ಸುರತ್ಕಲ್ ; ಸಮುದ್ರಕ್ಕಿಳಿದ ಶಿವಮೊಗ್ಗ ಮೂಲದ ಬಾಲಕ ನೀರುಪಾಲು

28-02-21 11:17 pm       Mangaluru Correspondent   ಕರಾವಳಿ

ಇಲ್ಲಿನ ಗುಡ್ಡೆಕೊಪ್ಲ ಬೀಚ್ ನಲ್ಲಿ ಶಿವಮೊಗ್ಗ ಮೂಲದ 13 ವರ್ಷದ ಬಾಲಕ ನೀರಿನಲ್ಲಿ ಆಟವಾಡಲು ಹೋಗಿ ಸಮುದ್ರ ಪಾಲಾಗಿದ್ದಾನೆ. 

ಸುರತ್ಕಲ್, ಫೆ.28: ಇಲ್ಲಿನ ಗುಡ್ಡೆಕೊಪ್ಲ ಬೀಚ್ ನಲ್ಲಿ ಶಿವಮೊಗ್ಗ ಮೂಲದ 13 ವರ್ಷದ ಬಾಲಕ ನೀರಿನಲ್ಲಿ ಆಟವಾಡಲು ಹೋಗಿ ಸಮುದ್ರ ಪಾಲಾಗಿದ್ದಾನೆ. 

ತಂದೆ, ತಾಯಿ ಜೊತೆ ಬಾಲಕ ಗುಡ್ಡೆಕೊಪ್ಲ ಬೀಚ್ ಗೆ ಬಂದಿದ್ದರು. ತಂದೆಯ ಜೊತೆಗೆ ಇದ್ದಾಗ ಬಾಲಕ ಮುಬಾರಕ್(13) ಸಮುದ್ರದ ಅಲೆಗಳಿಗೆ ಸಿಲುಕಿ ನೀರುಪಾಲಾಗಿದ್ದಾನೆ. ನೀರಿನಲ್ಲಿ ಕೊಚ್ಚಿ ಹೋಗಿದ್ದ ತಂದೆಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಇವರ ಕುಟುಂಬ ಮಂಗಳೂರಿನ ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆಂದು ಬಂದಿದ್ದು ಬೀಚ್ ನೋಡಲು ತೆರಳಿದ್ದರು.

ಬಾಲಕನ ಪತ್ತೆಗಾಗಿ ಸ್ಥಳೀಯರು ಮತ್ತು ಸಿಎಸ್ ಪಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

In a tragic incident, a teenager drowned at Guddekopla beach in Suratkala here on Sunday February 28. The deceased has been identified as Mubarak Ayub Khan (15), a native of Shivamogga.