ಬ್ರೇಕಿಂಗ್ ನ್ಯೂಸ್
06-02-21 02:12 pm Mangalore Correspondent ಕರಾವಳಿ
ಮಂಗಳೂರು, ಫೆ. 6: ಬಿಜೆಪಿ ಮುಖಂಡ ಜಗದೀಶ ಅಧಿಕಾರಿ ಬಿಲ್ಲವರು ಮತ್ತು ಕೋಟಿ ಚೆನ್ನಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು ಅಧಿಕಾರಿ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿದೆ. ಮೂಡುಬಿದ್ರಿಯ ಬಿಲ್ಲವ ಮುಖಂಡರು ಜಗದೀಶ ಅಧಿಕಾರಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
ಎರಡು ದಿನಗಳ ಹಿಂದೆ ಕಾರ್ಯಕ್ರಮ ಒಂದರಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿ ಬಗ್ಗೆ ಅವಹೇಳನ ಆಗುವ ರೀತಿ ಮಾತನಾಡಿದ್ದರು. ಪಟ್ಟ ಆದವರ ಕಾಲು ಹಿಡಿಯುತ್ತೇನೆ, ಜನಾರ್ದನ ಪೂಜಾರಿ ಅವರ ಕಾಲು ಹಿಡಿಯುವುದಿಲ್ಲ ಎನ್ನುವ ಮೂಲಕ ಜಗದೀಶ್ ಅಧಿಕಾರಿ ಬಿಲ್ಲವರು ಮತ್ತು ಕಾಂಗ್ರೆಸ್ ಪ್ರಮುಖರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕುರಿತು ಸ್ಪಷ್ಟನೆ ಕೇಳಲು ಬಿಲ್ಲವ ಸಮುದಾಯ ಮುಖಂಡರೊಬ್ಬರು ಜಗದೀಶ ಅಧಿಕಾರಿಗೆ ಕರೆ ಮಾಡಿದ್ದರು.

ಮಾತುಕತೆ ಬಳಿಕ ಕರೆ ಕಟ್ ಮಾಡದೆ, ತನ್ನ ಒಟ್ಟಿಗೆ ಇದ್ದವರ ಜೊತೆ ಜಗದೀಶ್ ಅಧಿಕಾರಿ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಫೋನ್ನಲ್ಲಿ ರೆಕಾರ್ಡ್ ಆಗಿದ್ದು ಅದೀಗ ವೈರಲ್ ಆಗಿದೆ. ಬಿಲ್ಲವರನ್ನು ಯಾವತ್ತೂ ನಂಬುವಂತಿಲ್ಲ. ಅವರಿಗಿಂತ ಬ್ಯಾರಿಗಳನ್ನು ನಂಬಬಹುದು. ಕೋಟಿ ಚೆನ್ನಯರು ಕೂಡ ಪೆರ್ಮಲೆ ಬಲ್ಲಾಳರಿಗೆ ಅನ್ಯಾಯ ಮಾಡಿದರು. ಮತ್ತೊಂದು ರಾಜನಲ್ಲಿಗೆ ಹೋಗಿ ಅಲ್ಲಿಯ ಮಂತ್ರಿಯನ್ನು ಕೊಂದರು. ಇನ್ನೊಂದು ಕಡೆ ಹೋಗಿ ಅಲ್ಲಿಯ ರಾಜನನ್ನೇ ಸೋಲಿಸಿದರು.
ಕೊನೆಗೆ ಆಸುಪಾಸಿನ ಎಲ್ಲ ರಾಜರು ಸೇರಿ ಕೋಟಿ ಚೆನ್ನಯರನ್ನು ಕೊಲ್ಲುತ್ತಾರೆ. ಆಗಲೂ ಕೋಟಿ ಚೆನ್ನಯರು ಒಳ್ಳೆದು ಮಾಡಿಲ್ಲ. ಅವರ ಸಂತಾನದವರೂ ಅಷ್ಟೇ. ಜನಾರ್ದನ ಪೂಜಾರಿಯ ಕಾಲಿಗೆ ಬೀಳುವುದು ಯಾಕೆ ? ನಂಗೇನು ಅಂಥ ಗತಿ ಬಂದಿದೆ ಎಂದು ಬಿಲ್ಲವರ ಬಗ್ಗೆ ಮೂದಲಿಸಿ ಮಾತನಾಡಿದ್ದ ಆಡಿಯೋ ಈಗ ವೈರಲ್ ಆಗಿದ್ದು ಬಿಲ್ಲವ ಸಮುದಾಯದ ಮುಖಂಡರು ಬಿಜೆಪಿ ಮುಖಂಡನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Leaders of different units of Moodbidri Billawa Sangha, on Friday, February 5, filed a complaint at Moodbidri police station against BJP leader Jagadish Adhikari.
07-04-26 03:51 pm
HK News Staffer
ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ; ಬಳ್ಳಾರಿ,...
07-04-26 12:37 pm
ಇನ್ನೆರಡು ವರ್ಷ ಸಿದ್ದರಾಮಯ್ಯ ಅವರೇ ಸಿಎಂ, ಹೈಕಮಾಂಡ್...
06-04-26 08:51 pm
ದಟ್ಟ ಕಾಡಿನ ಮಧ್ಯೆ ದಾರಿ ತಪ್ಪಿದ್ದ ಶರಣ್ಯ ಕಡೆಗೂ ಪತ...
05-04-26 10:45 pm
ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ತೆರಳಿದ್ದ ಶರಣ್ಯ ಮೂರು...
05-04-26 07:24 pm
07-04-26 11:45 am
HK News Staffer
ಟ್ರಂಪ್ ವಾರ್ನಿಂಗ್ ಗೆ ಇರಾನ್ ಟಕ್ಕರ್ ; ವಿದ್ಯುತ್ ಸ...
07-04-26 11:42 am
ಟ್ರಂಪ್ 8pm ಘೋರ ಎಚ್ಚರಿಕೆಗೆ ಇರಾನ್ ತಿರುಗೇಟು ; ನ...
06-04-26 06:16 pm
ಗಲ್ಫ್ ಯುದ್ಧ ಎಫೆಕ್ಟ್ ; ಇಸ್ರೇಲ್ ಗೆ ಏರ್ ಇಂಡಿಯಾ ವ...
06-04-26 06:09 pm
ಯುಎಇಯಿಂದ ಪಾಕಿಸ್ತಾನಕ್ಕೆ ಬಿಗ್ ಶಾಕ್ ; 2 ಬಿಲಿಯನ್...
05-04-26 12:37 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
07-04-26 06:18 pm
HK News Staffer
ಚಿಕ್ಕಮಗಳೂರು ; ಭದ್ರಾ ನದಿಗೆ ಹಾರಿ ಶಿವಮೊಗ್ಗದ ನರ್ಸ...
07-04-26 04:04 pm
ಪೊಲೀಸ್ ಕಸ್ಟಡಿಯಲ್ಲಿದ್ದ ತಂದೆ-ಮಗನಿಗೆ ಚಿತ್ರಹಿಂಸೆ...
07-04-26 10:08 am
ತಮಿಳಿನ ಖ್ಯಾತ ಕಿರುತೆರೆ ನಟಿ ಸುಭಾಷಿಣಿ ಬಾಲಸುಬ್ರಹ್...
06-04-26 05:40 pm
ಆತ್ಮಹತ್ಯೆ ಮಾಡಿಕೊಂಡ ಪತ್ನಿಯನ್ನು ನೋಡಲು ಆಸ್ಪತ್ರೆಗ...
06-04-26 02:34 pm