ಬ್ರೇಕಿಂಗ್ ನ್ಯೂಸ್
24-02-21 11:39 am Mangalore Correspondent ಕರಾವಳಿ
ಉಳ್ಳಾಲ, ಫೆ.24: ತೊಕ್ಕೊಟ್ಟಿನ ಒಳಪೇಟೆಯ ಮಾರುಕಟ್ಟೆ ಬಳಿ ರೈಲ್ವೇ ಜಾಗದಲ್ಲಿ ಅಕ್ರಮವಾಗಿ ನಡೆಸುತ್ತಿರುವ ಮೂರು ಬೀಫ್ ಸ್ಟಾಲ್ ಗಳನ್ನು ತೆರವುಗೊಳಿಸುವಂತೆ ವಿಶ್ವ ಹಿಂದು ಪರಿಷತ್ ಬಜರಂಗದಳ ಉಳ್ಳಾಲ ಪ್ರಖಂಡವು ಪೊಲೀಸರಿಗೆ ಮತ್ತೆ ಆಗ್ರಹಿಸಿದೆ.
ಕಳೆದ ಜನವರಿ ತಿಂಗಳಲ್ಲಿ ಇದೇ ಮೂರು ಬೀಫ್ ಸ್ಟಾಲ್ ಗಳ ತೆರವಿಗೆ ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಬಜರಂಗದಳವು ಉಳ್ಳಾಲ ಠಾಣೆಗೆ ದೂರು ನೀಡಿದ ಬೆನ್ನಲ್ಲೆ ಜನವರಿ 8 ರ ರಾತ್ರಿ ದುಷ್ಕರ್ಮಿಯೊಬ್ಬ ಬೀಫ್ ಸ್ಟಾಲ್ ಗಳಿಗೆ ಬೆಂಕಿಹಚ್ಚಿದ ಪ್ರಕರಣ ತೀವ್ರ ಸ್ವರೂಪ ಪಡೆದಿತ್ತು. ಒತ್ತಡಕ್ಕೆ ಬಿದ್ದ ಪೊಲೀಸರು ಸಿಸಿಟಿವಿ ಆಧಾರದಲ್ಲಿ ಬೆಂಕಿ ಇಟ್ಟ ಆರೋಪಿಯನ್ನು ಬಂಧಿಸಿದ್ದರು.

ಸುಟ್ಟು ಹೋಗಿದ್ದ ಬೀಫ್ ಸ್ಟಾಲ್ ಗಳನ್ನು ಉಳ್ಳಾಲ ನಗರಸಭೆ ಆಡಳಿತವು ಮತ್ತೆ ಪುನರ್ ನಿರ್ಮಿಸಿ ಕೊಟ್ಟಿದ್ದು ಇದೀಗ ಬೀಫ್ ವ್ಯವಹಾರ ನಡೆಯುತ್ತಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿದ್ದು ಈ ಬಗ್ಗೆ ಹಲವು ಮಾನದಂಡಗಳನ್ನು ಸರಕಾರ ವಿಧಿಸಿದೆ. ಆದರೆ ಉಳ್ಳಾಲ ವ್ಯಾಪ್ತಿಯಲ್ಲಿ ಈ ಕಾನೂನು ಎಲ್ಲಿಯೂ ಅನ್ವಯವಾಗದೆ ಅಕ್ರಮ ಕಸಾಯಿಖಾನೆಗಳು ರಾಜಾರೋಷವಾಗಿ ಕಾರ್ಯಾಚರಿಸುತ್ತಿವೆ.

