಹ ಸಚಿವ ಬೊಮ್ಮಯಿ ಜಸ್ಟ್ ಮಿಸ್ !

11-08-20 08:22 am       Udupi Reporter   ಕರಾವಳಿ

ಪಡುಬಿದ್ರೆ ಕಡಲತೀರಕ್ಕೆ ಭೇಟಿ ನೀಡಿದ ಬೊಮ್ಮಾಯಿ ಬೀಚ್ ನ ಕಡಲ್ಕೊರೆತ ಪ್ರದೇಶ ಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಮುದ್ರಕ್ಕಿಳಿದ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭಾರೀ ಅಲೆಯೊಂದು ಅಪ್ಪಳಿಸಿದೆ.

ಉಡುಪಿ, ಆಗಸ್ಟ್ 10: ಕಡಲ ಕೊರೆತ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಯಿ ಸಮುದ್ರ ಪಾಲಾಗುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಘಟನೆ ಉಡುಪಿಯ ಪಡುಬಿದ್ರೆ ಕಡಲ ಕಿನಾರೆಯಲ್ಲಿ ನಡೆದಿದೆ.

ಉಡುಪಿಯಲ್ಲಿ ಕಳೆದ ಕೆಲದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು ಇಲ್ಲಿಯ ಪರಿಸ್ಥಿತಿ ಪರಿಶೀಲಿಸಲು ಇಂದು ಗೃಹ ಸಚಿವ ಹಾಗು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬಸವರಾಜ ಬೊಮ್ಮಾಯಿ ಉಡುಪಿಗೆ ಬೇಟಿ ನೀಡಿ ನೆರೆ ಪರಿಶೀಲನೆ  ಪ್ರವಾಸ ಕೈಗೊಂಡಿದ್ದರು.

ಪಡುಬಿದ್ರೆ ಕಡಲತೀರಕ್ಕೆ ಭೇಟಿ ನೀಡಿದ ಬೊಮ್ಮಾಯಿ ಬೀಚ್ ನ ಕಡಲ್ಕೊರೆತ ಪ್ರದೇಶ ಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಮುದ್ರಕ್ಕಿಳಿದ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭಾರೀ ಅಲೆಯೊಂದು ಅಪ್ಪಳಿಸಿದೆ. ಆದರೆ ಅವರೊಂದಿಗಿದ್ದ ಉಡುಪಿ ಎಸ್ ಪಿ ವಿಷ್ಣುವರ್ಧನ್  ಹಾಗು ಬಿಜೆಪಿ ಮುಖಂಡರು ಸಚಿವರನ್ನು ರಕ್ಷಿಸಿದರು.ಆದರೆ ಸಚಿವರ ಚಪ್ಪಲಿ ಮಾತ್ರ ಸಮುದ್ರ ಪಾಲಾಗಿದೆ.