ಕಾರು - ಬೈಕ್ ಅಪಘಾತ ; ಉಳ್ಳಾಲ ಠಾಣೆ ಎಎಸ್ಐ ಗಂಭೀರ, ಮಕ್ಕಳು ಪಾರು ! 

07-02-21 09:19 pm       Mangaluru Correspondent   ಕರಾವಳಿ

ಬುಲೆಟ್ ಬೈಕ್ ಮತ್ತು ಕಾರು ಡಿಕ್ಕಿ ಹೊಡೆದ ಪರಿಣಾಮ ಬುಲೆಟ್ ಸವಾರ ಉಳ್ಳಾಲ ಪೊಲೀಸ್ ಠಾಣೆಯ ಎ.ಎಸ್.ಐ ಶೇಖರ್ ಗಟ್ಟಿ ಗಂಭೀರ ಗಾಯಗೊಂಡಿದ್ದಾರೆ.

ಉಳ್ಳಾಲ, ಫೆ.7: ರಾ.ಹೆ. 66 ರ ಕೊಲ್ಯ ದುರ್ಗಾಂಬ ಗ್ಯಾರೇಜ್ ಬಳಿ ಬುಲೆಟ್ ಬೈಕ್ ಮತ್ತು ಕಾರು ಡಿಕ್ಕಿ ಹೊಡೆದ ಪರಿಣಾಮ ಬುಲೆಟ್ ಸವಾರ ಉಳ್ಳಾಲ ಪೊಲೀಸ್ ಠಾಣೆಯ ಎ.ಎಸ್.ಐ ಶೇಖರ್ ಗಟ್ಟಿ ಗಂಭೀರ ಗಾಯಗೊಂಡಿದ್ದಾರೆ. ಅವರ ಜೊತೆಗಿದ್ದ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. 

ಕೇರಳ ನೋಂದಣಿಯ ಕಾರು ಡಿಕ್ಕಿಯಾಗಿದ್ದು ಬೈಕ್ ಅಡ್ಡಬಿದ್ದು ಶೇಖರ್ ಗಟ್ಟಿ ಕಾಲು  ಮುರಿತಕ್ಕೊಳಗಾಗಿದ್ದಾರೆ. ಅವರನ್ನು ಕೂಡಲೇ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಶೇಖರ್ ಗಟ್ಟಿ ಅವರ ಪುಟ್ಟ ಮಕ್ಕಳಾದ ಆಯುಷ್ ಮತ್ತು ಅನುಷ್ ಜೊತೆಯಲ್ಲಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶೇಖರ್ ಗಟ್ಟಿ ಕೊಲ್ಯ ಮಲಯಾಳ ಚಾಮುಂಡಿ ದೈವಸ್ಥಾನದ ಬಳಿಯ ನಿವಾಸಿಯಾಗಿದ್ದು ತೊಕ್ಕೊಟ್ಟು ಕಡೆಗೆ ಬಂದು ಮನೆಗೆ ಹಿಂತಿರುಗುತ್ತಿದ್ದಾಗ ಕಾರು ಡಿಕ್ಕಿಯಾಗಿದೆ.

Ullal Police Sub Inspector Shekar Gatti is said to be critical after he met with an accident at Ullal in Mangalore. Both his children have escaped with little minor injuries.