ಬ್ರೇಕಿಂಗ್ ನ್ಯೂಸ್
22-02-21 02:12 pm Mangalore Correspondent ಕರಾವಳಿ
ಮಂಗಳೂರು, ಫೆ.22 : ಪಿಎಫ್ಐ, ಎಸ್ಡಿಪಿಐ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿದ್ದರೂ, ಅವನ್ನು ನಿಷೇಧಿಸಲು ಬಿಜೆಪಿ ಮುಂದಾಗಲ್ಲ. ಬಿಜೆಪಿಗೆ ಎಸ್ ಡಿಪಿಐ ಬೇಕು, ಇವರದ್ದೇ 'ಬಿ' ಟೀಂ ಪಿಎಫ್ಐ, ಎಸ್ಡಿಪಿಐ ಗಳಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಉಡುಪಿಗೆ ತೆರಳಲು ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ಮಾಧ್ಯಮದ ಪ್ರಶ್ನೆಗಳಿಗೆ ಉತ್ತರ ನೀಡಿದರು. ಪಿಎಫ್ಐ ರ್ಯಾಲಿ ನಡೆಸಲು ಅನುಮತಿ ಕೊಟ್ಟಿದ್ದು ಯಾರು ? ಇದೇ ಬಿಜೆಪಿ ಆಡಳಿತವೇ ಅಲ್ಲವೇ..? ಈಗ ಪಿಎಫ್ಐ, ಎಸ್ ಡಿಪಿಐ ರದ್ದು ಮಾಡುತ್ತೇವೆ, ಆಕ್ಷನ್ ತಗೊಳ್ತೀವಿ ಅಂತಿದ್ದಾರೆ. ಇವ್ರು ಆ ಕೆಲಸಾನ ಮಾಡಲ್ಲ. ಯಾಕಂದ್ರೆ, ಇವರದ್ದೇ ಬಿ ಟೀಮ್ ಅವರದ್ದು ಎಂದು ಬಿಜೆಪಿ ನಾಯಕರನ್ನು ಮೂದಲಿಸಿದರು.
ಪಿಎಫ್ಐ ರದ್ದು ಮಾಡಬೇಕೆಂದಿದ್ದರೆ ಸಾಕಷ್ಟು ಸಾಕ್ಷ್ಯಗಳು ಇವರ ಮುಂದೆನೇ ಇವೆ. ನಿಷೇಧ ಮಾಡಬೇಕೂಂತ ಇದ್ದರೆ ಅದನ್ನು ಕೇಂದ್ರಕ್ಕೆ ಕಳುಹಿಸಿ ನಿಷೇಧ ಮಾಡಬಹುದು. ಇವರದೇ ಸರಕಾರ ಕೇಂದ್ರದಲ್ಲೂ ಇದೆ. ಆದರೆ, ಇವರಿಗೆ ಅದು ಬೇಕಿಲ್ಲ. ಎಸ್ಡಿಪಿಐಯನ್ನು ಬೆಳೆಸುತ್ತಿರುವುದು ಕೂಡ ಇದೇ ಬಿಜೆಪಿ. ಇವರು ತಮ್ಮ ಬೇಳೆ ಬೇಯಿಸಿಕೊಳ್ಳಲೆಂದೇ ಇಂಥವನ್ನು ಪೋಷಿಸಿಕೊಂಡು ಬರುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಪುದುಚೇರಿಯಲ್ಲಿ ಸಿಎಂ ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿದ್ದು ಹೋದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾರಾಯಣಸ್ವಾಮಿ ಅವರು ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಇರಬಾರದು. ಅವರ ಅಧಿಕಾರಾವಧಿಯಲ್ಲಿ ಚುನಾವಣೆ ನಡೆಯಬಾರದು ಎಂದು ಸರ್ಕಾರ ಕಿತ್ತು ಹಾಕುತ್ತಿದ್ದಾರೆ. ಇದು ಅಸಾಂವಿಧಾನಿಕವಾಗಿದ್ದು, ಶಾಸಕರನ್ನು ಖರೀದಿಸಿ ರಾಜೀನಾಮೆ ಕೊಡಿಸುತ್ತಿದ್ದಾರೆ ಎಂದು ಆಪಾದಿಸಿದರು.
Video:
Congress leader Siddaramaiah who arrived in Mangalore slammed the BJP government for Not Banning SDPI and PFI though they are in full power in country.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm