ದೇರಳಕಟ್ಟೆ: ಸಂಚಾರಿ ಸೂಚನಾ ಫಲಕ ಸ್ಥಂಭಗಳನ್ನೇ ಮುರಿದು ಗೇಟ್ ಮಾಡಿದ ಬಿಲ್ಡರ್ ಗಳು !

05-02-21 03:48 pm       Mangalore Correspondent   ಕರಾವಳಿ

ರಾಜ್ಯದ ಪ್ರಭಾವಿ ಎಂಎಲ್ಸಿ ಒಬ್ಬರು ಬೃಹತ್ ಕಟ್ಟಡ ನಿರ್ಮಿಸುತ್ತಿದ್ದು ರಸ್ತೆಗೆ ಹಾಕಿದ್ದ ಸಂಚಾರಿ ಸೂಚನಾ ಫಲಕವನ್ನೇ ಮುರಿದು ಗೇಟ್ ಮಾಡಿಕೊಂಡಿದ್ದಾರೆ.  

ಉಳ್ಳಾಲ, ಫೆ.5: ದೇರಳಕಟ್ಟೆಯ ಕೆ.ಎಸ್. ಹೆಗ್ಢೆ ಆಸ್ಪತ್ರೆ ಮುಂಭಾಗದಲ್ಲಿ ರಾಜ್ಯದ ಪ್ರಭಾವಿ ಎಂಎಲ್ಸಿ ಒಬ್ಬರು ಬೃಹತ್ ಕಟ್ಟಡ ನಿರ್ಮಿಸುತ್ತಿದ್ದು ರಸ್ತೆಗೆ ಹಾಕಿದ್ದ ಸಂಚಾರಿ ಸೂಚನಾ ಫಲಕವನ್ನೇ ಮುರಿದು ಗೇಟ್ ಮಾಡಿಕೊಂಡಿದ್ದಾರೆ.  

ಸೂಚನಾ ಫಲಕದ ಸ್ಥಂಭಗಳನ್ನು ಮುರಿದ ಬಿಲ್ಡರ್ ಗಳು ಖಾಸಗಿ ಪ್ರದೇಶಕ್ಕೆ ಗೇಟ್ ಆಗಿ ಬಳಸಿದ್ದಾರೆ. ಪೊಲೀಸ್ ಇಲಾಖೆಗೆ ಸೇರಿದ ಸಾರ್ವಜನಿಕ ಆಸ್ತಿಯನ್ನೇ ಮುರಿದು ಖಾಸಗಿ ಪ್ರದೇಶಕ್ಕೆ ಕಂಪೌಂಡ್ ಗೇಟನ್ನಾಗಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. 

ಈ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸರು ನಿಂತು ನಿತ್ಯವೂ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಕೇಸು ಜಡಿಯುತ್ತಾರೆ. ಪ್ರಭಾವಿ ಖಾಸಗಿ ಬಿಲ್ಡರ್ಗಳು ಈ ರೀತಿ ಸಂಚಾರಿ ಸೂಚನಾ ಫಲಕಗಳನ್ನೇ ಮುರಿದು ತಮ್ಮ ಖಾಸಗಿ ಪ್ರದೇಶಕ್ಕೆ ತಡೆ ಬೇಲಿ ಮಾಡಿರುವುದು ಟ್ರಾಫಿಕ್ ಪೊಲೀಸರಿಗೆ ಕಂಡರೂ ಕಾಣದಂತಿದ್ದಾರೆ.

Builder Destructs Government Assets on the road side made for public and uses them for personal use at Derlakatte in Mangalore.