ತೈಲ ಬೆಲೆ ಏರುಗತಿ ; ಬಡವರ ಬಗ್ಗೆ ಕನಿಕರ ಇಲ್ಲದ ಬಿಜೆಪಿ ಸರಕಾರ : ರಮಾನಾಥ ರೈ ಟೀಕೆ

19-02-21 05:03 pm       Mangalore Correspondent   ಕರಾವಳಿ

ಬಡವರನ್ನು ಕಷ್ಟಕ್ಕೆ ದೂಡುತ್ತಿರುವ ಬಿಜೆಪಿ ಸರಕಾರಕ್ಕೆ ಜನಸಾಮಾನ್ಯರ ಮೇಲೆ ಕನಿಕರ ಇಲ್ಲದಾಗಿದೆ ಎಂದು ರಮಾನಾಥ ರೈ ಟೀಕಿಸಿದ್ದಾರೆ. 

ಮಂಗಳೂರು, ಫೆ.19 : ಡೀಸೆಲ್ ಮತ್ತು ‌ಪೆಟ್ರೋಲ್ ದರ‌ ಏರುಗತಿಯಲ್ಲಿದ್ದರೂ, ಅದನ್ನು ತಡೆಯದೆ ಬಡವರನ್ನು ಕಷ್ಟಕ್ಕೆ ದೂಡುತ್ತಿರುವ ಬಿಜೆಪಿ ಸರಕಾರಕ್ಕೆ ಜನಸಾಮಾನ್ಯರ ಮೇಲೆ ಕನಿಕರ ಇಲ್ಲದಾಗಿದೆ. ಬಡವರು, ಜನಸಾಮಾನ್ಯರ ಮೇಲೆ ಕಾಳಜಿ ಇರುತ್ತಿದ್ದರೆ ಹೀಗೆ ವರ್ತಿಸುತ್ತಿರಲಿಲ್ಲ ಎಂದು ದ‌.ಕ.ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ರಮಾನಾಥ ರೈ ಟೀಕಿಸಿದ್ದಾರೆ. 

ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಬಿಜೆಪಿ ಅಧಿಕಾರಕ್ಕೇರಿತ್ತು. ಈಗ ಜನರ ಹಿತ ಕಾಪಾಡುವ ಬದಲು ಕಾರ್ಪೊರೇಟ್ ಕಂಪೆನಿಗಳ ಪರವಾಗಿ ಕೆಲಸ ಮಾಡುತ್ತಿದೆ. ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದರೂ ಕಡಿವಾಣ ಹಾಕದೆ ಈಗ ಯುಪಿಎ ಸರಕಾರದ ಮೇಲೆ ಗೂಬೆ‌ ಕೂರಿಸುತ್ತಿದೆ. ಕೇಂದ್ರ ಸರಕಾರದ ಈ ಧೋರಣೆ ಮತ್ತು ನುಣುಚಿಕೊಳ್ಳುವ ಕೃತ್ಯವನ್ನು ಖಂಡಿಸಿ ದೊಡ್ಡಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ಕೆ ಹರೀಶ್ ಕುಮಾರ್, ಯುವ ಕಾಂಗ್ರೆಸ್ ದ.ಕ.ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮಾಜಿ ಶಾಸಕ ಜೆ.ಆರ್. ಲೋಬೋ, ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೊಡಿಜಾಲ್, ದ.ಕ.ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ವಿಶ್ವಾಸ ಕುಮಾರ್ ದಾಸ್, ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಪಕ್ಷದ ಮುಖಂಡರಾದ ಸದಾಶಿವ ಉಳ್ಳಾಲ್, ಯು ಬಿ ಸಲೀಂ ಉಳ್ಳಾಲ್, ಜಯಶೀಲಾ ಅಡ್ಯಾಂತಯ, ಅಬ್ಬಾಸ್ ಅಲಿ ಬೋಳಂತೂರು, ಬಿ ಎಂ,  ಸುರೇಶ್ ಶೆಟ್ಟಿ, ನಝೀರ್ ಬಜಾಲ್, ನಿತ್ಯಾನಂದ ಶೆಟ್ಟಿ, ಶುಭೋದಯ ಅಳ್ವಾ ಮತ್ತಿತರರು ಉಪಸ್ಥಿತರಿದ್ದರು.

Former minister B Ramanath Rai on Friday February 19 said that the BJP-led NDA government at the centre is involving in daylight robbery by hiking duties for petrol and diesel. "In history, the country has never witnessed such a hike in prices of fuel,” he said