ಬ್ರೇಕಿಂಗ್ ನ್ಯೂಸ್
28-01-21 01:11 pm Mangalore Correspondent ಕರಾವಳಿ
ಮಂಗಳೂರು, ಜ. 28 : ಇಂಡೋನೇಷ್ಯಾದಲ್ಲಿ ಉದ್ಯೋಗ ದೊರಕಿಸುವುದಾಗಿ ಹೇಳಿ ಉಳ್ಳಾಲ ಮೂಲದ ಯುವಕನಿಗೆ ಟ್ರಾವೆಲ್ ಏಜೆನ್ಸಿಯವರು ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಡಿಪ್ಲೊಮಾ ಓದಿರುವ ಯುವಕ ಮೊಹಮ್ಮದ್ ನಿಯಾಜ್ ಟ್ರಾವೆಲ್ ಏಜೆನ್ಸಿಯ ಮಾಲೀಕರ ವಿರುದ್ಧ ಮಂಗಳೂರಿನ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ.
ಮಂಗಳೂರು ಟೂರ್ಸ್ ಮತ್ತು ಟ್ರಾವೆಲ್ಸ್ ಮಾಲೀಕ ಶಮೀರ್ ರಿಜ್ವಾನ್, 6 ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು ಸಂತ್ರಸ್ತ ಯುವಕ ಆರೋಪಿಸಿದ್ದಾನೆ.
"ಶಮೀರ್ ನನ್ನ ಮಗನಿಂದ ಉದ್ಯೋಗಕ್ಕಾಗಿ ಆತನ ಎಲ್ಲ ಸರ್ಟಿಫಿಕೇಟ್ ಇನ್ನಿತರ ದಾಖಲೆಗಳನ್ನು ತೆಗೆದುಕೊಂಡಿದ್ದಾನೆ. ವೀಸಾಕ್ಕಾಗಿ 6 ಲಕ್ಷ ರೂ. ಪಡೆದಿದ್ದರು. ನಾವು ಆತನಿಗೆ 6 ಲಕ್ಷ ರೂ. ನೀಡಿದರೆ ನನ್ನ ಮಗನಿಗೆ ತಿಂಗಳಿಗೆ 2 ಲಕ್ಷ ರೂ. ಸಂಬಳ ಇರುವ ಮೆಕ್ಯಾನಿಕಲ್ ಎಂಜಿನಿಯರ್ ಕೆಲಸವನ್ನು ಕೊಡಿಸುವುದಾಗಿ ಹೇಳಿದ್ದರು. ಬಳಿಕ ನನ್ನ ಮಗನನ್ನು ವಿಸಿಟಿಂಗ್ ವೀಸಾ ಮೂಲಕ ಇಂಡೋನೇಷ್ಯಾಕ್ಕೆ ಕರೆದೊಯ್ದಿದ್ದು ಅದಕ್ಕಾಗಿ 2019 ರ ಜುಲೈನಲ್ಲಿ 3.5 ಲಕ್ಷ ರೂ. ಮತ್ತು 2020 ಫೆಬ್ರವರಿಯಲ್ಲಿ 2.5 ಲಕ್ಷ ರೂ. ನೀಡಿದ್ದೇನೆ ಎಂದು ಯುವಕನ ತಂದೆ ಅಬ್ದುಲ್ ಅಜೀಜ್ ದೂರಿದ್ದಾರೆ.
2020 ರ ಫೆಬ್ರವರಿಯಿಂದ ಸೆಪ್ಟೆಂಬರ್ ವರೆಗೆ ಇತರ ಮೂವರ ಜೊತೆ ಇಂಡೋನೇಷ್ಯಾದಲ್ಲಿ ರೂಮಿನಲ್ಲಿದ್ದೆ. ಸೆಪ್ಟೆಂಬರ್ನಲ್ಲಿ ನಮ್ಮನ್ನು ವಲಸೆ ಅಧಿಕಾರಿಗಳು ದೇಶದಲ್ಲಿ ಅಕ್ರಮವಾಗಿ ಉಳಿದ ಆರೋಪದಲ್ಲಿ ಬಂಧಿಸಿದ್ದು 14 ದಿನಗಳ ಜೈಲಿಗೆ ಹಾಕಿದ್ದರು. ಪ್ರಕರಣದಲ್ಲಿ ಕಾನೂನು ಹೋರಾಟ ಮಾಡಿದ ಬಳಿಕ ನಮ್ಮನ್ನು ಬಿಡುಗಡೆ ಮಾಡಿದ್ದಾರೆ ಎಂದು ಸಂತ್ರಸ್ತ ನಿಯಾಜ್ ಹೇಳಿದ್ದಾರೆ. ಮಂಗಳೂರಿಗೆ ವಾಪಸ್ ಬರಲು 8 ಲಕ್ಷ ರೂ. ಖರ್ಚು ಆಯ್ತು ಎಂದು ನಿಯಾಜ್ ತಿಳಿಸಿದ್ದಾರೆ.
A youth from Ullal, who was searching for a job was cheated by a tours and travels agency of Mangalore and lost six lac rupees and was jailed in Indonesia. The youth, Mohammed Niyaz, who is a diploma holder, has registered a complaint against the owner of the travel agency.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm