ಬ್ರೇಕಿಂಗ್ ನ್ಯೂಸ್
29-01-21 05:55 pm Mangalore Correspondent ಕರಾವಳಿ
ಮಂಗಳೂರು, ಜ.29: ಉಳ್ಳಾಲ ಪಾಕಿಸ್ಥಾನ ಆಗುತ್ತಿದೆ ಎನ್ನುವ ತನ್ನ ಹೇಳಿಕೆಯನ್ನು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪುನರುಚ್ಚರಿಸಿದ್ದಾರೆ. ನಗರದಲ್ಲಿ ಈ ಕುರಿತ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಭಟ್, ಪಾಕಿಸ್ಥಾನ ಯಾವಾಗ ವಿಭಜನೆಯಾಗಿ ಬೇರೆಯಾಯ್ತೋ ಅಂದಿನಿಂದಲೇ ಅಲ್ಲಿನ ಜನರ ಮಾನಸಿಕತೆಯೇ ಬದಲಾಯ್ತು. ಅದಕ್ಕೂ ಹಿಂದೆ ಸಿಂಧು ನದಿ ಹರಿಯುವ ತೀರ ಪ್ರದೇಶ ಭಾರತೀಯರೇ ಆಗಿದ್ದರು. ಭಾರತೀಯರಾಗೇ ಬದುಕುತ್ತಿದ್ದರು. ವಿಭಜನೆಯ ಬಳಿಕ ಹಿಂದುಗಳಿಗೆ ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಮಾಡಿದ್ರು. ಹಿಂದು ಹೆಣ್ಮಕ್ಕಳನ್ನು ಅತ್ಯಾಚಾರ ಮಾಡಿದ್ರು. ಈಗ ಅಂಥದ್ದೇ ಪರಿಸ್ಥಿತಿ ಉಳ್ಳಾಲಕ್ಕೆ ಬಂದಿದೆ. ಹಾಗಂತ ನಾನು ಆ ರೀತಿಯ ಹೇಳಿಕೆ ಕೊಟ್ಟಿದ್ದೇನೆ. ನನಗೆ ಆ ಬಗ್ಗೆ ಪಶ್ಚಾತ್ತಾಪ ಏನೂ ಇಲ್ಲ ಎಂದಿದ್ದಾರೆ.
ಉಳ್ಳಾಲದಲ್ಲಿಯೂ ಈಗ ಅದೇ ರೀತಿಯ ಕೆಲಸಗಳಾಗುತ್ತಿವೆ. ಹೆಣ್ಮಕ್ಕಳ ಮೇಲೆ ಚುಡಾಯಿಸುವುದು, ಅತ್ಯಾಚಾರ ಮಾಡುವುದು ನಡೆಯುತ್ತಿದೆ. ಮತಾಂತರ, ಲವ್ ಜಿಹಾದ್ ವ್ಯಾಪಕವಾಗಿದೆ. ಈಗ ಪಾಕಿಸ್ಥಾನದಲ್ಲಿ ಅದೇ ನಡೆಯುತ್ತಿದೆಯಲ್ಲ. ಹಾಗಾಗಿ ಉಳ್ಳಾಲವನ್ನು ಪಾಕಿಸ್ಥಾನದಂತಾಗಿದೆ ಎಂದಿದ್ದೇನೆ. ಪಾಕಿಸ್ಥಾನದಲ್ಲಿಯೂ ಹಿಂದುಗಳಿಗೆ ಉಳಿಗಾಲ ಇಲ್ಲದಂತಾಗಿದೆ.
ಅದಕ್ಕಾಗಿ ನಾನು ಹೇಳುತ್ತಿರುವುದು ಉಳ್ಳಾಲದಲ್ಲಿ ಹಿಂದು ಒಬ್ಬನನ್ನು ಶಾಸಕರನ್ನಾಗಿ ಮಾಡಲಿ. ಅಲ್ಲಿನ ಜನ ಯಾಕೆ ಮುಸ್ಲಿಮರನ್ನೇ ಶಾಸಕರಾಗಿ ಮಾಡಬೇಕು. ನಾವು ಹಿಂದು, ಮುಸ್ಲಿಂ, ಕ್ರಿಸ್ತಿಯನ್ನರನ್ನು ಶಾಸಕರನ್ನಾಗಿ ಮಾಡುತ್ತೇವೆ. ಉಳ್ಳಾಲದಲ್ಲಿಯೂ ಭಾರತೀಯ ಮನೋಭಾವನೆ ಬೆಳೆಯಬೇಕು. ಭಾರತೀಯ ಅನ್ನುವ ಭಾವನೆ ಬಿಟ್ಟು ಹೋಗಬಾರದು ಎನ್ನುವ ನೆಲೆಯಲ್ಲಿ ನಾನು ಪಾಕಿಸ್ಥಾನದಂತಾಗಿದೆ ಎಂದಿದ್ದೇನೆ. ಅಲ್ಲಿನ ಸ್ಥಿತಿ ಬದಲಾಗಲಿ ಎಂಬ ಆಶಯ ನನ್ನದು ಎಂದು ಸ್ಪಷ್ಟನೆ ನೀಡಿದ್ದಾರೆ.
Video:
Ullal is Pakistan it can never change says RSS leader Kalladka Prabhakar Bhat. He has also triggered another controversy stating that if the people of Ullal have guts they should elect a non-Muslim MLA from Mangaluru constituency.
04-03-26 06:47 pm
HK News Staffer
ಅಡುಗೆ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳ ಕಾದು ಯುವತಿ...
04-03-26 05:06 pm
ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತ; ಕಂಟೇನರ್ ವಾಹನಕ್...
04-03-26 01:33 pm
ಮಾರ್ಚ್ 10ಕ್ಕೆ ಎಲ್ಲ ಶಾಸಕರು, ಸಚಿವರಿಗೆ ಡಿಕೆಶಿ ಡಿ...
04-03-26 01:27 pm
ಇರಾನ್ಗೆ ತೆರಳಿದ್ದ ಕಾಫಿನಾಡಿನ ಯುವಕ ನಾಪತ್ತೆ ; ಮಗ...
04-03-26 11:51 am
05-03-26 05:02 pm
HK News Staffer
ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ ; 'ಸುದೀರ್ಘ...
04-03-26 11:13 pm
ಹರ್ಮುಜ್ ಜಲಸಂಧಿ ನಿರ್ಬಂಧ ಉಲ್ಲಂಘಿಸಿದ 10 ತೈಲ ಹಡಗಿ...
04-03-26 10:09 pm
ಇರಾನ್ ಹಡಗು ಸ್ಫೋಟ ಬೆನ್ನಲ್ಲೇ ಅಮೆರಿಕದ ಯುದ್ಧ ನೌಕೆ...
04-03-26 10:03 pm
ಇರಾನ್ ಸರ್ವೋಚ್ಚ ನಾಯಕರಾಗಿ ಖಮೇನಿ ಪುತ್ರ ಮೊಜ್ತಾಬಾ...
04-03-26 12:58 pm
05-03-26 07:38 pm
HK News Staffer
ಸಾಕ್ಷಿಗಳು ಬರ್ತಾರೆ, ಹೋಗ್ತಾರೆ.. ಧರ್ಮಸ್ಥಳದಲ್ಲಿ ಹ...
05-03-26 04:36 pm
ಅರಣ್ಯಾಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳರು ; ಹೊರಗೆ...
05-03-26 02:34 pm
Aadhaar Card Found, Mangalore: ಫರಂಗಿಪೇಟೆ ನದಿ...
05-03-26 12:42 pm
ತುಳು ಎರಡನೇ ಅಧಿಕೃತ ಭಾಷೆ; ಆಂಧ್ರಪ್ರದೇಶದಲ್ಲಿ ಕೈಗೊ...
04-03-26 09:31 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm