ಬ್ರೇಕಿಂಗ್ ನ್ಯೂಸ್
10-01-21 11:23 am Mangalore Correspondent ಕರಾವಳಿ
ಮಂಗಳೂರು, ಜ.10: ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತೆ ಸಾಮಾನ್ಯ ಜನರೊಂದಿಗೆ ಬೆರೆತು ಕ್ರಿಕೆಟ್ ಆಡಿದ್ದಾರೆ. ಉಳ್ಳಾಲಕ್ಕೆ ಭೇಟಿ ನೀಡಿದ್ದ ವೇಳೆ, ಅಲ್ಲಿನ ಕೋಡಿಯಲ್ಲಿ ಯುವಕರು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ, ಮೈದಾನಕ್ಕಿಳಿದ ಕಮಿಷನರ್ ಬ್ಯಾಟ್ ಬೀಸಿ ಗಮನ ಸೆಳೆದಿದ್ದಾರೆ.
ಸಾಮಾನ್ಯವಾಗಿ ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ ಅಂದರೆ ಜಿಲ್ಲೆಯ ಮಟ್ಟಿಗೆ ಸುಪ್ರೀಂ ಪವರ್. ಐಪಿಎಸ್ ಅಧಿಕಾರಿಗಳಾಗಿರುವುದರಿಂದ ಜನಸಾಮಾನ್ಯರ ಹತ್ತಿರ ಹೋಗದೆ ತಾವು ವಿಭಿನ್ನ ಅನ್ನುವುದನ್ನು ತೋರಿಸಿಕೊಳ್ಳುತ್ತಾರೆ. ಗತ್ತು ಗೈರತ್ತನ್ನು ಉಳಿಸಿಕೊಂಡು ಸುತ್ತಮುತ್ತ ಪೊಲೀಸರ ಕಾವಲನ್ನು ಇಟ್ಟುಕೊಂಡೇ ರಸ್ತೆಗೆ ಇಳಿಯುತ್ತಾರೆ. ಅಂಥದ್ರಲ್ಲಿ ಮಂಗಳೂರಿಗೆ ಬಂದಿರುವ ನೂತನ ಕಮಿಷನರ್ ಎನ್. ಶಶಿಕುಮಾರ್ ತುಂಬ ಡಿಫರೆಂಟ್ ಆಗಿ ಕಾಣುತ್ತಿದ್ದಾರೆ. ಸಾಮಾನ್ಯ ಜನರನ್ನು ಹತ್ತಿರ ಕರೆದು ಮಾತಾಡಿಸುವ ಜೊತೆಗೆ ಫೀಲ್ಡಲ್ಲಿ ಇರುವಾಗಲೇ ಯುವಕರ ಜೊತೆ ಬೆರೆತು ಕ್ರಿಕೆಟ್ ಆಡಿದ್ದಾರೆ.
ನಿನ್ನೆ ಉಳ್ಳಾಲಕ್ಕೆ ತೆರಳಿದ್ದ ಕಮಿಷನರ್ ಶಶಿಕುಮಾರ್, ಡಿಸಿಪಿ, ಎಸಿಪಿ ಮತ್ತು ಪೊಲೀಸರ ಪಡೆಯೊಂದಿಗೆ ರಸ್ತೆಯಲ್ಲಿ ಸುತ್ತಾಡಿದ್ದಾರೆ. ಈ ಮೂಲಕ ಸ್ಥಳ ಪರಿಚಯದ ಜೊತೆ ಅಲ್ಲಿನ ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಈ ವೇಳೆ, ಉಳ್ಳಾಲ ದರ್ಗಾ ಭೇಟಿ ನೀಡಿದ ಕಮಿಷನರ್ ಮತ್ತು ತಂಡ ದರ್ಗಾ ಕಮಿಟಿ ಸದಸ್ಯರ ಜೊತೆ ಮಾತುಕತೆ ನಡೆಸಿದರು. ಬಳಿಕ ಉಳ್ಳಾಲದಲ್ಲಿ ಮೀನುಗಾರರ ಜೊತೆಗೂ ಮಾತುಕತೆ ನಡೆಸಿ, ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು. ಇದೇ ವೇಳೆ, ಮೊಗವೀರಪಟ್ನದ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನಕ್ಕೂ ತೆರಳಿ, ಹೊರಭಾಗದಿಂದಲೇ ಕೈಮುಗಿದರು.
ಈ ವೇಳೆ, ಕಮಿಷನರ್ ಜೊತೆಗೆ ಡಿಸಿಪಿ ಹರಿರಾಮ್ ಶಂಕರ್, ಸಿಸಿಬಿ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್, ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ಸೇರಿದಂತೆ 30 ಮಂದಿ ಇತರೇ ಪೊಲೀಸರು ಇದ್ದರು. ಯಾವುದೇ ಮುನ್ಸೂಚನೆ ನೀಡದೆ ಪೊಲೀಸರ ಜೊತೆಗೆ ಕೋಮು ಸೂಕ್ಷ್ಮ ಪ್ರದೇಶ ಉಳ್ಳಾಲಕ್ಕೆ ಕಮಿಷನರ್ ಭೇಟಿ ನೀಡಿ, ಜನಸಾಮಾನ್ಯರ ಜೊತೆ ಬೆರೆತಿದ್ದು ಜನರಿಗೂ ಕುತೂಹಲ ಮೂಡಿಸಿತ್ತು. ಉಳ್ಳಾಲ ಠಾಣೆ, ಕೋಡಿ, ಮೊಗವೀರಪಟ್ಣ, ನಗರಸಭೆ ಕಚೇರಿ ಆವರಣ, ಮುಕ್ಕಚ್ಚೇರಿ ಆಸುಪಾಸಿನಲ್ಲಿ ವಾಕಿಂಗ್ ಮಾಡುತ್ತಲೇ ಕಮಿಷನರ್ ಮತ್ತು ತಂಡ ಪೊಲೀಸರಿಗೆ ಮತ್ತು ಜನರಿಗೆ ಚುರುಕು ಮುಟ್ಟಿಸಿದ್ದಾರೆ. ಇದರ ಮಧ್ಯದಲ್ಲೇ ಕಮಿಷನರ್ ಬ್ಯಾಟ್ ಬೀಸಿ, ಸಿಕ್ಸರ್ ಎತ್ತಿ ಉಳ್ಳಾಲದ ಜನರಲ್ಲಿ ಆಪ್ತ ಭಾವ ಮೂಡಿಸಿದ್ದಾರೆ.
Video:
Mangalore City Polic Commissioner Shashsi Kumar turns as cool IPS officer by playing cricket with localities in Ullal. The video of this has gone viral on social media.
01-09-25 05:03 pm
HK News Desk
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
Sujatha Bhat, Latest News, Dharmasthala: ಚಿನ್...
01-09-25 01:25 pm
R. Ashoka: ಸೆ.01 ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ಎ...
31-08-25 07:17 pm
Siddaramaiah, Banumustak: ನಾಡಹಬ್ಬ ದಸರಾ ಎಲ್ಲರಿ...
31-08-25 05:35 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
01-09-25 05:05 pm
Mangalore Correspondent
Mangalore Pothole, Accident, Video Viral: ಕೆಪ...
31-08-25 10:34 pm
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
Udupi, Diksha Sets New World Record, Bharatan...
31-08-25 12:49 pm
01-09-25 03:07 pm
Udupi Correspondent
Mangalore Crime, Konaje Police, Raid, Liquor:...
01-09-25 01:58 pm
Mangalore Crime, Falnir Attack: ಪೊಲೀಸರಿಗೆ ಭಾರ...
31-08-25 10:55 pm
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm