ಬ್ರೇಕಿಂಗ್ ನ್ಯೂಸ್
 
            
                        12-03-21 08:41 pm Mangaluru correspondent ಕರಾವಳಿ
 
            ಉಳ್ಳಾಲ, ಮಾ.12: ಕುಂಪಲದ ಆಶ್ರಯ ಕಾಲನಿಯ ತನ್ನ ಮನೆಯಲ್ಲೇ ಅನುಮಾನಸ್ಪದವಾಗಿ ಸಾವು ಕಂಡಿದ್ದ ಅಪ್ರಾಪ್ತ ಯುವತಿ, ರೂಪದರ್ಶಿ ಪ್ರೇಕ್ಷಾಳ ಮನೆಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.

ಸಚಿವ ಅಂಗಾರರಲ್ಲಿ ಮೃತ ಪ್ರೇಕ್ಷಾಳ ತಂದೆ ಚಿತ್ತಪ್ರಸಾದ್ ಅವರು ಅಳಲನ್ನು ತೋಡಿದ್ದಾರೆ. ಮಗಳ ಮಾಡೆಲಿಂಗ್ ಹವ್ಯಾಸಕ್ಕೆ ನಾವು ಸಂಪೂರ್ಣ ಬೆಂಬಲ ನೀಡಿದ್ದೆವು. ಬುಧವಾರ ಮಧ್ಯಾಹ್ನ ಬೆಂಗಳೂರಿಗೆ ಫೋಟೊ ಶೂಟ್ ತೆರಳಬೇಕಿದ್ದ ನನ್ನ ಮಗಳು ಹೆಣವಾಗಿ ಮಸಣ ಸೇರಿದ್ದರ ಹಿಂದೆ ಕಾಣದ ಕೈಗಳ ನೆರಳಿದೆ. ಶಂಕಿತರ ಹೆಸರನ್ನು ಈಗಾಗಲೇ ಪೊಲೀಸರಿಗೆ ತಿಳಿಸಿದ್ದು ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಸಚಿವರಲ್ಲಿ ವಿನಂತಿಸಿದ್ದಾರೆ.

ಗಾಂಜಾ ಗ್ಯಾಂಗ್ ಮುಂದೆ ಕುಂಪಲ ಗಢ ಗಢ !
ಯುವತಿಯ ಅಸಹಜ ಸಾವಿನ ಬಗ್ಗೆ ಆರಂಭದಲ್ಲೇ ಗಟ್ಟಿ ಧ್ವನಿ ಎತ್ತಿದ್ದ ಸ್ಥಳೀಯ ಮಾಜಿ ಪುರಸಭಾ ಸದಸ್ಯ ಮೋಹನ್ ಶೆಟ್ಟಿ ಈ ಸಾವಿನ ಹಿಂದೆ ಸ್ಥಳೀಯ ಗಾಂಜಾ ಗ್ಯಾಂಗಿನ ಕೈವಾಡದ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೂ ಮಾಹಿತಿ ನೀಡಿದ್ದರು. ಈ ಕಾರಣಕ್ಕೋ ಏನೋ ಗುರುವಾರ ಮಧ್ಯರಾತ್ರಿ ಗುಂಪೊಂದು ಮೋಹನ್ ಶೆಟ್ಟಿ ಅವರ ಮನೆಗೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕುಂಪಲ ಪರಿಸರದ ಶಂಕಿತ ಹತ್ತಕ್ಕೂ ಹೆಚ್ಚು ಗಾಂಜಾ ವ್ಯಸನಿಗಳನ್ನು ವಶಕ್ಕೆ ತೆಗೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆಂದು ತಿಳಿದು ಬಂದಿದೆ.


ಕುಂಪಲ ಪರಿಸರದಲ್ಲಿ ಹದಿಹರೆಯದ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗಿದ್ದು ಗಾಂಜಾ ವಹಿವಾಟು ನಡೆಸುವ ಹುಡುಗರ ದೊಡ್ಡ ತಂಡವೇ ಕುಂಪಲದಲ್ಲಿ ಸಕ್ರಿಯವಾಗಿದೆ. ಗಾಂಜಾ ಗ್ಯಾಂಗ್ ಇದೀಗ ಕುಂಪಲವನ್ನು ಗಢ ಗಢ ನಡುಗಿಸಲಾರಂಭಿಸಿದೆ. ಸ್ಥಳೀಯರು ಮತ್ತು ಮಾಜಿ ಜಿಪಂ ಉಪಾಧ್ಯಕ್ಷರೂ ಆದ ಸತೀಶ್ ಕುಂಪಲ ಕೂಡ ತನಗೆ ಈ ಹಿಂದೆ ಗಾಂಜಾ ಗುಂಪು ಅಟ್ಯಾಕ್ ಮಾಡಿದ್ದರ ಬಗ್ಗೆ ಸಚಿವರ ಮುಂದೆ ನೋವು ಹೇಳ್ಕೊಂಡಿದ್ದಾರೆ. ಸಚಿವ ಅಂಗಾರ ಅವರು ಗಾಂಜಾ ಮಾಫಿಯಾದ ವಿರುದ್ಧ ಗ್ರಾಮಸ್ಥರೆಲ್ಲರೂ ಒಂದಾಗಿ ಹೋರಾಡುವಂತೆ ಕರೆ ನೀಡಿದ್ದಾರೆ.
 
            
            
            Suspicious Murder Death of Model girl Preksha in Kumpala in Mangalore, Minister Angara visits her house and consoles family.
 
    
            
             31-10-25 08:10 pm
                        
            
                  
                HK News Desk    
            
                    
 
    'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
 
    ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             31-10-25 09:23 pm
                        
            
                  
                Mangalore Correspondent    
            
                    
 
    ಅನಧಿಕೃತ ಪಾರ್ಕಿಂಗ್ ವಿರುದ್ಧ ಮಂಗಳೂರು ಪೊಲೀಸರ ಕಾರ್...
31-10-25 09:00 pm
 
    78 ಶೇ. ಜನರಿಗೆ ಎರಡು ವರ್ಷದಲ್ಲಿ 23 ಸಾವಿರ ಮಕ್ಕಳು,...
31-10-25 03:05 pm
 
    ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
 
    ಧರ್ಮಸ್ಥಳ ಪ್ರಕರಣ ; ಮಹೇಶ್ ಶೆಟ್ಟಿ ತಿಮರೋಡಿ ತಂಡಕ್ಕ...
30-10-25 08:06 pm
 
    
            
             31-10-25 12:55 pm
                        
            
                  
                HK News Desk    
            
                    
 
    ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
 
    ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm