ಸಮುದ್ರಕ್ಕೆ ಕಸ ಸುರಿದಿದ್ದ ಮಿನಿ ಲಾರಿ ಜಪ್ತಿ

12-03-21 02:33 pm       Mangalore Correspondent   ಕರಾವಳಿ

ಕಸದ ರಾಶಿಯನ್ನು ಸಮುದ್ರಕ್ಕೆ ಡಂಪ್ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ಜಪ್ತಿ ಮಾಡಿದ್ದು, ಉಳ್ಳಾರ ನಗರಸಭೆಯ ವಶಕ್ಕೆ ಒಪ್ಪಿಸಿದ್ದಾರೆ.

ಮಂಗಳೂರು, ಮಾ.12: ಉಳ್ಳಾಲದ ಕೋಡಿಯಲ್ಲಿ ಕಸದ ರಾಶಿಯನ್ನು ಸಮುದ್ರಕ್ಕೆ ಡಂಪ್ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ಜಪ್ತಿ ಮಾಡಿದ್ದು, ಉಳ್ಳಾರ ನಗರಸಭೆಯ ವಶಕ್ಕೆ ಒಪ್ಪಿಸಿದ್ದಾರೆ.

ವಾರದ ಹಿಂದೆ, ಮಿನಿ ಲಾರಿ ಒಂದರಲ್ಲಿ ಉಳ್ಳಾಲದ ಕೊನೆಯ ಭಾಗ ಕೋಡಿಯಲ್ಲಿ ಲಾರಿಯಲ್ಲಿ ಲೋಡ್ ಮಾಡಿ, ತಂದಿದ್ದ ಥರ್ಮಾಕೋಲ್ ಡಬ್ಬಗಳನ್ನು ಹೊಂದಿದ್ದ ವೇಸ್ಟೇಜನ್ನು ಸಮುದ್ರಕ್ಕೆ ಸುರಿಯಲಾಗಿತ್ತು. ಈ ವೇಳೆ, ಅಲ್ಲಿಗೆ ಬೀಚ್ ನೋಡಲು ತೆರಳಿದ್ದ ಕೆಲವರು ಅದನ್ನು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.

ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಉಳ್ಳಾಲ ನಗರಸಭೆ ಆಯುಕ್ತ ರಾಯಪ್ಪ, ಲಾರಿಯ ನಂಬರ್ ನಮೂದಿಸಿ ಅದನ್ನು ಜಪ್ತಿ ಮಾಡುವಂತೆ ಪೊಲೀಸರಲ್ಲಿ ಕೇಳಿಕೊಂಡಿದ್ದ. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಲಾರಿಯನ್ನು ಜಪ್ತಿ ಮಾಡಿ ಉಳ್ಳಾಲ ನಗರಸಭೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಸಮುದ್ರಕ್ಕೆ ಕಸ ಸುರಿದ ಲಾರಿಯ ವಿರುದ್ಧ ಒಂದು ಲಕ್ಷದ ವರೆಗೆ ದಂಡ ವಿಧಿಸಲು ನಗರಸಭೆಗೆ ಅವಕಾಶ ಇರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾರಿ ಗುರುಪುರ ಬಳಿಯ ಉಳಾಯಿಬೆಟ್ಟುವಿನ ಜಿ.ಉಸ್ಮಾನ್ ಎಂಬವರಿಗೆ ಸೇರಿದ್ದು, ಅಬ್ದುಲ್ ಖಾದರ್ ಚಾಲಕರಾಗಿದ್ದರು. 

On Tuesday March 9, a truckload of waste was disposed of into the sea within the limits of Ullal municipality and the truck has been seized.