ಬ್ರೇಕಿಂಗ್ ನ್ಯೂಸ್
10-02-21 06:12 pm Mangalore Correspondent ಕರಾವಳಿ
ಮಂಗಳೂರು, ಫೆ.10: ಕೇಂದ್ರ ಸರಕಾರದ ಬಜೆಟ್ ಸೇಲ್ ಇಂಡಿಯಾ, ಲೂಟ್ ಇಂಡಿಯಾ ಆಗಿದೆ. ಜನರ ಮೇಲೆ ಇಲ್ಲಸಲ್ಲದ ತೆರಿಗೆಗಳನ್ನು ವಿಧಿಸಿ ಲೂಟಿ ಮಾಡಲಾಗುತ್ತಿದೆ. ತೈಲಕ್ಕೆ ಹೆಚ್ಚುವರಿ ತೆರಿಗೆ ವಿಧಿಸಿ, ಕಾನೂನು ಬದ್ಧವಾಗಿ ಲೂಟಿ ಮಾಡುತ್ತಿದ್ದಾರೆ. ಜನರಿಗೆ ಪ್ರಯೋಜನ ಆಗಬಲ್ಲ ಯಾವುದೇ ಯೋಜನೆಯನ್ನು ಕೇಂದ್ರ ಸರಕಾರ ನೀಡಿಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮತ್ತು ಕರಾವಳಿಗೆ ಒಂದೇ ಒಂದು ಯೋಜನೆಯನ್ನು ಬಜೆಟಿನಲ್ಲಿ ನೀಡಲಾಗಿಲ್ಲ. ರಾಜ್ಯಕ್ಕೆ ಒಂದೂ ಯೋಜನೆ ನೀಡದಿದ್ದರೂ ರಾಜ್ಯದ ಸಂಸದರು ಯಾಕೆ ಮಾತನಾಡುತ್ತಿಲ್ಲ. ಸಂಸದರು ಜನರ ಧ್ವನಿಯಾಗಬೇಕಾಗಿತ್ತು. ಆದರೆ, ಬಜೆಟ್ ನಲ್ಲಿ ಜನರಿಗೆ ಅನ್ಯಾಯ ಆಗಿದ್ದರೂ, ಮಾತನಾಡದೆ ಕುಳಿತಿದ್ದಾರೆ. ಇವರು ಬಾಯಿಗೆ ಬೀಗ ಹಾಕಿದ ಕಾರಣ ಜನರಿಗೆ ಅನ್ಯಾಯ ಆಗುತ್ತಿದೆ. ಬೇರೆ ರಾಜ್ಯಗಳಿಗೆ ಮಾತ್ರ ಕೇಂದ್ರ ಸರಕಾರ ಭರಪೂರ ಯೋಜನೆಗಳನ್ನು ಪ್ರಕಟಿಸುತ್ತಿದೆ ಎಂದು ದೂರಿದರು.

ಕೋಟಿ ಚೆನ್ನಯರ ಅವಹೇಳನ ಖಂಡನೀಯ
ಕಾಂಗ್ರೆಸಿನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹಾಗೂ ಬಿಲ್ಲವರ ಆರಾಧ್ಯ ದೈವ ಕೋಟಿ ಚೆನ್ನಯರನ್ನು ಅವಮಾನಿಸಿದ್ದು ಖಂಡನೀಯ. ಜಗದೀಶ ಅಧಿಕಾರಿ, ನಾನು ಮತ್ತು ಕೆಲವರು ಪೂಜಾರಿಯವರ ಗರಡಿಯಲ್ಲಿ ಪಳಗಿದವರು. ಜಗದೀಶ ಅಧಿಕಾರಿ ಈಗ ಪೂಜಾರಿಯವರ ವಿರುದ್ಧವೇ ಮಾತನಾಡಿದ್ದನ್ನು ಖಂಡಿಸುತ್ತೇನೆ. ಹಾಗೆಂದು ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅಧಿಕಾರಿ ಮುಖಕ್ಕೆ ಮಸಿ ಬಳಿಯಲು ಪ್ರೇರೇಪಿಸುವುದನ್ನೂ ಖಂಡಿಸುತ್ತೇನೆ. ಅದನ್ನು ಯಾವತ್ತಿಗೂ ಸಮರ್ಥಿಸಲಾಗುವುದಿಲ್ಲ. ಅದು ಕಾಂಗ್ರೆಸಿನ ಸಂಸ್ಕೃತಿಯಲ್ಲ ಎಂದು ಹೇಳಿದರು.

ಸಿಸಿಬಿಯಲ್ಲಿ ನಡೆದಿರುವ ಕಾರು ಮಾರಾಟ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಾದರ್, ಜನರಿಗೆ ಮಂಗಳೂರು ಪೊಲೀಸ್ ಮತ್ತು ಸಿಸಿಬಿ ಮೇಲೆ ಯಾವ ರೀತಿಯ ಸಂಶಯ ಇತ್ತೋ, ಅದು ನಿಜವಾಗುತ್ತಿದೆ. ಪೊಲೀಸರ ಒಳಗೆ ನಡೆಯುತ್ತಿರುವ ವಹಿವಾಟಿನ ಬಗ್ಗೆ ಜನರಿಗೆ ಅರಿವಾಗುತ್ತಿದೆ. ಇಲಾಖೆಯಲ್ಲಿ 90ರಷ್ಟು ಒಳ್ಳೆಯವರಿದ್ದಾರೆ. ಹತ್ತು ಶೇ. ಭ್ರಷ್ಟರಿಂದಾಗಿ ಪೊಲೀಸ್ ಇಲಾಖೆಗೇ ಕಳಂಕ ಬರುತ್ತಿದೆ. ಸಿಸಿಬಿಯಲ್ಲಿ ನಡೆದಿರುವ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಹೇಳಿದರು.
Budget 2021 is just to loot people of India slammed UT Khader in mangalore at the press meet held at congress office.
28-10-25 10:03 pm
Bangalore Correspondent
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
29-10-25 06:55 pm
Mangalore Correspondent
ಸುಳ್ಳು ಕೇಸು ಹಾಕುತ್ತಿದ್ದಾರೆಂದು ಮನವಿ ಕೊಡಲು ಬಂದವ...
29-10-25 03:57 pm
ಭ್ರಷ್ಟಾಚಾರ ಆರೋಪಕ್ಕೆ ಉತ್ತರಿಸಲು ಸ್ಪೀಕರ್ ಖಾದರ್ ನ...
29-10-25 03:16 pm
Smart City, Kadri Park Road: ಕದ್ರಿ ಪಾರ್ಕ್ ರಸ್...
28-10-25 08:36 pm
ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ...
28-10-25 03:36 pm
29-10-25 02:53 pm
Mangalore Correspondent
ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm
ಕೋಟಿ ರೂ. ಚೀಟಿ ವ್ಯವಹಾರ ಇದೆ, ಹಣ ಸಾಲ ಕೊಟ್ಟರೆ ದುಪ...
27-10-25 05:29 pm
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm