ಬ್ರೇಕಿಂಗ್ ನ್ಯೂಸ್
03-04-21 01:02 pm Mangalore Correspondent ಕರಾವಳಿ
ಮಂಗಳೂರು, ಎ.3: ಸಚಿವ ಈಶ್ವರಪ್ಪ ಅವರು ಮುಖ್ಯಮಂತ್ರಿ ವಿರುದ್ಧ ಪತ್ರ ಬರೆದಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಈಶ್ವರಪ್ಪ ಬರೆದಿರುವುದು ಕೇವಲ ಪತ್ರ ಅಲ್ಲ, ರಾಜ್ಯ ಸರಕಾರದ ಆಡಳಿತ ವೈಖರಿ. ಹಿರಿಯ ಕ್ಯಾಬಿನೆಟ್ ಮಿನಿಸ್ಟರ್ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಬಿಂಬಿಸಿದ್ದಾರೆ. ರಾಜ್ಯದಲ್ಲಿ ಸಚಿವರಿಗೇ ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇಲ್ಲದಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಕೇರಳ ಪ್ರವಾಸ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ಮಾಧ್ಯಮದ ಜೊತೆ ಮಾತನಾಡಿದರು. ರಾಜ್ಯದಲ್ಲಿ ಸರಕಾರ ಹೇಗೆ ಆಡಳಿತ ನಡೆಸುತ್ತಿದೆ ಎಂಬುದನ್ನು ಸಚಿವ ಈಶ್ವರಪ್ಪ ಬಿಚ್ಚಿಟ್ಟಿದ್ದಾರೆ. ರಾಜ್ಯದ ಕಾನ್ ಸ್ಟಿಟ್ಯೂಷನಲ್ ಹೆಡ್ ಅಂದ್ರೆ ರಾಜ್ಯಪಾಲರಿಗೆ ಸಚಿವರೇ ಸಿಎಂ ಮೇಲೆ ವಿಶ್ವಾಸವಿಲ್ಲ ಎಂದಿದ್ದಾರೆ. ಮಿನಿಸ್ಟರ್ ಒಬ್ಬರಿಗೆ ಸಿಎಂ ಮೇಲೆ ವಿಶ್ವಾಸವಿಲ್ಲ ಎಂದರೆ ಸರಕಾರ ಹೇಗೆ ನಡೀತಿದೆ ? ಸರಕಾರದಲ್ಲಿ ಏನು ನಡೀತಿದೆ? ಹೇಗೆ ನಡೀತಿದೆ? ಎನ್ನುವುದನ್ನು ಈಶ್ವರಪ್ಪ ಎಕ್ಸ್ ಪೋಸ್ ಮಾಡಿದ್ದಾರೆ. ಸಿಎಂಗೆ ತಮ್ಮ ಆಡಳಿತ ಸರಿ ಇದೆ ಅನ್ನೋದಾದರೆ ಇಂದು ಸಂಜೆ ಒಳಗೆ ಈಶ್ವರಪ್ಪ ಅವರನ್ನು ಸಂಪುಟದಿಂದ ಡಿಸ್ಮಿಸ್ ಮಾಡಬೇಕು. ಇಲ್ಲಾಂದ್ರೆ ಯಡಿಯೂರಪ್ಪ ಅವರೇ ವಾಲೆಂಟರಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಈಶ್ವರಪ್ಪ ಇದನ್ನು ರೆಬೆಲ್ ಅಲ್ಲ, ಲಾಯಲ್ ಅಂತಿದ್ದಾರೆ. ಇದು ರಾಜ್ಯದ ಆಡಳಿತ ವಿಚಾರವಾಗಿದೆ. ಆಡಳಿತದ ಬಗ್ಗೆ ದೇಶಕ್ಕೆ ಪಾಠ ಹೇಳ್ತಾ ಇದ್ದವರು ಇದನ್ನು ತೋರಿಸಿಕೊಟ್ಟಿದ್ದಾರೆ. ರಾಜ್ಯಪಾಲರಿಗೆ ದೂರು ಕೊಟ್ಟು ಸಮರ್ಥನೆ ಮಾಡುತ್ತಿದ್ದಾರೆ. ಇದರ ಅರ್ಥ ಏನು ಎಂದು ಡಿಕೆಶಿ ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯ ಮತ್ತು ನನ್ನ ನಡುವೆ ಭಿನ್ನಮತವಿರುವ ಬಗ್ಗೆ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ. ನಾನು ಮಂತ್ರಿಯಾಗಿದ್ದಾಗ ಸಿಎಂ ವಿರುದ್ಧ ಮಾತಾಡಿಲ್ಲ. ನಮ್ಮ ಬಗ್ಗೆ ಹೇಳುವ ಬದಲಾಗಿ ಮೊದಲು ನಿಮ್ದು ಸರಿಮಾಡಿಕೊಳ್ಳಿ. ನಿಮ್ಮಲ್ಲಿ ಆರು ಜನ ಮುತ್ತು ರತ್ನಗಳನ್ನು ಇಟ್ಟುಕೊಂಡಿ ಕೊಂಡಿದ್ದೀರಿ. ಇನ್ನು 15 ಜನ ಬೇರೆ ಇದ್ದಾರೆ. ರಾಜ್ಯದಲ್ಲಿ ಆಡಳಿತ ಸ್ಥಿತಿ ಸಂಪೂರ್ಣ ಕುಸಿದು ಹೋಗಿದೆ. ಇದನ್ನು ಸಚಿವರೇ ಆಗಾಗ ತೋರಿಸಿಕೊಳ್ಳುತ್ತಿದ್ದಾರೆ ಎಂದು ತಿವಿದರು.
