ಪೊಲೀಸರ ಕೊಲೆಯತ್ನ ; ಎಸ್ಡಿಪಿಐ ಪದಾಧಿಕಾರಿಯ ಬಂಧನ ಹಿನ್ನೆಲೆ, ಸಂಘಟನೆ ವಿರುದ್ಧ ಕ್ರಮಕ್ಕೆ ಆಗ್ರಹ

30-01-21 04:58 pm       Mangalore Correspondent   ಕರಾವಳಿ

ಪೊಲೀಸ್ ಕಾನ್ ಸ್ಟೇಬಲ್ ಗಣೇಶ್ ಕಾಮತ್ ಕೊಲೆ ಯತ್ನ ಪ್ರಕರಣದಲ್ಲಿ ಎಸ್ ಡಿಪಿಐ ಪಕ್ಷದ ಕುದ್ರೋಳಿ ವಲಯ ಕಾರ್ಯದರ್ಶಿ ಅಕ್ಬರ್ ಕುದ್ರೋಳಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಜ.30: ಪೊಲೀಸ್ ಕಾನ್ ಸ್ಟೇಬಲ್ ಗಣೇಶ್ ಕಾಮತ್ ಕೊಲೆ ಯತ್ನ ಪ್ರಕರಣದಲ್ಲಿ ಈಗಾಗಲೇ 10ಕ್ಕೂ ಹೆಚ್ಚು ಎಸ್ ಡಿಪಿಐ ಕಾರ್ಯಕರ್ತರ ಬಂಧನವಾಗಿದ್ದು ಇದೀಗ ಎಸ್ ಡಿಪಿಐ ಪಕ್ಷದ ಕುದ್ರೋಳಿ ವಲಯ ಕಾರ್ಯದರ್ಶಿ ಅಕ್ಬರ್ ಕುದ್ರೋಳಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಕೃತ್ಯದಲ್ಲಿ ಪಕ್ಷದ ಶಾಮೀಲಾತಿ ಸ್ಪಷ್ಟವಾಗಿದ್ದು, ಎಸ್ ಡಿಪಿಐ ವಿರುದ್ಧ ನಿರ್ಬಂಧ ಹೇರಿ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಆಗ್ರಹಿಸಿದ್ದಾರೆ.

ಈ ಬಗ್ಗೆ ವಿಹಿಂಪ ಮತ್ತು ಬಜರಂಗದಳದಿಂದ ಪತ್ರಿಕಾ ಹೇಳಿಕೆ ನೀಡಿದ್ದು, 2019ರಲ್ಲಿ ನಡೆದ ಪೊಲೀಸ್ ಗೋಲಿಬಾರ್ ಘಟನೆಗೆ ಪ್ರತೀಕಾರ ರೂಪದಲ್ಲಿ ಮಾಯಾ ಗ್ಯಾಂಗ್ ಮೂಲಕ ಸಂಚು ನಡೆಸಿ ಕೃತ್ಯ ನಡೆಸಿದ್ದಾರೆ.

ಇದೀಗ ಪಕ್ಷದ ಪದಾಧಿಕಾರಿಯೇ ಕೊಲೆ ಯತ್ನ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದು, ಘಟನೆಯಲ್ಲಿ ಪಕ್ಷದ ಕೈವಾಡವಿರುವುದು ಸಾಬೀತಾಗಿದೆ. ಆದ್ದರಿಂದ ಗೃಹ ಇಲಾಖೆ, ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಸ್ ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳ ಮೇಲೆ ನಿರ್ಬಂಧ ಹೇರಬೇಕು ಎಂದು ವಿಶ್ವ ಹಿಂದು ಪರಿಷದ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಆಗ್ರಹಿಸಿದ್ದಾರೆ.

Mangalore VHP demands action against SDPI for involvement of Kudroli leader in the assault of Police Head constable in Mangalore.