ಬ್ರೇಕಿಂಗ್ ನ್ಯೂಸ್
30-07-26 04:06 pm HK News Staffer ಕರಾವಳಿ
ಮಂಗಳೂರು, ಜುಲೈ 30: ಮಂಗಳೂರು-ಮೂಡುಬಿದಿರೆ ಹೆದ್ದಾರಿಯ ಎಡಪದವು ಬಳಿ ಹೊಸತಾಗಿ ನಿರ್ಮಿಸಿರುವ ಹೆದ್ದಾರಿ ಕಳೆದ ಕೆಲವು ದಿನದ ಮಳೆಯಿಂದಾಗಿ ಭಾಗಶಃ ಕುಸಿತಗೊಂಡಿದೆ. ಅಡಿಕೆ ತೋಟವಿದ್ದ ಜಾಗಕ್ಕೆ 35 ಮೀಟರ್ ಮಣ್ಣು ಸುರಿದು ಮಾಡಿದ್ದ ಹೆದ್ದಾರಿ ಕಳಪೆ ಕಾಮಗಾರಿಯಿಂದ ಕುಸಿದು ಹೋಗಿದೆ.
ಇದೇ ವೇಳೆ, ಮಂಗಳೂರಿನಿಂದ ಎಡಪದವು ಪೇಟೆಯ ಮೂಲಕ ಮೂಡುಬಿದಿರೆ ಹೋಗುವ ಪರ್ಯಾಯ ರಸ್ತೆಯ ಮೇಲ್ಬಾಗದ ಗುಡ್ಡವೂ ಕುಸಿಯುವ ಭೀತಿ ಎದುರಾಗಿದ್ದು ಇದರಿಂದಾಗಿ ಮೂಡುಬಿದಿರೆ ಮಂಗಳೂರು ಹೆದ್ದಾರಿಯೇ ಸಂಚಾರ ಸ್ಥಗಿತದ ಆತಂಕದಲ್ಲಿದೆ. ತಿಂಗಳ ಹಿಂದೆಯೇ ಮೊದಲ ಮಳೆಗೆ ಎಡಪದವು ಮುಚ್ಚೂರು ಕ್ರಾಸ್ ಬಲಭಾಗದಲ್ಲಿ ಗುಡ್ಡ ಕುಸಿದು ಆತಂಕಕ್ಕೆ ಕಾರಣವಾಗಿತ್ತು. ಈಗ ಅಲ್ಲಿಯೇ ತುಸು ಮುಂದೆ ಶಿಬಿಕೆರೆ ಭಾಗದಲ್ಲಿ ಎಡಪದವು ಬೈಪಾಸ್ ಮಾಡಲು ನಿರ್ಮಿಸಿರುವ ಚತುಷ್ಪಥ ಹೆದ್ದಾರಿಯು ಭಾಗಶಃ ಕುಸಿತಗೊಂಡಿದ್ದು, ಸಂಚಾರಕ್ಕೆ ತೊಂದರೆಯಾಗಿದೆ.
ಕುಲಶೇಖರ-ಸಾಣೂರು ರಾಷ್ಟ್ರೀಯ ಹೆದ್ದಾರಿ 169ರ ಈ ಭಾಗವು ಕೆಲವು ದಿನ ಗಳಿಂದ ತೀವ್ರಗೊಂಡಿರುವ ಮಳೆಯಿಂದಾಗಿ ಅರ್ಧಕ್ಕೆ ಕುಸಿತದಿದೆ. ನೀರು ಹರಿಯುವ ಹಾಗೂ ಅಡಿಕೆ, ತೆಂಗಿನ ತೋಟವಿದ್ದ ಜಾಗಕ್ಕೆ ಇನ್ನೊಂದು ಬದಿಯ ಗುಡ್ಡದಿಂದ ಟನ್ ಗಟ್ಟಲೆ ಮಣ್ಣು ಸುರಿದು ಸುಮಾರು 35 ಅಡಿಗಳಷ್ಟು ಎತ್ತರಕ್ಕೇರಿಸಿ ಈ ರಸ್ತೆ ನಿರ್ಮಿಸಲಾಗಿತ್ತು. ಗುಡ್ಡದ ಒಂದು ಬದಿಯಿಂದ ನೀರು ಹರಿದು ಹೋಗುತ್ತಿದ್ದ ಜಾಗವಾಗಿದ್ದು ಇಲ್ಲಿ 35 ಅಡಿಯಷ್ಟು ಎತ್ತರಕ್ಕೆ ಮಣ್ಣು ತುಂಬಿದ್ದು ತಳಭಾಗದಲ್ಲಿ ಸಣ್ಣ ಚರಂಡಿ ನಿರ್ಮಿಸಲಾಗಿದೆ. ಆದರೆ ಭಾರೀ ಮಳೆ, ಪ್ರವಾಹದಿಂದ ಚರಂಡಿ ಮತ್ತು ಅಡಿಕೆ ತೋಟದಲ್ಲಿ ಮಳೆ ನೀರು ತುಂಬಿದ್ದು ಬ್ಲಾಕ್ ಆಗಿದೆ. ಇದರಿಂದಾಗಿ ಹೆದ್ದಾರಿಗೆ ತುಂಬಿರುವ ಮಣ್ಣು ಸಹಿತ ರಸ್ತೆ ಕುಸಿದು ಹೋಗಿದೆ. ಈ ಭಾಗದಲ್ಲಿ ಹೊಸ ರಸ್ತೆ ಇದೇ ಮಳೆಗಾಲದಲ್ಲಿ ಕುಸಿದು ಹೋಗುವ ಸಾಧ್ಯತೆ ಇದೆಯೆಂದು ಹೆಡ್ ಲೈನ್ ಕರ್ನಾಟಕ ತಿಂಗಳ ಹಿಂದೆಯೇ ವರದಿ ಮಾಡಿತ್ತು.



"ಕಳೆದ ವರ್ಷ ಮಾರ್ಚ್ನಲ್ಲಿ ಡಿಸಿ, ಎನ್ಎಚ್ಎಐಗೆ ಮನವಿ ಕೊಟ್ಟಿದೆವು. ಒಂದು ಭಾಗ ಗುಡ್ಡ ಗುಡ್ಡ ಇದ್ದು, 35 ಅಡಿ ಎತ್ತರದ ಹೆದ್ದಾರಿ ಮಾಡಿರುವ ಕಾರಣ ಮಳೆ ನೀರು ನಿಂತು ಕುಸಿಯಬಹುದು ಎನ್ನುವ ಬಗ್ಗೆ ದೂರು ಕೊಟ್ಟಿದ್ದವು. ಆದರೆ ಅಧಿಕಾರಿಗಳು ಗಮನ ಕೊಡಲಿಲ್ಲ. ನಮಗೆ ಸರಿಯಾದ ಚರಂಡಿ ವ್ಯವಸ್ಥೆ ಮತ್ತು ಸರ್ವಿಸ್ ರಸ್ತೆ, ಅಂಡರ್ ಪಾಸ್ ಕೇಳಿದ್ದೆವು. ಏನೂ ಮಾಡಿಕೊಡಲಿಲ್ಲ, ಈಗ ಅನುಭವಿಸಬೇಕಾದ ಸ್ಥಿತಿ ಬಂದಿದೆ ಎಂದು ಸ್ಥಳೀಯರು ಅಳಲು ಹೇಳಿಕೊಂಡಿದ್ದಾರೆ.
ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಡಿಕ, ತೆಂಗಿನ ಮರ ಇರುವ ನಾಲ್ಕು ಎಕ್ರೆ ತೋಟದಲ್ಲಿ 2-3 ಅಡಿ ನೀರು ನಿಂತಿದೆ. ಒಂದು ತಿಂಗಳಿನಿಂದ ನೀರು ಹರಿದು ಹೋಗದೆ ಇದೇ ರೀತಿ ನಿಂತ ಕಾರಣ ಮರಗಳೇ ಕೊಳೆತು ಹೋಗುವ ಭೀತಿ ಇದೆ ಎಂದು ಸ್ಥಳೀಯರಾದ ಜಾನ್ ಡಿ'ಸೋಜಾ ಹಾಗೂ ಸುದರ್ಶನ್ ಅವರು ಅಳಲು ತೋಡಿಕೊಂಡಿದ್ದಾರೆ. ಮುಚ್ಚೂರು ಹೋಗುವ ರಸ್ತೆಯ ಮೇಲ್ಬಾಗದಲ್ಲಿ ಜೆಸಿಬಿ ಮೂಲಕ ಮಣ್ಣು, ಬಂಡೆ ತೆರವು ಮಾಡುವ ಕೆಲಸ ನಡೆದಿದೆ. ಆದರೆ ಮಳೆ ಇನ್ನೂ ಹೆಚ್ಚಾಗಿ ನೀರು ಹೆಚ್ಚಿನ ಪ್ರಮಾಣದಲ್ಲಿ ಬಂದರೆ ಇಡೀ ರಸ್ತೆಯೇ ಕೊಚ್ಚಿಕೊಂಡು ಹೋಗಿ ಎಡಪದವು ಗ್ರಾಮದ ತೋಟಕ್ಕೆ ನುಗ್ಗುವ ಸಾಧ್ಯತೆ ಇದೆ.
19-08-26 09:55 pm
HK News Staffer
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
ವಂದೇ ಮಾತರಂ ವಿವಾದ ; ಜೈಲಿಗೆ ಹಾಕಿದ್ರೂ ನಾನು ವಂದೇ...
19-08-26 02:15 pm
ಆಹಾರ ಸುರಕ್ಷತೆಗೆ ಖಾದರ್ ಹೊಸ ಪ್ಲ್ಯಾನ್; ಹೋಟೆಲ್ ಆ...
17-08-26 02:26 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
19-08-26 08:40 pm
HK News Staffer
ಜೈಲಿನ ಜಾಮರ್ ಸಮಸ್ಯೆ ಇತ್ಯರ್ಥಕ್ಕೆ ಕಾಲಮಿತಿ ನಿಗದಿಪ...
19-08-26 04:19 pm
ಕರಾವಳಿಯಲ್ಲಿ ನಾಗರ ಪಂಚಮಿ ಸಂಭ್ರಮ ; ನಾಗಬನ, ನಾಗ ಸ...
17-08-26 05:07 pm
ನಾಗರಪಂಚಮಿ ; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸ...
16-08-26 09:33 pm
After Rotten Chicken Scare at KFC, McDonald’s...
16-08-26 08:29 pm
20-08-26 01:58 pm
HK News Staffer
4.91 ಕೋಟಿ ರೂ. ಮೌಲ್ಯದ ನಕಲಿ ಔಷಧಿ ದಂಧೆ ಬಯಲು; ಆಸ...
19-08-26 07:25 pm
ಆಸ್ತಿ ವಿವಾದ ; ಪ್ರಿಯಕರನ ಜೊತೆ ಸೇರಿ ಅಪ್ಪನನ್ನ ಕಲಿ...
18-08-26 10:06 pm
ಮೊಬೈಲ್ ಗೀಳು ಬೇಡ ಎಂದಿದ್ದ ಅಜ್ಜನನ್ನೇ ಕೊಲ್ಲಿಸಿದ 1...
18-08-26 06:02 pm
ಚಿಕ್ಕಬಾಣಾವರ ತಂದೆ, ಮಗು ಸಾವಿಗೆ ರೋಚಕ ಟ್ವಿಸ್ಟ್ ;...
18-08-26 03:00 pm