ನೈತಿಕ ಪೊಲೀಸ್ ; ಬಸ್ ತಡೆದು ಹಲ್ಲೆಗೈದ ನಾಲ್ವರು ಬಜರಂಗದಳ ಕಾರ್ಯಕರ್ತರ ಸೆರೆ

02-04-21 10:06 pm       Mangaluru correspondent   ಕರಾವಳಿ

ಅನ್ಯಕೋಮಿನ ಯುವತಿ ಜೊತೆಗೆ ಬಸ್ಸಿನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. 

ಮಂಗಳೂರು, ಎ.2 : ಅನ್ಯಕೋಮಿನ ಯುವತಿ ಜೊತೆಗೆ ಬಸ್ಸಿನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. 

ಜಯಪ್ರಕಾಶ್ (28) ಅನಿಲ್ ಕುಮಾರ್(38), ಧನುಷ್(26), ಬಾಲಚಂದ್ರ(27) ಬಂಧಿತರು. ಈ ಪೈಕಿ ಬಂದರು ಬಳಿಯ ಕಂದುಕ ನಿವಾಸಿಯಾಗಿರುವ ಧನುಷ್ ವಿರುದ್ಧ ವಿವಿಧ ಠಾಣೆಗಳಲ್ಲಿ ನಾಲ್ಕು ಪ್ರಕರಣ ದಾಖಲಾಗಿದ್ದು ಪಾಂಡೇಶ್ವರ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿದೆ. 

ಆರೋಪಿಗಳು ಬಜರಂಗದಳ ಕಾರ್ಯಕರ್ತರಾಗಿದ್ದು ನಿನ್ನೆ ಪಂಪ್ವೆಲ್ ನಲ್ಲಿ ಬಸ್ ತಡೆದು ಯುವತಿ ಮತ್ತು ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಯುವಕ ಜೋಕಟ್ಟೆ ನಿವಾಸಿ ಅನ್ವರ್ ಎಂಬಾತನಾಗಿದ್ದು ಆತನಿಗೆ ಇರಿತದ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಕಂಕನಾಡಿ ನಗರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ನೈತಿಕ ಪೊಲೀಸ್ ಗಿರಿ ; ಬಸ್ ತಡೆದು  ಯುವತಿ ಜೊತೆಗಿದ್ದ ಯುವಕನಿಗೆ ಹಲ್ಲೆ !

ನೈತಿಕ ಪೊಲೀಸ್ ಗಿರಿ ತಡೆಗೆ  ಅಬ್ಬಕ್ಕ ತಂಡದಿಂದ ಮಫ್ತಿ ಪೊಲೀಸಿಂಗ್

Four persons have been attested for assault of a youth at Pumpwell Mangalore over moral policing.