ಬ್ರೇಕಿಂಗ್ ನ್ಯೂಸ್
06-02-21 02:12 pm Mangalore Correspondent ಕರಾವಳಿ
ಮಂಗಳೂರು, ಫೆ. 6: ಬಿಜೆಪಿ ಮುಖಂಡ ಜಗದೀಶ ಅಧಿಕಾರಿ ಬಿಲ್ಲವರು ಮತ್ತು ಕೋಟಿ ಚೆನ್ನಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು ಅಧಿಕಾರಿ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿದೆ. ಮೂಡುಬಿದ್ರಿಯ ಬಿಲ್ಲವ ಮುಖಂಡರು ಜಗದೀಶ ಅಧಿಕಾರಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
ಎರಡು ದಿನಗಳ ಹಿಂದೆ ಕಾರ್ಯಕ್ರಮ ಒಂದರಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿ ಬಗ್ಗೆ ಅವಹೇಳನ ಆಗುವ ರೀತಿ ಮಾತನಾಡಿದ್ದರು. ಪಟ್ಟ ಆದವರ ಕಾಲು ಹಿಡಿಯುತ್ತೇನೆ, ಜನಾರ್ದನ ಪೂಜಾರಿ ಅವರ ಕಾಲು ಹಿಡಿಯುವುದಿಲ್ಲ ಎನ್ನುವ ಮೂಲಕ ಜಗದೀಶ್ ಅಧಿಕಾರಿ ಬಿಲ್ಲವರು ಮತ್ತು ಕಾಂಗ್ರೆಸ್ ಪ್ರಮುಖರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕುರಿತು ಸ್ಪಷ್ಟನೆ ಕೇಳಲು ಬಿಲ್ಲವ ಸಮುದಾಯ ಮುಖಂಡರೊಬ್ಬರು ಜಗದೀಶ ಅಧಿಕಾರಿಗೆ ಕರೆ ಮಾಡಿದ್ದರು.
ಮಾತುಕತೆ ಬಳಿಕ ಕರೆ ಕಟ್ ಮಾಡದೆ, ತನ್ನ ಒಟ್ಟಿಗೆ ಇದ್ದವರ ಜೊತೆ ಜಗದೀಶ್ ಅಧಿಕಾರಿ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಫೋನ್ನಲ್ಲಿ ರೆಕಾರ್ಡ್ ಆಗಿದ್ದು ಅದೀಗ ವೈರಲ್ ಆಗಿದೆ. ಬಿಲ್ಲವರನ್ನು ಯಾವತ್ತೂ ನಂಬುವಂತಿಲ್ಲ. ಅವರಿಗಿಂತ ಬ್ಯಾರಿಗಳನ್ನು ನಂಬಬಹುದು. ಕೋಟಿ ಚೆನ್ನಯರು ಕೂಡ ಪೆರ್ಮಲೆ ಬಲ್ಲಾಳರಿಗೆ ಅನ್ಯಾಯ ಮಾಡಿದರು. ಮತ್ತೊಂದು ರಾಜನಲ್ಲಿಗೆ ಹೋಗಿ ಅಲ್ಲಿಯ ಮಂತ್ರಿಯನ್ನು ಕೊಂದರು. ಇನ್ನೊಂದು ಕಡೆ ಹೋಗಿ ಅಲ್ಲಿಯ ರಾಜನನ್ನೇ ಸೋಲಿಸಿದರು.
ಕೊನೆಗೆ ಆಸುಪಾಸಿನ ಎಲ್ಲ ರಾಜರು ಸೇರಿ ಕೋಟಿ ಚೆನ್ನಯರನ್ನು ಕೊಲ್ಲುತ್ತಾರೆ. ಆಗಲೂ ಕೋಟಿ ಚೆನ್ನಯರು ಒಳ್ಳೆದು ಮಾಡಿಲ್ಲ. ಅವರ ಸಂತಾನದವರೂ ಅಷ್ಟೇ. ಜನಾರ್ದನ ಪೂಜಾರಿಯ ಕಾಲಿಗೆ ಬೀಳುವುದು ಯಾಕೆ ? ನಂಗೇನು ಅಂಥ ಗತಿ ಬಂದಿದೆ ಎಂದು ಬಿಲ್ಲವರ ಬಗ್ಗೆ ಮೂದಲಿಸಿ ಮಾತನಾಡಿದ್ದ ಆಡಿಯೋ ಈಗ ವೈರಲ್ ಆಗಿದ್ದು ಬಿಲ್ಲವ ಸಮುದಾಯದ ಮುಖಂಡರು ಬಿಜೆಪಿ ಮುಖಂಡನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Leaders of different units of Moodbidri Billawa Sangha, on Friday, February 5, filed a complaint at Moodbidri police station against BJP leader Jagadish Adhikari.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm