ಬ್ರೇಕಿಂಗ್ ನ್ಯೂಸ್
09-01-21 02:19 pm Mangalore Correspondent ಕರಾವಳಿ
ಉಳ್ಳಾಲ, ಜ.9: ತೊಕ್ಕೊಟ್ಟು ಒಳಪೇಟೆಯ ಅಂಗಡಿಯೊಂದರಲ್ಲಿ ಸೀಯಾಳ ಕುಡಿಯುತ್ತಾ ನಿಂತಿದ್ದ ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಮತ್ತು ಅವರ ತಂಡ ಇದ್ದ ಜಾಗಕ್ಕೆ ಬಂದ ತಾತಪ್ಪನೊಬ್ಬ ಸಾರ್ವಜನಿಕವಾಗಿ ಎಲ್ರೂ ಮಾಸ್ಕ್ ಹಾಕ್ರಿ ಎಂದು ಬೊಬ್ಬೆ ಹೊಡೆದು ಪೊಲೀಸರನ್ನು ಪರೋಕ್ಷವಾಗಿ ಎಚ್ಚರಿಸಿದ ಘಟನೆ ನಡೆದಿದೆ.
ತಾತಪ್ಪನ ಕಾಳಜಿ ಕಂಡು ಅವ ಅವಾಕ್ಕಾದ ಪೊಲೀಸ್ ಕಮಿಷನರ್ ಕೂಡ ಮಾಸ್ಕನ್ನು ಮುಖಕ್ಕೆ ಏರಿಸಿಕೊಂಡು ತಾತಪ್ಪನನ್ನು ಹತ್ತಿರಕ್ಕೆ ಕರೆದು ಸೀಯಾಳ ಕೊಟ್ಟು ಉಪಚರಿಸಿದ್ದಾರೆ.

ತೊಕ್ಕೊಟ್ಟು ಒಳಪೇಟೆಯ ಮೂರು ಅನಧಿಕೃತ ಬೀಫ್ ಸ್ಟಾಲ್ ಗಳಿಗೆ ನಿನ್ನೆ ರಾತ್ರಿ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು ಘಟನಾ ಸ್ಥಳಕ್ಕೆ ಇಂದು ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಮೀಷನರ್, ಡಿಸಿಪಿ, ಎಸಿಪಿ, ಉಳ್ಳಾಲ ಪಿಐ ಅವರನ್ನು ಒಳಗೊಂಡಿದ್ದ ತಂಡವು ಒಳಪೇಟೆಯ ಅಂಗಡಿಯೊಂದರಲ್ಲಿ ಸೀಯಾಳ ಕುಡಿದು ಮಾಸ್ಕನ್ನು ಕತ್ತಿಗೆ ಜಾರಿಸಿಕೊಂಡು ಮಾತುಕತೆಯಲ್ಲಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಸ್ಥಳೀಯ ಪ್ರಾಯದ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಮಾಸ್ಕ್ ಹಾಕ್ರಿ ಎಂದು ಗಟ್ಟಿಯಾಗಿ ಒಸರಿದ್ದು, ಇದು ಪೊಲೀಸ್ ತಂಡಕ್ಕೂ ಪರೋಕ್ಷವಾಗಿ ಎಚ್ವರಿಸಿದಂತಿತ್ತು. ಕೂಡಲೇ ಕಮೀಷನರ್, ಡಿಸಿಪಿಯವರು ಕತ್ತಲ್ಲಿದ್ದ ಮಾಸ್ಕನ್ನು ಮುಖಕ್ಕೆ ಏರಿಸಿಕೊಂಡಿದ್ದಾರೆ.

ಈ ವೇಳೆ, ಕಮಿಷನರ್ ಅವರ ಸಹಾಯಕರು ತಾತಪ್ಪ ಸೇರಿ ಸಾರ್ವಜನಿಕರನ್ನು ಗದರಿಸಲು ಮುಂದಾಗಿದ್ದಾರೆ. ಕಮಿಷನರ್ ಶಶಿಕುಮಾರ್ ಮಾತ್ರ ಮಾಸ್ಕ್ ಬಗ್ಗೆ ಕಾಳಜಿ ಮೂಡಿಸಿದ ತಾತಪ್ಪನನ್ನು ಆಲಿಂಗಿಸಿ ಸೀಯಾಳ ಕೊಟ್ಟು ಉಪಚರಿಸಿ ಸ್ಥಳದಿಂದ ತೆರಳಿದ್ದಾರೆ.
An Elderly Man in Ullal was found advising Police Commissioner and team to wear mouth mask when they were found without wearing a mask.
07-02-26 05:09 pm
HK News Desk
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
Sanjana Bus Fire Accident, Nelamangala: ಮತ್ತೊ...
06-02-26 12:30 pm
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
07-02-26 10:53 pm
HK News Desk
ಕಣ್ಣೆದುರೇ ನಡೆದ ಅಚ್ಚರಿ ; 1 ಲಕ್ಷ ರೂ. ಮೌಲ್ಯದ ಚಿನ...
06-02-26 10:58 pm
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
07-02-26 12:55 pm
HK staffer
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
ಬಿಜೆಪಿಯವರು ತಿಪ್ಪರಲಾಗ ಹೊಡೆದ್ರೂ ಅಧಿಕಾರಕ್ಕೆ ಬರಲ್...
06-02-26 10:56 pm
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
08-02-26 12:59 pm
Mangaluru Staffer
Mangalore Robbery, Crime: ಕಳವಾರಿಗೆ ಮೆಹಂದಿ ಹೋಗ...
08-02-26 12:37 pm
ಫ್ರೀ ಫೈರ್ ಗೇಮ್ ಚಟ ; ಅಕ್ಕನ ಮಗನ ಕೊಂದಿದ್ದ ಮಾವ, ಪ...
07-02-26 10:48 pm
ಡಿಜಿಟಲ್ ಅರೆಸ್ಟ್ ; ಮಹಿಳೆಗೆ 15 ನಿಮಿಷದಲ್ಲಿ 50 ಲಕ...
07-02-26 10:07 pm
ಪುತ್ತೂರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ; ಪ...
07-02-26 08:14 pm