ಸಿಡಿ ಪ್ರಕರಣದ ಬಗ್ಗೆ ಮಾತನಾಡಿದ ಡಿಕೆಶಿ, ಒಳ್ಳೆ ಹೆಸರು ಗಳಿಸಿರುವ ಪೊಲೀಸರು ಸಿಡಿ ಪ್ರಕರಣದಲ್ಲಿ ಏನು ಮಾಡುತ್ತಿದ್ದಾರೆ ? ಯಾವ ದಿಕ್ಕಿನಲ್ಲಿ ತನಿಖೆ ಸಾಗುತ್ತಿದೆ ಎಂಬುದು ನನಗೆ ಗೊತ್ತಿದೆ. ರಮೇಶ್ ಜಾರಕಿಹೊಳಿ ಕಷ್ಟ ನಷ್ಟ ಏನೋ? ಎಲ್ಲೆಲ್ಲಿ ನೋವಿದೆಯೋ ಎನ್ನುವ ಮೂಲಕ ಡಿಕೆಶಿ ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ, ಕೊರೊನಾ ಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ಎಡವಿದೆ. ವಾಸ್ತವಿಕ ಸ್ಥಿತಿಯನ್ನು ಅರಿತುಕೊಳ್ಳದೆ ಏನೇನೊ ಮಾತನಾಡುತ್ತಿದ್ದಾರೆ. ಮನೆಯಲ್ಲಿ ಒಟ್ಟಿಗಿರುವ ಮಂದಿ ಥಿಯೇಟರಲ್ಲಿ ಬೇರೆ ಬೇರೆ ಇರಬೇಕಂದ್ರೆ ಏನರ್ಥ. ಕೊರೊನಾ ನಿಯಂತ್ರಣಕ್ಕೆ ಬರಬೇಕು ಎಂದ್ರೆ ಚುನಾವಣಾ ಪ್ರಚಾರ ಸೇರಿದಂತೆ ಎಲ್ಲದಕ್ಕೂ ನಿಯಂತ್ರಣ ಹೇರಿ ಅಂತ ಸೂಚ್ಯವಾಗಿ ಹೇಳಿದರು.
Read: ಸಿಎಂ ವಿರುದ್ಧ ರಾಜ್ಯಪಾಲರಿಗೆ ಪತ್ರ ; ಯಡಿಯೂರಪ್ಪ ವಿರೋಧಿ ಬಣದ ಹೊಸ ದಾಳ ! ಬಿಜೆಪಿಗೆ ಮತ್ತೆ ಇಕ್ಕಟ್ಟು
Video:
Eshwarappa has shown the true colour of BJP govt mocked congress KPCC DK Shivakumar in Mangalore.
22-10-24 11:13 pm
Bangalore Correspondent
ಚನ್ನಪಟ್ಟಣ ; ಯೋಗೀಶ್ವರ್ ಗೆ ಮೈತ್ರಿ ಟಿಕೆಟ್ ನೀಡಲು...
22-10-24 11:06 pm
Kengari body found, Bangalore: ಬಿಂದಿಗೆ ಎತ್ತಿಕ...
22-10-24 08:27 pm
ಬೆಂಗಳೂರಿನಲ್ಲಿ 6 ಅಂತಸ್ಥಿನ ನಿರ್ಮಾಣ ಹಂತದ ಕಟ್ಟಡ ಮ...
22-10-24 07:19 pm
ಸಿ.ಪಿ ಯೋಗೀಶ್ವರ್ ಕಾಂಗ್ರೆಸ್ ಸೇರೋದು ಪಕ್ಕಾ ; ಮುಖ್...
22-10-24 05:26 pm
21-10-24 02:23 pm
HK News Desk
2023ರಲ್ಲಿ ಗ್ಲೋಬಲ್ ಯೂತ್ ಐಕಾನ್ ಆಗಿದ್ದ ಬಿಲಿಯನೇರ್...
20-10-24 10:53 pm
ಮನೆ ಮಾಲೀಕನ ಮೇಲಿನ ಸಿಟ್ಟಿನಲ್ಲಿ ಚಪಾತಿ ಹಿಟ್ಟಿಗೆ ಮ...
17-10-24 11:16 am
Mumbai Road Rage Video; ಮುಂಬೈ ; ಕಾರಿಗೆ ಆಟೋ ರಿ...
15-10-24 03:51 pm
ಡಿ ಕಂಪನಿ ಹಾದಿಯಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್...
14-10-24 10:12 pm
22-10-24 10:26 pm
Mangalore Correspondent
'ಅಕಾಡೆಮಿಡ್ ಒಂಜಿ ದಿನ : ಬಲೆ ತುಳು ಓದುಗ' ; ಅ.25ರ...
22-10-24 09:44 pm
Mangalore college, News: ಸರಕಾರಿ ಪ್ರಥಮ ದರ್ಜೆ ಕ...
22-10-24 07:28 pm
Mangalore, Ullal, railway track stone: ರೈಲು ಹ...
22-10-24 05:29 pm
Kalladka road, Mangalore News: ಮಳೆ- ಬಿಸಿಲಿಗೆ...
21-10-24 09:49 pm
22-10-24 02:49 pm
HK News Desk
Udupi Murder, Crime news: ಕುಡಿದ ಮತ್ತಿನಲ್ಲಿ ಸ್...
22-10-24 02:29 pm
Mangalore stone railway track, Thokottu; ರೈಲು...
20-10-24 11:47 am
Belagavi Cash Seized, crime, Police: ಮಹಾರಾಷ್ಟ...
19-10-24 02:38 pm
ಸಿಸಿಬಿ ಪೊಲೀಸರ ಭರ್ಜರಿ ಬೇಟೆ ; ಪೋಸ್ಟ್ ಆಫೀಸ್ನಲ್ಲ...
18-10-24 03:11 pm