ಬ್ರೇಕಿಂಗ್ ನ್ಯೂಸ್
25-02-21 07:52 pm Mangaluru correspondant ಕರಾವಳಿ
ಉಳ್ಳಾಲ, ಫೆ.25: ಕಾಯಿ ಎಳತಾದರೂ ದೊಡ್ಡದಾಗಿ ನೇತಾಡುತ್ತಿರುವ ಅಸ್ಸಾಂ ತಳಿಯ ಸೋರೆ ಕಾಯಿಗಳು. ಹತ್ತಿರದಲ್ಲೇ ಇರೋ ಚಪ್ಪರದಲ್ಲಿ ಎಣಿಕೆಗೆ ಸಿಗದಷ್ಟು ಬೆಳೆದು ತೂಗುತ್ತಿರುವ ಹೀರೆ ಕಾಯಿಗಳು. ಅದರ ಸುತ್ತಲೂ ಹರಿವೆ, ಬದನೆ, ಬೆಂಡೆಕಾಯಿ ಮೂಲಂಗಿ, ಟೊಮೆಟೋ, ಮುಳ್ಳು ಸೌತೆಗಳ ಗೊಂಚಲು ಕಣ್ಮನ ಸೆಳೆಯುತ್ತದೆ.
ಉಳ್ಳಾಲದ ಕಾಪಿಕಾಡಿನಲ್ಲಿರುವ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಈಗ ನೋಡುಗರ ಕಣ್ಣಿಗೆ ಹಸಿರ ತಂಪು ನೀಡುತ್ತಿದೆ. ಸಂಶೋಧನಾ ಕೇಂದ್ರದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಕೂಲಿ ಕಾರ್ಮಿಕರು ಸೇರಿ ಇಂತಹ ಸಾವಯವ ಕೃಷಿಯನ್ನು ನಡೆಸಿ ಸಫಲತೆ ಕಂಡಿದ್ದಾರೆ.
14 ಹೆಕ್ಟೇರ್ ಪ್ರದೇಶವನ್ನು ಹೊಂದಿರುವ ಸಂಶೋಧನಾ ಕೇಂದ್ರದಲ್ಲಿ ಗೇರು ಮೂಲ ಕೃಷಿಯಾಗಿದ್ದರೂ ಖಾಲಿ ಇರುವ ಜಾಗದಲ್ಲಿ ತರಕಾರಿಗಳ ಕೈ ತೋಟವನ್ನು ಬೆಳೆಯಲಾಗಿದೆ. ಅಸ್ಸಾಂ ಗಡಿ ಪ್ರದೇಶದಲ್ಲಿ ಬೆಳೆಯುವ ಸೋರೆ ಕಾಯಿಗಳು ಇಲ್ಲಿಯ ಪ್ರಮುಖ ಆಕರ್ಷಣೆ. ಅಸ್ಸಾಂ ತಳಿಯ ಸೋರೆ ಕಾಯಿಗಳನ್ನು ಇಲ್ಲಿ ಬೆಳೆದಿದ್ದು ಎಳೆಯದಾದರೂ ಅದರ ಗಾತ್ರ ಮಾತ್ರ ಎಲ್ಲರನ್ನೂ ಆಕರ್ಷಿಸುತ್ತಿದೆ.
ಚೈನಾದಲ್ಲೂ ಅಸ್ಸಾಂ ತಳಿಯ ಸೋರೆ ಕಾಯಿ ಬಹಳ ಫೇಮಸ್ ಅಂತೆ. ಜೊತೆಗೆ ಹತ್ತಿರದ ಬೃಹತ್ ಚಪ್ಪರದಲ್ಲಿ ಎಣಿಕೆಗೂ ಸಿಗದಷ್ಟು ಲೋಕಲ್ ಹೀರೆಕಾಯಿಗಳು, ಟೊಮೆಟೊ, ಮೂಲಂಗಿ, ಮುಳ್ಳು ಸೌತೆ, ಬದನೆ, ಬೆಂಡೆಕಾಯಿ ಕೈತೋಟಗಳು ಜನರನ್ನ ಕೃಷಿಯತ್ತ ಆಕರ್ಷಿಸುವಂತೆ ಮಾಡಿದೆ. ಕೇಂದ್ರದ ಸಿಬ್ಬಂದಿ ಮತ್ತು ಕೂಲಿ ಕಾರ್ಮಿಕರು ಸೇರಿ ತೋಟವನ್ನು ಬಹಳ ಚೆನ್ನಾಗಿ ಮಾಡಿದ್ದು ನೀರು, ಗೊಬ್ಬರಗಳನ್ನು ಹಾಕಿ ಸಲಹಿದ ಪರಿಣಾಮ ಸಮೃದ್ಧ ತರಕಾರಿ ಬೆಳೆದಿದ್ದಾರೆ.
