ಹೆತ್ತ ತಾಯಿ ಸಾಯೋ ಮುನ್ನ ಕರೆದುಕೋ ಎನ್ನ ಎಂದು ಸ್ಟೇಟಸ್ ಹಾಕಿ ನದಿಗೆ ಹಾರಿದ ಯುವಕ !!

09-02-21 12:24 pm       Mangalore Correspondent   ಕರಾವಳಿ

ತಾಯಿಯ ಅನಾರೋಗ್ಯದಿಂದ ಬೇಸತ್ತ ಯುವಕನೊಬ್ಬನೇತ್ರಾವತಿ ನದಿಗೆ ಪ್ರಾಣ ಕಳಕೊಂಡ ಘಟನೆ ಪಾಣೆಮಂಗಳೂರು ಬಳಿ ನಡೆದಿದೆ. 

ಬಂಟ್ವಾಳ, ಫೆ.9: ತಾಯಿಯ ಅನಾರೋಗ್ಯದಿಂದ ಬೇಸತ್ತ ಯುವಕನೊಬ್ಬ ಮೊಬೈಲ್ ಸ್ಟೇಟಸ್ ಹಾಕ್ಕೊಂಡು ನೇತ್ರಾವತಿ ನದಿಗೆ ಪ್ರಾಣ ಕಳಕೊಂಡ ಘಟನೆ ಪಾಣೆಮಂಗಳೂರು ಬಳಿ ನಡೆದಿದೆ. 

ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ನಿವಾಸಿ ನೀರಜ್ (30) ನಿನ್ನೆ ರಾತ್ರಿ ಬಿ.ಸಿ.ರೋಡ್ ಬಳಿಯ ಪಾಣೆರ್ ಸೇತುವೆಯಿಂದ ನದಿಗೆ ಹಾರಿದ್ದಾನೆ ಎನ್ನಲಾಗಿದ್ದು ಆತನ ಶವ ಇಂದು ಬೆಳಗ್ಗೆ ನದಿಯಲ್ಲಿ ಪತ್ತೆಯಾಗಿದೆ. 

ಯುವಕನ ತಾಯಿ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದು ಇದರಿಂದ ನೊಂದ ಯುವಕ, ನಿನಗಿಂತ ಮೊದಲೇ ನಾನು ಸಾಯುತ್ತೇನೆಂದು ಸ್ಟೇಟಸ್ ನಲ್ಲಿ ಬರೆದುಕೊಂಡಿದ್ದ. ಸಾರಿ ಅಮ್ಮಾ, ನಿನ್ನನ್ನು ಕಾಪಾಡಲು ಆಗಿಲ್ಲ. ನಿನಗಿಂತ ಮುಂಚೆನೇ ನಾನು ಹೋಗ್ತಿದೇನೆ. ಓ ಯಮ ದೇವನೇ, ಹೆತ್ತ ತಾಯಿ ಸಾಯೋ ಮುನ್ನ ಕರೆದುಕೋ ಎನ್ನ ಎಂದು ವಿಷಾದ ಪೂರ್ಣ ಮಾತುಗಳನ್ನು ಬರೆದು ನಿನ್ನೆ ರಾತ್ರಿ ನೇತ್ರಾವತಿ ನದಿಗೆ ಹಾರಿದ್ದಾನೆ ಎನ್ನಲಾಗುತ್ತಿದೆ. ಆತನ ಸ್ಟೇಟಸ್ ನೋಡಿ ಗೆಳೆಯರು ಆಪ್ತರಿಗೆ ಮಾಹಿತಿ ನೀಡಿದ್ದಾರೆ. ರಾತ್ರಿಯೇ ಸ್ಥಳೀಯರು ಗಮನಿಸಿ ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ.  

ಮಂಗಳವಾರ ಬೆಳಗ್ಗೆ ಸೇತುವೆ ಬಳಿಯಲ್ಲೇ ಶವ ಪತ್ತೆಯಾಗಿದೆ. ಸ್ಥಳೀಯ ಈಜುಗಾರರು, ಅಗ್ನಿಶಾಮಕ ದಳ, ಬಂಟ್ವಾಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

30-year-old man committed suicide by jumping into river at Bantwal after posting a WhatsApp status of his mother suffering in the hospital in Mangalore. The search is on to find his body.