ಗುದದ್ವಾರದಲ್ಲಿ ಚಿನ್ನದುಂಡೆ ; ದುಬೈನಿಂದ ಚಿನ್ನ ಸಾಗಿಸಿ ಮತ್ತೆ ಸಿಕ್ಕಿಬಿದ್ದ ಕಾಸರಗೋಡಿನ ವ್ಯಕ್ತಿ

04-04-21 04:10 pm       Mangaluru correspondent   ಕರಾವಳಿ

ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಬ್ಬ ವ್ಯಕ್ತಿ ಚಿನ್ನದ ಜೊತೆಗೆ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. 

ಮಂಗಳೂರು, ಎ.4: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಬ್ಬ ವ್ಯಕ್ತಿ ಚಿನ್ನದ ಜೊತೆಗೆ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. 

ಏರ್ ಇಂಡಿಯಾ ವಿಮಾನದಲ್ಲಿ ದುಬೈನಿಂದ ಇಂದು ಬೆಳಗ್ಗೆ ಮಂಗಳೂರಿಗೆ ಆಗಮಿಸಿದ ಕಾಸರಗೋಡು ಮೂಲದ ನೌಶದ್ ತ್ರಿಕ್ಕುಲತ್ (37) ಎಂಬ ವ್ಯಕ್ತಿಯನ್ನು ತಪಾಸಣೆ ನಡೆಸಿದಾಗ, ದೇಹದಲ್ಲಿ ಚಿನ್ನ ಪತ್ತೆಯಾಗಿದೆ. ಕೂಲಂಕುಷ ತಪಾಸಣೆ ವೇಳೆ ವ್ಯಕ್ತಿಯ ಗುದ ದ್ವಾರದಲ್ಲಿ ಉಂಡೆಗಳನ್ನಾಗಿಸಿದ ಚಿನ್ನದ ಗಟ್ಟಿ ಪತ್ತೆಯಾಗಿದೆ. 

ಪೌಡರ್ ರೂಪದಲ್ಲಿದ್ದ ನಾಲ್ಕು ಉಂಡೆಗಳಲ್ಲಿ 802 ಗ್ರಾಮ್ ಚಿನ್ನ ಪತ್ತೆಯಾಗಿದ್ದು ಅದರ ಮೌಲ್ಯ 37.29 ಲಕ್ಷ ಆಗಬಹುದೆಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 

ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ನಿರಂತರವಾಗಿ ತಪಾಸಣೆ ನಡೆಸುತ್ತಿದ್ದು ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸುವ ಖದೀಮರು ಬಲೆಗೆ ಬೀಳುತ್ತಿದ್ದಾರೆ. ದೇಹದ ಭಾಗದಲ್ಲಿ ಬಚ್ಚಿಟ್ಟುಕೊಂಡು ಅಥವಾ ಬಟ್ಟೆ , ಆಟಿಕೆಗಳ ಒಳಗೆ ಇರಿಸಿಕೊಂಡು ಚಿನ್ನದ ಗಟ್ಟಿ ತರುತ್ತಿದ್ದು ತಪಾಸಣೆ ವೇಳೆ ಭಾರೀ ಮೌಲ್ಯದ ಚಿನ್ನ ಪತ್ತೆಯಾಗುತ್ತಿದೆ. ಕಳೆದ ಐದಾರು ತಿಂಗಳಲ್ಲಿ 100ಕ್ಕಿಂತಲೂ ಹೆಚ್ಚು ಪ್ರಕರಣಗಳನ್ನು ಅಧಿಕಾರಿಗಳು ಭೇದಿಸಿದ್ದಾರೆ. ‌

Another seizure from the Officers of Mangalore Air customs has been executed on 4th April wherein the team has profiled and intercepted a passenger by the name Noushad Thrikkulath, aged 37 years, hailing from Kasargod, Kerala. This passenger has disembarked the Air India flight IX 384 coming from Dubai from where he has tried to smuggle gold by concealing it inside his body in his rectum.