ಬ್ರೇಕಿಂಗ್ ನ್ಯೂಸ್
09-02-21 03:58 pm Mangalore Correspondent ಕರಾವಳಿ
ಕೊಣಾಜೆ, ಫೆ.9: SDPI ಮುಖಂಡ ರಿಯಾಝ್ ಪರಂಗಿಪೇಟೆ ತಾಂಟ್ರೆ ಬಾ ತಾಂಟ್ ಎಂದು ಕೋಮು ಪ್ರಚೋದನಕಾರಿ ಭಾಷಣ ಮಾಡಿ ಹಿಂದು ಪರ ಸಂಘಟನೆಗಳ ಅವಹೇಳನ ಮಾಡಿ ಬೆದರಿಕೆ ಹಾಕಿದ್ದು ಈತ ಸಮಾಜದ ಸ್ವಾಸ್ಥ್ಯ ಕದಡಿ ಕೋಮು ಗಲಭೆ ನಡೆಸಲು ಹುನ್ನಾರ ನಡೆಸುತ್ತಿದ್ದು ಪೊಲೀಸರು ತಕ್ಷಣ ಆತನನ್ನು ಬಂಧಿಸಲು ಆಗ್ರಹಿಸಿ ಹಿಂದು ಜಾಗರಣ ವೇದಿಕೆ ಮುಡಿಪು ವಲಯಯದ ಪದಾಧಿಕಾರಿಗಳು ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾಷಣದ ವಿಡಿಯೋ ತುಣುಕು ಹರಿದಾಡುತ್ತಿದ್ದು ಆ ಭಾಷಣದಲ್ಲಿ ರಿಯಾಝ್ ಪರಂಗಿಪೇಟೆ RSS ಮತ್ತು ಅದರ ಪರಿವಾರ ಸಂಘಟನೆಗಳಲ್ಲಿ ತನಗೆ ಹೇಳಲಿರುವುದು ಒಂದೇ..ನಿಮ್ಮನ್ನು ಎದುರಿಸಲು ನಾವು ಯಾವತ್ತೂ ಎಲ್ಲಿಯೂ ಸಿದ್ಧ. ನೀವು ತಾಂಟಲು ಬಂದರೆ ಬನ್ನಿ ತಾಂಟುವ, ಪ್ರತೀ ಗಲ್ಲಿಗಳಲ್ಲಿಯೂ ನಮ್ಮ ಯುವ ಪಡೆಯನ್ನು ನಿರ್ಮಿಸಿ ಸಂಘ ಪರಿವಾರದ ವಿರುದ್ಧ ಛೂ ಬಿಡುತ್ತೇವೆ. ಈ ಆಟ ಇನ್ನು ಆರಂಭವಾಗಲಿದೆ ಎಂಬಿತ್ಯಾದಿ ಮಾತುಗಳನ್ನು ಆಡಿ ಹಿಂದು ಪರ ಸಂಘಟನೆಗಳನ್ನು ನೇರವಾಗಿ ಸಂಘರ್ಷಕ್ಕೆ ಆಹ್ವಾನಿಸಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿ ಕೋಮು ಗಲಭೆ ನಡೆಸಲು ಹುನ್ನಾರ ನಡೆಸುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕುರ್ನಾಡು ಗ್ರಾಮದ ಮಿತ್ತಕೋಡಿಯಲ್ಲಿ ಈ ಕೋಮು ಪ್ರಚೋದಕ ಭಾಷಣ ಮಾಡಿದರ ಪರಿಣಾಮ ಶಾಂತಿ ಸೌಹಾರ್ದವಾಗಿದ್ದ ಕುರ್ನಾಡು ಪರಿಸರ ಅಶಾಂತಿಗೊಳಗಾಗಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಈತನ ಕೋಮು ಪ್ರಚೋದಕ ಭಾಷಣದಿಂದಾಗಿ ಮಂಗಳೂರಿನ ಲಾಲ್ ಬಾಗ್ ನಲ್ಲಿ ಹಿಂದು ಯುವಕನಿಗೆ ಚೂರಿ ಇರಿತವಾಗಿದೆ. ಈತನು ಈ ಮೊದಲೂ ಪ್ರಚೋದನಕಾರಿ ಭಾಷಣ ಮಾಡಿದ್ದು ಈತನ ವಿರುದ್ಧ ಯಾವುದೇ ಕಠಿಣ ಕ್ರಮ ಜರಗಿಲ್ಲ. ಈತನನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದೊಂದು ದಿನ ಜಿಲ್ಲೆಯಲ್ಲಿ ಕೋಮು ಗಲಭೆ ನಡೆಯುವ ಸಾಧ್ಯತೆಗಳಿವೆ ಎಂದು ಜಾಗರಣ ವೇದಿಕೆ ಮುಖಂಡರು ಪೊಲೀಸ್ ಇಲಾಖೆಗೆ ದೂರಿದ್ದಾರೆ.
ಹಿರಿಯ ಮುಖಂಡರಾದ ಟಿ.ಜಿ ರಾಜಾರಾಂ ಭಟ್, ಜಗದೀಶ್ ಆಳ್ವ ಕುವೆತ್ತಬೈಲು, ಹಿಂ.ಜಾ.ವೇ ಮುಡಿಪು ವಲಯಾಧ್ಯಕ್ಷ ಪ್ರಶಾಂತ್ ಅನಂಗ, ಪ್ರಮುಖರಾದ ದಿವ್ಯರಾಜ್ ಶೆಟ್ಟಿ, ವಿಶ್ವನಾಥ ಕಡುವಾಯಿ, ರಂಜಿತ್ ಹೂಹಾಕುವಕಲ್ಲು ಇದ್ದರು.
The Hindu Jagarana Vedike activists of Konaje have filed a complaint against Riyaz Farangipete for his speech of communal disharmony in Mangalore.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm