ಬ್ರೇಕಿಂಗ್ ನ್ಯೂಸ್
19-01-21 05:31 pm Mangalore Correspondent ಕರಾವಳಿ
ಮಂಗಳೂರು, ಜ.19: ಈ ಹೆಣ್ಮಗಳಿಗೆ ಸಣ್ಣಂದಿನಿಂದಲೇ ಬೆಕ್ಕು, ನಾಯಿಗಳಂದ್ರೆ ಪಂಚಪ್ರಾಣ. ಬೀದಿಯಲ್ಲಿ ಹೋಗುವ ನಾಯಿಗಳೇ ಆದ್ರೂ ಅದನ್ನು ಮುದ್ದಿಸುತ್ತಾಳೆ. ಆಹಾರ ಕೊಡುತ್ತಾಳೆ. ಕೈಕಾಲು ಊನವಾಗಿದ್ದರೆ, ಆರೋಗ್ಯ ಸರಿ ಇಲ್ಲದಿದ್ದರೆ ತಾನೇ ಹೋಗಿ ಔಷಧಿ ನೀಡುತ್ತಾಳೆ. ಹೌದು.. ನಲ್ವತ್ತಕ್ಕೂ ಹೆಚ್ಚು ಬೆಕ್ಕು, ನಾಯಿಗಳ ಪಾಲಿಗೆ ಆಕೆಯೀಗ ಮುದ್ದಿನ ಅಮ್ಮನಾಗಿದ್ದಾಳೆ.
ಸುರತ್ಕಲ್ ಗೋವಿಂದಾಸ್ ಕಾಲೇಜಿನ ಬಳಿ ಮನೆಯನ್ನು ಹೊಂದಿರುವ ಸಾಕ್ಷಿ ಸುನಿಲ್ ಮೂಲತಃ ಕಾರ್ಕಳದವರು. ಸುನಿಲ್ ಅವರನ್ನು ಮದುವೆಯಾದ ಬಳಿಕ ಸುರತ್ಕಲ್ ನಲ್ಲಿ ಬಂದು ನೆಲೆಸಿದ್ದಾರೆ. ಐದು ವರ್ಷಗಳ ಹಿಂದೆ ಮದುವೆಯಾಗಿದ್ದರಂತೆ. ಮದುವೆಗೂ ಮೊದಲೇ ಆಕೆಗೆ ಬೆಕ್ಕು, ನಾಯಿಗಳನ್ನು ಸಾಕುವುದು, ಬೀದಿ ನಾಯಿಗಳಿಗೆ ಆಹಾರ ಕೊಡುವುದು ಹವ್ಯಾಸ ಆಗಿತ್ತು. ಮದುವೆಯಾದ ಬಳಿಕವೂ ತಮ್ಮ ಮನೆಯನ್ನು ಬೆಕ್ಕು, ನಾಯಿಗಳು ಜೊತೆಯಾಗಿ ಬದುಕುವಂತೆ ರೂಪಿಸಿಕೊಂಡಿದ್ದಾರೆ. 12 ವರ್ಷಗಳಿಂದ ನಿರಂತರವಾಗಿ ಹೀಗೆ ಬೆಕ್ಕು, ನಾಯಿಗಳ ಜೊತೆಗೇ ಬದುಕುತ್ತಿದ್ದೇನೆ ಎನ್ನುತ್ತಾರೆ, ಸಾಕ್ಷಿ.
ಮನುಷ್ಯರಾದರೆ ಏನೇ ತೊಂದರೆಗಳಾದರೆ ಬೈತಾರೆ. ಜಗಳ ಮಾಡುತ್ತಾರೆ. ಆದರೆ, ನಾಯಿ, ಬೆಕ್ಕುಗಳು ಹಾಗಲ್ಲ. ನಾವು ಮಾಡಿದ ಉಪಕಾರವನ್ನು ಯಾವತ್ತೂ ಮರೆಯುವುದಿಲ್ಲ. ಅವಕ್ಕೆ ನಾವಲ್ಲದೆ ಬೇರೆ ಯಾರು ಆಹಾರ ಕೊಡಬೇಕು. ಹಾಗಾಗಿ ಬೀದಿಯಲ್ಲಿ ಯಾವುದೇ ತೊಂದರೆಗೆ ಒಳಗಾಗಿ ಬಿದ್ದುಕೊಂಡ ನಾಯಿ, ಬೆಕ್ಕುಗಳ ಬಗ್ಗೆ ತಿಳಿದರೆ, ಅಲ್ಲೇ ಹೋಗಿ ಔಷಧಿ ಕೊಟ್ಟು ಸಾಕುತ್ತೇನೆ ಎಂದು ಹೇಳುತ್ತಾರೆ.
