ಕಟೀಲು ; ಟೂರಿಸ್ಟ್ ಕಾರಿನಲ್ಲಿ ಶವ ಪತ್ತೆ 

23-02-21 07:11 pm       Mangaluru Correspondent   ಕರಾವಳಿ

ನಿಲ್ಲಿಸಿದ್ದ ಟೂರಿಸ್ಟ್ ಕಾರಿನಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.

ಮುಲ್ಕಿ, ಫೆ.23: ಕಟೀಲು ದೇವಸ್ಥಾನ ಬಳಿಯ ಸೇತುವೆ ಸಮೀಪದ ಹಳೆ ಪೆಟ್ರೋಲ್ ಪಂಪ್ ಮುಂದೆ ನಿಲ್ಲಿಸಿದ್ದ ಟೂರಿಸ್ಟ್ ಕಾರಿನಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.

ಮೃತರನ್ನು ಉಡುಪಿಯ ಲಕ್ಷ್ಮೀಂದ್ರ ನಗರ ನಿವಾಸಿ ದಯಾನಂದ ನಾಯಕ್ ಎನ್ನಲಾಗಿದೆ. ಕಾರಿನಲ್ಲಿ ಕುಳಿತ ಸ್ಥಿತಿಯಲ್ಲೇ ಶವ ಕಂಡುಬಂದಿದ್ದು ಯಾರಾದರೂ ಕೊಲೆ ಮಾಡಿದ್ದಾರೆಯೋ ಅಥವಾ ಸಹಜ ರೀತಿ ಮೃತಪಟ್ಟಿದ್ದಾರೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಜಪೆ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ.

Dead body of a Man from Udupi was found in a taxi car that was parked near Kateel in Mangalore. The deceased has been identifed as Dayanand.