ತೋಟದಲ್ಲಿ ಬೆಳೆದ ತರಕಾರಿಗಳನ್ನು ಕೇಂದ್ರದ 25 ಸಿಬ್ಬಂದಿಗಳು, ಕೂಲಿ ಕಾರ್ಮಿಕರಿಗೆ ಹಂಚಿ ಉಳಿದ ತರಕಾರಿಗಳಿಂದ ಸಿಗುವ ಬೀಜಗಳನ್ನು ಕೃಷಿಕರು ಮತ್ತು ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ.ಈ ಬಗ್ಗೆ ಪ್ರತಿಕ್ರಿಯಿಸಿದ ಉಳ್ಳಾಲ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ರವಿರಾಜ್ ಶೆಟ್ಟಿ, ಕೇಂದ್ರಕ್ಕೆ ಅನೇಕ ಕೃಷಿಕರು ಭೇಟಿ ನೀಡುತ್ತಿರುತ್ತಾರೆ. ಅವರಿಗೆ ಸ್ಪೂರ್ತಿ ನೀಡುವ ಉದ್ದೇಶದಿಂದ ಕೈ ತೋಟವನ್ನು ನಿರ್ಮಿಸಲಾಗಿದೆ.
ಮಂಗಳೂರು ನಗರ ಅಂತೂ ಹಸಿರು ಮುಕ್ತವಾಗುತ್ತಿದೆ. ಇರೋ ಸ್ವಲ್ಪ ಜಾಗದಲ್ಲಾದರೂ ಎಲ್ಲರೂ ಈ ರೀತಿ ತರಕಾರಿಗಳನ್ನಾದರೂ ಬೆಳೆಯಬಹುದು ಎಂದು ಜನರಲ್ಲಿ ಆತ್ಮವಿಶ್ವಾಸ ತುಂಬಲು ಕೈತೋಟ ನಿರ್ಮಿಸಲಾಗಿದೆ. ಅಲ್ಲದೆ ತಾರಸಿ ತೋಟದಲ್ಲೂ ಥರ್ಮಾಕೋಲಿನ ಪೆಟ್ಟಿಗೆಗಳಲ್ಲಿ ಯಾವ ರೀತಿ ತರಕಾರಿಗಳನ್ನು ಬೆಳೆಯಬಹುದೆಂದು ಇಲ್ಲಿ ತೋರಿಸಿಕೊಡಲಾಗಿದೆ ಎಂದಿದ್ದಾರೆ.
A plantation program was held at Ullal, Mangalore. Hundreds thronged to the venue to see various vegetables grown in different states of India.
23-10-24 09:41 pm
Bangalore Correspondent
C.P. Yogeshwar joins Congress: ಬಿಜೆಪಿ-ಜೆಡಿಎಸ್...
23-10-24 12:41 pm
Bangalore Rain, School holiday: ಬೆಂಗಳೂರಿನಲ್ಲಿ...
22-10-24 11:13 pm
ಚನ್ನಪಟ್ಟಣ ; ಯೋಗೀಶ್ವರ್ ಗೆ ಮೈತ್ರಿ ಟಿಕೆಟ್ ನೀಡಲು...
22-10-24 11:06 pm
Kengari body found, Bangalore: ಬಿಂದಿಗೆ ಎತ್ತಿಕ...
22-10-24 08:27 pm
21-10-24 02:23 pm
HK News Desk
2023ರಲ್ಲಿ ಗ್ಲೋಬಲ್ ಯೂತ್ ಐಕಾನ್ ಆಗಿದ್ದ ಬಿಲಿಯನೇರ್...
20-10-24 10:53 pm
ಮನೆ ಮಾಲೀಕನ ಮೇಲಿನ ಸಿಟ್ಟಿನಲ್ಲಿ ಚಪಾತಿ ಹಿಟ್ಟಿಗೆ ಮ...
17-10-24 11:16 am
Mumbai Road Rage Video; ಮುಂಬೈ ; ಕಾರಿಗೆ ಆಟೋ ರಿ...
15-10-24 03:51 pm
ಡಿ ಕಂಪನಿ ಹಾದಿಯಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್...
14-10-24 10:12 pm
24-10-24 01:25 am
Mangaluru Correspondent
Mangalore, Babu Pilar, Ullal press club; 4500...
23-10-24 09:49 pm
Mangalore Police, Accident, Kadri: ರಾತ್ರಿ ವೇಳ...
23-10-24 06:35 pm
ಮಂಗಳೂರು ವಿವಿಯಲ್ಲಿ ತುಳು ಎಂಎ ಪ್ರವೇಶ ಶುಲ್ಕ ಹೆಚ್ಚ...
23-10-24 06:26 pm
Mangalore, Arun Puthila, Puttur VHP: ವಿಎಚ್ ಪಿ...
23-10-24 03:15 pm
23-10-24 08:38 pm
Mangalore Correspondent
Hassan, Bangladeshi arrest: ಹಾಸನ ನಗರದಲ್ಲಿ ನೆಲ...
22-10-24 02:49 pm
Udupi Murder, Crime news: ಕುಡಿದ ಮತ್ತಿನಲ್ಲಿ ಸ್...
22-10-24 02:29 pm
Mangalore stone railway track, Thokottu; ರೈಲು...
20-10-24 11:47 am
Belagavi Cash Seized, crime, Police: ಮಹಾರಾಷ್ಟ...
19-10-24 02:38 pm