ತೊಕ್ಕೊಟ್ಟಿನಲ್ಲಿ ಅಕ್ರಮ ಬೀಫ್ ಸ್ಟಾಲ್ ; ತೆರವಿಗೆ ಆಗ್ರಹಿಸಿ ಬಜರಂಗದಳ ದೂರು

07-01-21 01:05 pm       Mangalore Correspondent   ಕರಾವಳಿ

ಅಕ್ರಮ ಭೀಪ್ ಸ್ಟಾಲ್ ಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿ ವಿಶ್ವಹಿಂದೂ ಪರಿಷತ್, ಬಜರಂಗದಳ ಘಟಕದ ಪದಾಧಿಕಾರಿಗಳು ಉಳ್ಳಾಲ ಠಾಣಾಧಿಕಾರಿಗೆ ದೂರು ನೀಡಿದ್ದಾರೆ.

ಉಳ್ಳಾಲ, ಜ.7 : ತೊಕ್ಕೊಟ್ಟು ಒಳಪೇಟೆಯ ಹಳೆಯ ಮೀನು ಮಾರುಕಟ್ಟೆ ಒಡೆದು ನೂತನ ಮಾರುಕಟ್ಟೆ ಕಾಮಗಾರಿ ನಡೆಸಲಾಗುತ್ತಿದೆ. ಈ ಮಧ್ಯೆ ಮಾರುಕಟ್ಟೆಗೆ ತಾಗಿಕೊಂಡಿರುವ ರೈಲ್ವೇ  ಇಲಾಖೆಗೆ ಸೇರಿರುವ ಪ್ರದೇಶದಲ್ಲಿ ಮೂರು ಅಕ್ರಮ ಭೀಪ್ ಸ್ಟಾಲ್ ಗಳನ್ನು ಹಾಕಲಾಗಿದ್ದು ರಾಜಾರೋಷವಾಗಿ ವಹಿವಾಟು ನಡೆಸುತ್ತಿದ್ದು ಇದನ್ನು ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿ ವಿಶ್ವಹಿಂದೂ ಪರಿಷತ್, ಬಜರಂಗದಳ ಘಟಕದ ಪದಾಧಿಕಾರಿಗಳು ಉಳ್ಳಾಲ ನಗರಸಭೆ ಆಯುಕ್ತರು ಮತ್ತು ಉಳ್ಳಾಲ ಠಾಣಾಧಿಕಾರಿಗೆ ದೂರು ನೀಡಿದ್ದಾರೆ.

ರೈಲ್ವೇ ಹಳಿಯ ಬದಿಯಲ್ಲೇ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ವ್ಯಾಪಾರ ನಡೆಸುತ್ತಿದ್ದು ಭೀಪ್ ಸ್ಟಾಲ್ ಗಳನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳದ ಉಳ್ಳಾಲ ಪ್ರಖಂಡ ಪದಾಧಿಕಾರಿಗಳು ಉಳ್ಳಾಲ ನಗರಸಭಾ ಆಯುಕ್ತರಾದ ರಾಯಪ್ಪ ಮತ್ತು ಉಳ್ಳಾಲ ಪೊಲೀಸ್ ಠಾಣಾ ಪಿಐ ಸಂದೀಪ್ ಅವರನ್ನು ಭೇಟಿಯಾಗಿ ದೂರು ನೀಡಿದ್ದಾರೆ. 

ವಿಶ್ವ ಹಿಂದೂ ಪರಿಷತ್ , ಬಜರಂಗದಳದ ಉಳ್ಳಾಲ ನಗರ ಪ್ರಖಂಡ ಸಂಚಾಲಕರಾದ ಅರ್ಜುನ್ ಮಾಡೂರ್, ಜಿಲ್ಲಾ ಸಹಗೋರಕ್ಷ ಪ್ರಮುಖರಾದ ಪವಿತ್ರ ಕೆರೆಬೈಲ್, ಉಳ್ಳಾಲ ಪ್ರಖಂಡ ಗೋರಕ್ಷಾ ಪ್ರಮುಖರಾದ  ರಕ್ಷಿತ್ ತೊಕ್ಕೊಟ್ಟು, ಸಾಪ್ತಾಹಿಕ ಪ್ರಮುಖರಾದ ಕೌಶಿಕ್ ಉಳ್ಳಾಲ ಬೈಲ್ ಇದ್ದರು.

Bajarnag Dal members have demanded the removal of illegal Beef stalls present in Ullal, Mangalore.