ಬ್ರೇಕಿಂಗ್ ನ್ಯೂಸ್
12-02-21 04:53 pm Mangalore Correspondent ಕರಾವಳಿ
ಮಂಗಳೂರು, ಫೆ.12: ಚೆಕ್ ಬೌನ್ಸ್ ಪ್ರಕರಣದಲ್ಲಿ ಜಾಮೀನು ರಹಿತ ಬಂಧನ ವಾರೆಂಟ್ ಆಗಿದ್ದ ಕನ್ನಡ ಚಿತ್ರನಟಿ ಪದ್ಮಜಾ ರಾವ್ ಇಂದು ಮಂಗಳೂರಿನ 5ನೇ ಜೆಎಂಎಫ್ ಕೋರ್ಟಿಗೆ ಹಾಜರಾಗಿ ಜಾಮೀನು ಪಡೆದಿದ್ದಾರೆ.
ಪದ್ಮಜಾ ರಾವ್ ಅವರನ್ನು ಬಂಧಿಸಿ, ಕರೆತರುವಂತೆ ಮಂಗಳೂರಿನ ಕೋರ್ಟ್ ಬೆಂಗಳೂರಿನ ಕಲಘಟ್ಟ ಪೊಲೀಸರಿಗೆ ವಾರೆಂಟ್ ನೀಡಿತ್ತು. ಅದರಂತೆ, ಪೊಲೀಸರು ಆಕೆಯನ್ನು ಬಂಧಿಸಿ ಮಾರ್ಚ್ 8ರಂದು ಕೋರ್ಟಿಗೆ ಹಾಜರು ಮಾಡಬೇಕಿತ್ತು. ಆದರೆ, ಪದ್ಮಜಾ ರಾವ್ ವಾರೆಂಟ್ ಆದೇಶದ ಪ್ರತಿ ಸಿಗುತ್ತಿದ್ದಂತೆ ತಮ್ಮ ವಕೀಲರ ಮೂಲಕ ಮಂಗಳೂರಿನ ಕೋರ್ಟಿಗೆ ಆಗಮಿಸಿ ನ್ಯಾಯಾಧೀಶರ ಮುಂದೆ ಹಾಜರಾಗಿ ಜಾಮೀನು ಪಡೆದಿದ್ದಾರೆ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಪದ್ಮಜಾ ರಾವ್, ನನಗೆ ನಮ್ಮ ಕಾನೂನು, ನ್ಯಾಯಾಂಗದ ಬಗ್ಗೆ ಸಂಪೂರ್ಣ ಭರವಸೆ ಇದೆ. ಜೊತೆಗೆ ನನ್ನ ಮೇಲೆ ನನಗೆ ಭರವಸೆ ಇದೆ. ಈ ಪ್ರಕರಣದಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ. ನೀವೆಲ್ಲಾ ಕಾದು ನೋಡಬೇಕು, ಈಗ ಏನನ್ನೂ ಹೇಳಲು ಆಗುವುದಿಲ್ಲ ಎಂದು ಹೇಳಿದರು.
ತುಳು ಚಿತ್ರನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ತನ್ನಿಂದ 41 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾಗಿ ಪದ್ಮಜಾ ವಿರುದ್ಧ ಕೋರ್ಟಿಗೆ ದೂರು ಸಲ್ಲಿಸಿದ್ದರು. 2018ರಲ್ಲಿ ಚಾಲಿಪೋಲಿಲು ಚಿತ್ರಕ್ಕಾಗಿ ನಟಿಸಲು ಬಂದಿದ್ದ ವೇಳೆ ಪರಿಚಯ ಆಗಿದ್ದ ಪದ್ಮಜಾ, ಆಬಳಿಕ ಹಂತ ಹಂತವಾಗಿ ಹಣ ಪಡೆದಿದ್ದರು. ಹಣವನ್ನು ತನ್ನ ವೀರು ಟಾಕೀಸ್ ಪ್ರೊಡಕ್ಷನ್ ಹೌಸ್ ಹೆಸರಲ್ಲಿ ಚೆಕ್ ಮೂಲಕ ನೀಡಿದ್ದಾಗಿ ವೀರೇಂದ್ರ ಹೇಳಿಕೊಂಡಿದ್ದರು.
Read: ತುಳು ಚಿತ್ರ ನಿರ್ದೇಶಕನಿಗೆ ವಂಚನೆ ; ಖ್ಯಾತ ನಟಿ ಪದ್ಮಜಾ ರಾವ್ ವಿರುದ್ಧ ಮಂಗಳೂರು ಕೋರ್ಟಿನಿಂದ ಬಂಧನ ವಾರಂಟ್
Kannada actor Padmaja Rao Actress gets anticipatory bail in Mangalore court over cheque bounce case which was issued by the Mangalore 5th Additional Court. A case was filed by Tulu Director Veerendra Shetty Kavoor.
23-10-24 09:41 pm
Bangalore Correspondent
C.P. Yogeshwar joins Congress: ಬಿಜೆಪಿ-ಜೆಡಿಎಸ್...
23-10-24 12:41 pm
Bangalore Rain, School holiday: ಬೆಂಗಳೂರಿನಲ್ಲಿ...
22-10-24 11:13 pm
ಚನ್ನಪಟ್ಟಣ ; ಯೋಗೀಶ್ವರ್ ಗೆ ಮೈತ್ರಿ ಟಿಕೆಟ್ ನೀಡಲು...
22-10-24 11:06 pm
Kengari body found, Bangalore: ಬಿಂದಿಗೆ ಎತ್ತಿಕ...
22-10-24 08:27 pm
21-10-24 02:23 pm
HK News Desk
2023ರಲ್ಲಿ ಗ್ಲೋಬಲ್ ಯೂತ್ ಐಕಾನ್ ಆಗಿದ್ದ ಬಿಲಿಯನೇರ್...
20-10-24 10:53 pm
ಮನೆ ಮಾಲೀಕನ ಮೇಲಿನ ಸಿಟ್ಟಿನಲ್ಲಿ ಚಪಾತಿ ಹಿಟ್ಟಿಗೆ ಮ...
17-10-24 11:16 am
Mumbai Road Rage Video; ಮುಂಬೈ ; ಕಾರಿಗೆ ಆಟೋ ರಿ...
15-10-24 03:51 pm
ಡಿ ಕಂಪನಿ ಹಾದಿಯಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್...
14-10-24 10:12 pm
24-10-24 01:25 am
Mangaluru Correspondent
Mangalore, Babu Pilar, Ullal press club; 4500...
23-10-24 09:49 pm
Mangalore Police, Accident, Kadri: ರಾತ್ರಿ ವೇಳ...
23-10-24 06:35 pm
ಮಂಗಳೂರು ವಿವಿಯಲ್ಲಿ ತುಳು ಎಂಎ ಪ್ರವೇಶ ಶುಲ್ಕ ಹೆಚ್ಚ...
23-10-24 06:26 pm
Mangalore, Arun Puthila, Puttur VHP: ವಿಎಚ್ ಪಿ...
23-10-24 03:15 pm
23-10-24 08:38 pm
Mangalore Correspondent
Hassan, Bangladeshi arrest: ಹಾಸನ ನಗರದಲ್ಲಿ ನೆಲ...
22-10-24 02:49 pm
Udupi Murder, Crime news: ಕುಡಿದ ಮತ್ತಿನಲ್ಲಿ ಸ್...
22-10-24 02:29 pm
Mangalore stone railway track, Thokottu; ರೈಲು...
20-10-24 11:47 am
Belagavi Cash Seized, crime, Police: ಮಹಾರಾಷ್ಟ...
19-10-24 02:38 pm