ಬ್ರೇಕಿಂಗ್ ನ್ಯೂಸ್
09-02-21 03:58 pm Mangalore Correspondent ಕರಾವಳಿ
ಕೊಣಾಜೆ, ಫೆ.9: SDPI ಮುಖಂಡ ರಿಯಾಝ್ ಪರಂಗಿಪೇಟೆ ತಾಂಟ್ರೆ ಬಾ ತಾಂಟ್ ಎಂದು ಕೋಮು ಪ್ರಚೋದನಕಾರಿ ಭಾಷಣ ಮಾಡಿ ಹಿಂದು ಪರ ಸಂಘಟನೆಗಳ ಅವಹೇಳನ ಮಾಡಿ ಬೆದರಿಕೆ ಹಾಕಿದ್ದು ಈತ ಸಮಾಜದ ಸ್ವಾಸ್ಥ್ಯ ಕದಡಿ ಕೋಮು ಗಲಭೆ ನಡೆಸಲು ಹುನ್ನಾರ ನಡೆಸುತ್ತಿದ್ದು ಪೊಲೀಸರು ತಕ್ಷಣ ಆತನನ್ನು ಬಂಧಿಸಲು ಆಗ್ರಹಿಸಿ ಹಿಂದು ಜಾಗರಣ ವೇದಿಕೆ ಮುಡಿಪು ವಲಯಯದ ಪದಾಧಿಕಾರಿಗಳು ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾಷಣದ ವಿಡಿಯೋ ತುಣುಕು ಹರಿದಾಡುತ್ತಿದ್ದು ಆ ಭಾಷಣದಲ್ಲಿ ರಿಯಾಝ್ ಪರಂಗಿಪೇಟೆ RSS ಮತ್ತು ಅದರ ಪರಿವಾರ ಸಂಘಟನೆಗಳಲ್ಲಿ ತನಗೆ ಹೇಳಲಿರುವುದು ಒಂದೇ..ನಿಮ್ಮನ್ನು ಎದುರಿಸಲು ನಾವು ಯಾವತ್ತೂ ಎಲ್ಲಿಯೂ ಸಿದ್ಧ. ನೀವು ತಾಂಟಲು ಬಂದರೆ ಬನ್ನಿ ತಾಂಟುವ, ಪ್ರತೀ ಗಲ್ಲಿಗಳಲ್ಲಿಯೂ ನಮ್ಮ ಯುವ ಪಡೆಯನ್ನು ನಿರ್ಮಿಸಿ ಸಂಘ ಪರಿವಾರದ ವಿರುದ್ಧ ಛೂ ಬಿಡುತ್ತೇವೆ. ಈ ಆಟ ಇನ್ನು ಆರಂಭವಾಗಲಿದೆ ಎಂಬಿತ್ಯಾದಿ ಮಾತುಗಳನ್ನು ಆಡಿ ಹಿಂದು ಪರ ಸಂಘಟನೆಗಳನ್ನು ನೇರವಾಗಿ ಸಂಘರ್ಷಕ್ಕೆ ಆಹ್ವಾನಿಸಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿ ಕೋಮು ಗಲಭೆ ನಡೆಸಲು ಹುನ್ನಾರ ನಡೆಸುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕುರ್ನಾಡು ಗ್ರಾಮದ ಮಿತ್ತಕೋಡಿಯಲ್ಲಿ ಈ ಕೋಮು ಪ್ರಚೋದಕ ಭಾಷಣ ಮಾಡಿದರ ಪರಿಣಾಮ ಶಾಂತಿ ಸೌಹಾರ್ದವಾಗಿದ್ದ ಕುರ್ನಾಡು ಪರಿಸರ ಅಶಾಂತಿಗೊಳಗಾಗಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಈತನ ಕೋಮು ಪ್ರಚೋದಕ ಭಾಷಣದಿಂದಾಗಿ ಮಂಗಳೂರಿನ ಲಾಲ್ ಬಾಗ್ ನಲ್ಲಿ ಹಿಂದು ಯುವಕನಿಗೆ ಚೂರಿ ಇರಿತವಾಗಿದೆ. ಈತನು ಈ ಮೊದಲೂ ಪ್ರಚೋದನಕಾರಿ ಭಾಷಣ ಮಾಡಿದ್ದು ಈತನ ವಿರುದ್ಧ ಯಾವುದೇ ಕಠಿಣ ಕ್ರಮ ಜರಗಿಲ್ಲ. ಈತನನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದೊಂದು ದಿನ ಜಿಲ್ಲೆಯಲ್ಲಿ ಕೋಮು ಗಲಭೆ ನಡೆಯುವ ಸಾಧ್ಯತೆಗಳಿವೆ ಎಂದು ಜಾಗರಣ ವೇದಿಕೆ ಮುಖಂಡರು ಪೊಲೀಸ್ ಇಲಾಖೆಗೆ ದೂರಿದ್ದಾರೆ.
ಹಿರಿಯ ಮುಖಂಡರಾದ ಟಿ.ಜಿ ರಾಜಾರಾಂ ಭಟ್, ಜಗದೀಶ್ ಆಳ್ವ ಕುವೆತ್ತಬೈಲು, ಹಿಂ.ಜಾ.ವೇ ಮುಡಿಪು ವಲಯಾಧ್ಯಕ್ಷ ಪ್ರಶಾಂತ್ ಅನಂಗ, ಪ್ರಮುಖರಾದ ದಿವ್ಯರಾಜ್ ಶೆಟ್ಟಿ, ವಿಶ್ವನಾಥ ಕಡುವಾಯಿ, ರಂಜಿತ್ ಹೂಹಾಕುವಕಲ್ಲು ಇದ್ದರು.
The Hindu Jagarana Vedike activists of Konaje have filed a complaint against Riyaz Farangipete for his speech of communal disharmony in Mangalore.
05-09-25 11:15 pm
Bangalore Correspondent
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
ಕಾಂಗ್ರೆಸಿನ ಯಾರ ಮನೆಯ ನಾಯಿ ಸ್ವಾತಂತ್ರ್ಯಕ್ಕಾಗಿ ಹೋ...
03-09-25 09:00 pm
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
05-09-25 08:12 pm
Mangalore Correspondent
ತಡರಾತ್ರಿ ಫಾಸ್ಟ್ ಫುಡ್ ಗೌಜಿ ಪ್ರಶ್ನಿಸಿದ್ದಕ್ಕೆ ಸಿ...
05-09-25 05:09 pm
ಸೌಜನ್ಯಾ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಿದ್ದೇ ಆರ್....
04-09-25 11:07 pm
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
05-09-25 10:53 pm
Mangalore Correspondent
Mukka Murder, Mangalore, Crime: ಪತ್ನಿಯ ಅಶ್ಲೀಲ...
05-09-25 10:26 pm
Atm robbery, Ullal, Kotekar, Mangalore: ಕೋಟೆಕ...
05-09-25 08:36 pm
16 ವರ್ಷಗಳ ಹಳೆ ಪ್ರಕರಣದಲ್ಲಿ ಶಿಕ್ಷೆ ; ಬ್ರಹ್ಮಾವರದ...
05-09-25 12:34 pm
ಹಟ್ಟಿಯಲ್ಲಿದ್ದ ಹಸುವನ್ನು ನಡುರಾತ್ರಿ ಎಳೆದೊಯ್ದು ರೈ...
05-09-25 11:43 am