ತೊಕ್ಕೊಟ್ಟು ಒಳಪೇಟೆಯ ಮೂರು ಬೀಫ್ ಸ್ಟಾಲ್ ಗಳು ಪರವಾನಿಗೆ ಇಲ್ಲದೆ ವ್ಯವಹಾರ ನಡೆಸುತ್ತಿದ್ದರೂ ಕ್ರಮ ಯಾಕಿಲ್ಲ ಎನ್ನುವ ಪ್ರಶ್ನೆಯನ್ನು ಕಾರ್ಯಕರ್ತರು ಕೇಳುತ್ತಿದ್ದಾರೆ. ಪೊಲೀಸರು ಒಳಪೇಟೆಯ 3 ಅಕ್ರಮ ಕಸಾಯಿ ಖಾನೆಗಳು ಮತ್ತು ಇಲ್ಲಿಗೆ ಅಕ್ರಮವಾಗಿ ಗೋಮಾಂಸ ಸರಬರಾಜು ಮಾಡುವ ವಾಹನ ಮತ್ತು ಕಸಾಯಿಖಾನೆಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಬಜರಂಗದಳವು ಮತ್ತೆ ಆಗ್ರಹಿಸಿದ್ದು ಉಳ್ಳಾಲ ಪೊಲೀಸರಿಗೆ ಮನವಿ ನೀಡಿದ್ದಾರೆ.

ಈ ಬಗ್ಗೆ ಲಿಖಿತ ದೂರನ್ನು ವಿಶ್ವ ಹಿಂದು ಪರಿಷತ್, ಬಜರಂಗದಳ ಮುಖಂಡರು ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ಅವರಿಗೆ ನೀಡಿದ್ದಾರೆ. ಬಜರಂಗದಳ ಜಿಲ್ಲಾ ಸಹ ಗೋರಕ್ಷ ಪ್ರಮುಖ್ ಪವಿತ್ರ ಕೆರೆಬೈಲು, ಬಜರಂಗದಳ ಪ್ರಖಂಡ ಸಂಚಾಲಕ ಅರ್ಜುನ್, ಪ್ರಖಂಡ ಗೋರಕ್ಷ ಪ್ರಮುಖ್ ರಕ್ಷಿತ್, ಸಾಪ್ತಾಹಿಕ ಪ್ರಮುಖ್ ಕೌಶಿಕ್ ಉಪಸ್ಥಿತರಿದ್ದರು.
ತೊಕ್ಕೊಟ್ಟಿನಲ್ಲಿ ಅಕ್ರಮ ಬೀಫ್ ಸ್ಟಾಲ್ ; ತೆರವಿಗೆ ಆಗ್ರಹಿಸಿ ಬಜರಂಗದಳ ದೂರು
Three Unauthorised beef staffs in Ullal found VHP activists demand serious action against them. A case has been filed at Ullal police station in Mangalore.
29-04-26 10:36 am
HK News Staffer
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
ಬಿಎಂಟಿಸಿ ಬಸ್ ಚಲಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘ...
25-04-26 10:56 pm
ಫೇಲ್ ಎನ್ನಲಾಗಿದ್ದ ವಿದ್ಯಾರ್ಥಿನಿ ಟಾಪರ್ ; SSLC...
24-04-26 10:52 pm
29-04-26 11:18 pm
HK News Staffer
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
29-04-26 11:10 pm
HK News Staffer
ಬೆಂಗಳೂರಿನಲ್ಲಿ ದಿಢೀರ್ ಮಳೆ ಆರ್ಭಟ ; ಬೌರಿಂಗ್ ಆಸ್ಪ...
29-04-26 08:12 pm
ಆಧಾರ್ ಹಿಡಿದು ಹೋದವರು 8 ತಿಂಗಳಾದರೂ ಸಿಗದ ಸುಳಿವು ;...
29-04-26 07:54 pm
ತ್ರಾಸಿ ಬೀಚ್ ಬಳಿ ಭೀಕರ ಅಪಘಾತ ; ಶಿವಮೊಗ್ಗದ ಪ್ರವಾಸ...
29-04-26 03:50 pm
ಪಹಲ್ಗಾಮ್ ಮಾದರಿಯಲ್ಲೇ ಮುಂಬೈನಲ್ಲಿ ದಾಳಿ ; ಕಲ್ಮಾ ಪ...
29-04-26 02:46 pm