ಬ್ರೇಕಿಂಗ್ ನ್ಯೂಸ್
25-02-21 07:52 pm Mangaluru correspondant ಕರಾವಳಿ
ಉಳ್ಳಾಲ, ಫೆ.25: ಕಾಯಿ ಎಳತಾದರೂ ದೊಡ್ಡದಾಗಿ ನೇತಾಡುತ್ತಿರುವ ಅಸ್ಸಾಂ ತಳಿಯ ಸೋರೆ ಕಾಯಿಗಳು. ಹತ್ತಿರದಲ್ಲೇ ಇರೋ ಚಪ್ಪರದಲ್ಲಿ ಎಣಿಕೆಗೆ ಸಿಗದಷ್ಟು ಬೆಳೆದು ತೂಗುತ್ತಿರುವ ಹೀರೆ ಕಾಯಿಗಳು. ಅದರ ಸುತ್ತಲೂ ಹರಿವೆ, ಬದನೆ, ಬೆಂಡೆಕಾಯಿ ಮೂಲಂಗಿ, ಟೊಮೆಟೋ, ಮುಳ್ಳು ಸೌತೆಗಳ ಗೊಂಚಲು ಕಣ್ಮನ ಸೆಳೆಯುತ್ತದೆ.
ಉಳ್ಳಾಲದ ಕಾಪಿಕಾಡಿನಲ್ಲಿರುವ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಈಗ ನೋಡುಗರ ಕಣ್ಣಿಗೆ ಹಸಿರ ತಂಪು ನೀಡುತ್ತಿದೆ. ಸಂಶೋಧನಾ ಕೇಂದ್ರದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಕೂಲಿ ಕಾರ್ಮಿಕರು ಸೇರಿ ಇಂತಹ ಸಾವಯವ ಕೃಷಿಯನ್ನು ನಡೆಸಿ ಸಫಲತೆ ಕಂಡಿದ್ದಾರೆ.
14 ಹೆಕ್ಟೇರ್ ಪ್ರದೇಶವನ್ನು ಹೊಂದಿರುವ ಸಂಶೋಧನಾ ಕೇಂದ್ರದಲ್ಲಿ ಗೇರು ಮೂಲ ಕೃಷಿಯಾಗಿದ್ದರೂ ಖಾಲಿ ಇರುವ ಜಾಗದಲ್ಲಿ ತರಕಾರಿಗಳ ಕೈ ತೋಟವನ್ನು ಬೆಳೆಯಲಾಗಿದೆ. ಅಸ್ಸಾಂ ಗಡಿ ಪ್ರದೇಶದಲ್ಲಿ ಬೆಳೆಯುವ ಸೋರೆ ಕಾಯಿಗಳು ಇಲ್ಲಿಯ ಪ್ರಮುಖ ಆಕರ್ಷಣೆ. ಅಸ್ಸಾಂ ತಳಿಯ ಸೋರೆ ಕಾಯಿಗಳನ್ನು ಇಲ್ಲಿ ಬೆಳೆದಿದ್ದು ಎಳೆಯದಾದರೂ ಅದರ ಗಾತ್ರ ಮಾತ್ರ ಎಲ್ಲರನ್ನೂ ಆಕರ್ಷಿಸುತ್ತಿದೆ.
ಚೈನಾದಲ್ಲೂ ಅಸ್ಸಾಂ ತಳಿಯ ಸೋರೆ ಕಾಯಿ ಬಹಳ ಫೇಮಸ್ ಅಂತೆ. ಜೊತೆಗೆ ಹತ್ತಿರದ ಬೃಹತ್ ಚಪ್ಪರದಲ್ಲಿ ಎಣಿಕೆಗೂ ಸಿಗದಷ್ಟು ಲೋಕಲ್ ಹೀರೆಕಾಯಿಗಳು, ಟೊಮೆಟೊ, ಮೂಲಂಗಿ, ಮುಳ್ಳು ಸೌತೆ, ಬದನೆ, ಬೆಂಡೆಕಾಯಿ ಕೈತೋಟಗಳು ಜನರನ್ನ ಕೃಷಿಯತ್ತ ಆಕರ್ಷಿಸುವಂತೆ ಮಾಡಿದೆ. ಕೇಂದ್ರದ ಸಿಬ್ಬಂದಿ ಮತ್ತು ಕೂಲಿ ಕಾರ್ಮಿಕರು ಸೇರಿ ತೋಟವನ್ನು ಬಹಳ ಚೆನ್ನಾಗಿ ಮಾಡಿದ್ದು ನೀರು, ಗೊಬ್ಬರಗಳನ್ನು ಹಾಕಿ ಸಲಹಿದ ಪರಿಣಾಮ ಸಮೃದ್ಧ ತರಕಾರಿ ಬೆಳೆದಿದ್ದಾರೆ.
ತೋಟದಲ್ಲಿ ಬೆಳೆದ ತರಕಾರಿಗಳನ್ನು ಕೇಂದ್ರದ 25 ಸಿಬ್ಬಂದಿಗಳು, ಕೂಲಿ ಕಾರ್ಮಿಕರಿಗೆ ಹಂಚಿ ಉಳಿದ ತರಕಾರಿಗಳಿಂದ ಸಿಗುವ ಬೀಜಗಳನ್ನು ಕೃಷಿಕರು ಮತ್ತು ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ.ಈ ಬಗ್ಗೆ ಪ್ರತಿಕ್ರಿಯಿಸಿದ ಉಳ್ಳಾಲ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ರವಿರಾಜ್ ಶೆಟ್ಟಿ, ಕೇಂದ್ರಕ್ಕೆ ಅನೇಕ ಕೃಷಿಕರು ಭೇಟಿ ನೀಡುತ್ತಿರುತ್ತಾರೆ. ಅವರಿಗೆ ಸ್ಪೂರ್ತಿ ನೀಡುವ ಉದ್ದೇಶದಿಂದ ಕೈ ತೋಟವನ್ನು ನಿರ್ಮಿಸಲಾಗಿದೆ.
ಮಂಗಳೂರು ನಗರ ಅಂತೂ ಹಸಿರು ಮುಕ್ತವಾಗುತ್ತಿದೆ. ಇರೋ ಸ್ವಲ್ಪ ಜಾಗದಲ್ಲಾದರೂ ಎಲ್ಲರೂ ಈ ರೀತಿ ತರಕಾರಿಗಳನ್ನಾದರೂ ಬೆಳೆಯಬಹುದು ಎಂದು ಜನರಲ್ಲಿ ಆತ್ಮವಿಶ್ವಾಸ ತುಂಬಲು ಕೈತೋಟ ನಿರ್ಮಿಸಲಾಗಿದೆ. ಅಲ್ಲದೆ ತಾರಸಿ ತೋಟದಲ್ಲೂ ಥರ್ಮಾಕೋಲಿನ ಪೆಟ್ಟಿಗೆಗಳಲ್ಲಿ ಯಾವ ರೀತಿ ತರಕಾರಿಗಳನ್ನು ಬೆಳೆಯಬಹುದೆಂದು ಇಲ್ಲಿ ತೋರಿಸಿಕೊಡಲಾಗಿದೆ ಎಂದಿದ್ದಾರೆ.
A plantation program was held at Ullal, Mangalore. Hundreds thronged to the venue to see various vegetables grown in different states of India.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm