ಬ್ರೇಕಿಂಗ್ ನ್ಯೂಸ್
25-05-26 01:08 pm HK News Staffer ಕರಾವಳಿ
ಮಂಗಳೂರು, ಮೇ 25: ಅಮೆರಿಕದಲ್ಲಿ ಚರ್ಚ್ ಧರ್ಮಗುರುವಾಗಿ ಹುಟ್ಟೂರು ಮಂಗಳೂರಿನ ಬಗ್ಗೆ ನಿಕಟ ಪ್ರೀತಿ ಇರಿಸಿಕೊಂಡಿದ್ದ, ಹಲವಾರು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಫಾ. ಮೊನ್ಸಿಜೆರ್ ಲೆಸ್ಲಿ ಶೆಣಯ್ (79) ಭಾನುವಾರ ಮೇ 24ರಂದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು.
ಮಂಗಳೂರಿನ ಉರ್ವಾ ಮೂಲದ ಶೆಣಯ್, 1976ರ ಮೇ 14ರಂದು ಧರ್ಮಗುರುಗಳಾಗಿ ದೀಕ್ಷೆ ಪಡೆದು, 1979ರಿಂದ ಅಮೆರಿಕದ ಫ್ರೆಸ್ನೋ ಧರ್ಮಪ್ರಾಂತ್ಯದಲ್ಲಿ ಸೇವೆ ಸಲ್ಲಿಸಿದ್ದರು. 1985ರಲ್ಲಿ ಅಮೆರಿಕದ ಪೌರತ್ವ ಪಡೆದಿದ್ದರೂ, ಹುಟ್ಟೂರಿನೊಂದಿಗೆ ನಿಕಟ ಸಂಪರ್ಕವನ್ನು ಉಳಿಸಿಕೊಂಡು, ಹಲವು ಮಾನವೀಯ ಹಾಗೂ ಶೈಕ್ಷಣಿಕ ಕಾರ್ಯಗಳಿಗೆ ಬೆಂಬಲ ನೀಡುತ್ತ ಬಂದಿದ್ದರು.
ಇವರ ಪ್ರಮುಖ ಕೊಡುಗೆಗಳಲ್ಲಿ “ಮೊ ಲೆಸ್ಲಿ ಎಫ್. ಶೆಣಯ್ ವಿದ್ಯಾರ್ಥಿವೇತನ” ಯೋಜನೆ ಪ್ರಮುಖವಾಗಿದ್ದು, ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಷನ್ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಸಹಾಯ ಮಾಡಿದ್ದರು. ಅಲ್ಲದೆ, ಸೆಮಿನರಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ, ಬಡ ಕುಟುಂಬಗಳಿಗೆ ಜೀವನೋಪಾಯಕ್ಕಾಗಿ ವಾಹನಗಳನ್ನು ದಾನ ಮಾಡಿದ್ದರು. 2025ರಲ್ಲಿ, ತಮ್ಮ ನಿವೃತ್ತಿ ಸಂಗ್ರಹದಿಂದ ಪುತ್ತೂರಿನಲ್ಲಿ ಹಿರಿಯ ನಾಗರಿಕರ ವಸತಿಗೃಹವನ್ನು ನಿರ್ಮಿಸಿ ದಾನವಾಗಿ ನೀಡಿದ್ದು, ವೃದ್ಧರಿಗೆ ಆಶ್ರಯ ಮತ್ತು ಆರೈಕೆ ಒದಗಿಸಿದ್ದರು. ಅವರ ಒಡನಾಟ ಇದ್ದವರು ಸರಳ, ಸ್ನೇಹಪರ ವ್ಯಕ್ತಿತ್ವ ಎಂದು ಸ್ಮರಿಸುತ್ತಿದ್ದಾರೆ.
ಮೃತರ ಸಾರ್ವಜನಿಕ ಅಂತಿಮ ದರ್ಶನವು ಮೇ 27ರ ಬುಧವಾರ ಮಧ್ಯಾಹ್ನ 2.30ರಿಂದ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಉರ್ವಾ ಇಮ್ಯಾಕ್ಯುಲೇಟ್ ಕನ್ಸೆಪ್ಷನ್ ಚರ್ಚ್ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಪ್ರಮುಖ ಗಣ್ಯರು ಅಗಲಿದ ಧರ್ಮಗುರುಗಳಿಗೆ ಶೋಕ ವ್ಯಕ್ತ ಪಡಿಸಿದ್ದಾರೆ.
24-05-26 09:03 pm
HK News Staffer
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
ಹಾವೇರಿ ; ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದ 8 ವರ್...
22-05-26 10:24 pm
25-05-26 10:19 am
HK News Staffer
ರಾಜ್ಯಸಭೆ ಚುನಾವಣೆ ; ಮಲ್ಲಿಕಾರ್ಜುನ ಖರ್ಗೆ, ದೇವೇಗೌ...
23-05-26 08:47 pm
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
ಬೆಲೆ ಏರಿಕೆ, ನಿರುದ್ಯೋಗ, ಮೋದಿ ವಿದೇಶ ಪ್ರವಾಸ ವಿರೋ...
23-05-26 01:59 pm
ಪೆಟ್ರೋಲ್ - ಡೀಸೆಲ್ ಬೆಲೆ ಮತ್ತೆ ಏರಿಕೆ ! ಬೆಂಗಳೂರಿ...
23-05-26 09:15 am
25-05-26 01:08 pm
HK News Staffer
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ ; 158 ಜೀವಗಳನ್...
22-05-26 09:47 pm
ಬೈಕಂಪಾಡಿ- KIOCL ಜಂಕ್ಷನ್ ಮಧ್ಯೆ ಬಹು ನಿರೀಕ್ಷಿತ ಫ...
22-05-26 08:10 pm
25-05-26 09:27 am
HK News Staffer
Bangalore Digital Arrest: ಅಕ್ರಮ ಹಣ ವರ್ಗಾವಣೆ ಹ...
24-05-26 09:01 pm
Assault on police Mangalore: ಗಸ್ತಿನಲ್ಲಿದ್ದ ಉರ...
24-05-26 06:44 pm
ವರದಕ್ಷಿಣೆ ಕಿರುಕುಳ ; ಪೊಲೀಸ್ ಕಾನ್ಸ್ ಟೇಬಲ್ ಪತ್ನಿ...
24-05-26 02:01 pm
ಉಡುಪಿಯಲ್ಲಿ ನಿರ್ಮಾಣ ಹಂತದ ಬಾವಿ ಕುಸಿದು 25 ವರ್ಷದ...
23-05-26 11:54 am