ಬ್ರೇಕಿಂಗ್ ನ್ಯೂಸ್
26-02-21 09:50 pm Udupi correspondant ಕರಾವಳಿ
ಉಡುಪಿ, ಫೆ.26: ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಕಾರು ಚಲಾಯಿಸಿ ಅಪಘಾತಕ್ಕೊಳಗಾದರೆ ಇನ್ ಶೂರೆನ್ಸ್ ಕ್ಲೇಮ್ ಸಿಗಲ್ಲ. ಹೀಗೆಂದು ಉಡುಪಿಯ ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ.
ಬೈಂದೂರಿನ ಕಲ್ತೋಡು ನಿವಾಸಿ ಚಂದ್ರಶೇಖರ್ ಶೆಟ್ಟಿ(48) ಎಂಬವರು 2019ರ ಮೇ 25ರಂದು ಕಾರು ಚಲಾಯಿಸುತ್ತಿದ್ದಾಗ ಗೋಳಿಹೊಳೆ ಎಂಬಲ್ಲಿ ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಚಂದ್ರಶೇಖರ್ ಶೆಟ್ಟಿ ತೀವ್ರ ಗಾಯಗೊಂಡು ಮೃತಪಟ್ಟಿದ್ದರು. ಕಾರಿಗೆ ರಾಯಲ್ ಸುಂದರಂ ಕಂಪನಿಯ ಇನ್ ಶೂರೆನ್ಸ್ ಇತ್ತು.
ಕಾರಿನ ಮಾಲಕ, ವಿಮಾ ಸೌಲಭ್ಯ ಪಡೆಯಲೆಂದು ಇನ್ ಶೂರೆನ್ಸ್ ಕಂಪನಿಗೆ ಕ್ಲೇಮ್ ಹಾಕಿದ್ದರು. ವೈಯಕ್ತಿಕ ವಿಮಾ ಸೌಲಭ್ಯದಲ್ಲಿ 15 ಲಕ್ಷ ರೂ. ಕ್ಲೇಮ್ ನೀಡುವಂತೆ ಕೇಳಿಕೊಂಡಿದ್ದರು. ಆದರೆ, ಕಂಪನಿಯವರು ಕ್ಲೇಮ್ ನೀಡಲು ನಿರಾಕರಿಸಿದ್ದರು. ಅಪಘಾತದ ಸಂದರ್ಭ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಡ್ರೈವಿಂಗ್ ಲೈಸೆನ್ಸ್ ಹೊಂದಿರಲಿಲ್ಲ ಎಂಬ ಪೊಲೀಸ್ ಪ್ರಕರಣವನ್ನು ಮುಂದಿಟ್ಟು ವಿಮಾ ಹಣ ನೀಡಲು ನಿರಾಕರಿಸಿತ್ತು.
ಬಳಿಕ ಪ್ರಕರಣ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದು ಅಪಘಾತದ ಸಂದರ್ಭದಲ್ಲಿ ಕಾರು ಚಾಲಕ ಸೂಕ್ತ ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಇದ್ದಲ್ಲಿ ವೈಯಕ್ತಿಕ ವಿಮಾ ಸೌಲಭ್ಯದ ಪರಿಹಾರವನ್ನು ನೀಡಬೇಕಿಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ.
The consumer court here has ruled that no insurance amount is payable if the vehicle which met with the accident was not driven by a person having a valid driving licence.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
04-09-25 11:07 pm
Mangalore Correspondent
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm