ಸೋಮೇಶ್ವರ ಮಾಜಿ ಮಂಡಲ ಪ್ರಧಾನ ಪಿಲಾರು ಪರಮೇಶ್ವರ ಶೆಟ್ಟಿ ವಿಧಿವಶ

18-03-21 01:36 pm       Mangalore Correspondent   ಕರಾವಳಿ

ಮಾಜಿ ಸೋಮೇಶ್ವರ ಮಂಡಲ ಪಂಚಾಯತ್ ಪ್ರಧಾನರಾಗಿದ್ದ ಪಿಲಾರು ಪರಮೇಶ್ವರ ಶೆಟ್ಟಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ. 

ಉಳ್ಳಾಲ, ಮಾ.18: ಹಿರಿಯರಾದ, ಮಾಜಿ ಸೋಮೇಶ್ವರ ಮಂಡಲ ಪಂಚಾಯತ್ ಪ್ರಧಾನರಾಗಿದ್ದ ಪಿಲಾರು ಪರಮೇಶ್ವರ ಶೆಟ್ಟಿ(97) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. 

1978ರಲ್ಲಿ ಸೋಮೇಶ್ವರ ಮಂಡಲ ಪಂಚಾಯತ್ ಪ್ರಧಾನರಾಗಿ ಆಯ್ಕೆಯಾಗಿ ಸುಮಾರು 40 ವರ್ಷ ಕಾಲ ಸೋಮೇಶ್ವರ ಗ್ರಾಮ ಪಂಚಾಯತ್ ಸದಸ್ಯರಾಗಿ, ಕೋಟೆಕಾರು ಹಾಗೂ ಕೂಳೂರು ವ್ಯವಸಾಯ ಸೇವಾ ಸಹಕಾರ ಸಂಘಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಪರಮೇಶ್ವರ ಶೆಟ್ಟಿ ದೀರ್ಘಾಯುಷಿಯಾಗಿದ್ದು ತಮ್ಮ 97ರ ಹರೆಯದಲ್ಲಿ ಪಿಲಾರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. 

ಉಳ್ಳಾಲ ವಲಯ ಬಂಟರ ಸಂಘದ ಮಾಜಿ ಗೌರವಾಧ್ಯಕ್ಷರಾಗಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಮಾರ್ಗದರ್ಶಕರಾಗಿದ್ದ ಶೆಟ್ಟರು ದೀರ್ಘಾಯುಷ್ಯದ ಸಾರ್ಥಕ ಜೀವನ ನಡೆಸಿದ್ದಾರೆ. ಮೃತರು ಓರ್ವ ಪುತ್ರ, ನಾಲ್ವರು ಪುತ್ರಿಯರು ಸೇರಿದಂತೆ ಮೊಮ್ಮಕ್ಕಳು ,ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಸಂಜೆ 4 ಗಂಟೆಗೆ ಪಿಲಾರಿನ ಸ್ವಗೃಹದಲ್ಲಿ ನಡೆಯಲಿದೆ.

Mangalore Pilar Parameshwar Shetty (97) no more. He was the former president of Someshwar Mandala Panchayath.