ಸದ್ಯಕ್ಕೆ ನಲ್ವತ್ತಕ್ಕೂ ಹೆಚ್ಚು ಬೆಕ್ಕು, ನಾಯಿಗಳು ತನ್ನ ಮನೆಯಲ್ಲೇ ಇದೆ. ಅದಲ್ಲದೆ, ಪ್ರತಿ ದಿನ ಸುರತ್ಕಲ್ ಪರಿಸರದಲ್ಲಿ ಒಂದಷ್ಟು ಬೀದಿನಾಯಿಗಳಿಗೂ ಆಹಾರ ಕೊಡುತ್ತೇನೆ. ಕುಚ್ಚಲಕ್ಕಿಯ ಅನ್ನ ಮತ್ತು ಇತರೇ ಒಣ ಉತ್ಪನ್ನಗಳನ್ನು ತಿನ್ನಲು ಕೊಡುತ್ತೇನೆ. ತಿಂಗಳಿಗೆ ನಲ್ವತ್ತು ಕೇಜಿಯಷ್ಟು ಪೆಟ್ ಫುಡ್ ಕೂಡ ಖಾಲಿಯಾಗುತ್ತದೆ. ಖರ್ಚು ಲೆಕ್ಕ ಹಾಕಿದರೆ, ಸುಮಾರು 12 ಸಾವಿರ ತಿಂಗಳಿಗೆ ಬೇಕಾಗುತ್ತದೆ ಎನ್ನುತ್ತಾರೆ.
ಸಿಟಿಯಲ್ಲಿರುವ ಕೆಲವು ಮಂದಿ ಬೆಕ್ಕು, ನಾಯಿಗಳಂದ್ರೆ ತುಂಬ ಇಷ್ಟ ಪಡುತ್ತಾರೆ. ಅವನ್ನು ಮನೆಯೊಳಗೇ ಸಾಕುತ್ತಾರೆ. ಆದರೆ, ಒಂದೆರಡು ಅಷ್ಟೇ ಇರುತ್ತದೆ. ಆದರೆ, ಸಾಕ್ಷಿ ಅವರದ್ದು ಇದು ಹವ್ಯಾಸ ಅಷ್ಟೇ ಅಲ್ಲ ಕಾಳಜಿಯಾಗಿದೆ. ಬೀದಿ ನಾಯಿಗಳು ಗಾಯಗೊಂಡಿರುವ ಬಗ್ಗೆ ಹೇಳಿದರೆ, ಅದು ಇದ್ದಲ್ಲಿಗೇ ಬಂದು ಔಷಧಿ ಕೊಡುತ್ತಿದ್ದಾರೆ. ಬಾಯಿ ಬಾರದ ಪ್ರಾಣಿಗಳ ವೇದನೆಯನ್ನು ಅರಿತು ಸಲಹುತ್ತಾರೆ. ನಿಜಕ್ಕೂ ಸಾಕ್ಷಿ ಸುನಿಲ್ ಅವರ ಮಾನವೀಯ ಕಾಳಜಿಯ ಸೇವೆ ಅಪರೂಪದಲ್ಲಿ ಅಪರೂಪ ಎನ್ನಬೇಕಷ್ಟೆ.
Photo Gallery: ಆಕೆಯೀಗ ಬೀದಿಯಲ್ಲಿ ಅಲೆಯುವ ಬೆಕ್ಕು, ನಾಯಿಗಳ ಪಾಲಿಗೆ ಮುದ್ದಿನ ಅಮ್ಮ..!!
Sakshi Sunil Kamath from Surathkal, Mangalore turns as an angel as she provides shelter to stray dogs and kittens at her home since 12 long years maintaining them with her own expense.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm