ಲವ್ ಜಿಹಾದ್ ಹೆಸರಲ್ಲಿ ಹಿಂಸೆ ; ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಿ, ಸೂಕ್ತ ಕಾನೂನು ತರಲು ಪ್ರತಿಭಟನೆ ನಡೆಸಿ..

06-04-21 08:13 pm       Mangaluru correspondent   ಕರಾವಳಿ

ಹಿಂದು ಪರ ಸಂಘಟನೆಗಳು ಧೈರ್ಯವಿದ್ದರೆ ಲವ್ ಜಿಹಾದ್ ಕಾನೂನು ಜಾರಿಗಾಗಿ ಇವರ ಸರಕಾರದ ವಿರುದ್ಧವೇ ಪ್ರತಿಭಟನೆ ಮಾಡಲಿ ಎಂದು ಶಾಸಕ ಯು.ಟಿ. ಸವಾಲ್ ಹಾಕಿದ್ದಾರೆ.

ಮಂಗಳೂರು, ಎ.6:  ಲವ್ ಜಿಹಾದ್ ಹೆಸರಲ್ಲಿ ನೈತಿಕ ಪೋಲಿಸ್ ಗಿರಿ ನಡೆಸಲಾಗುತ್ತಿದೆ. ದಿನದಿಂದ ದಿನಕ್ಕೆ ಕ್ರೈಮ್ ಪ್ರಕರಣಗಳು ಮಂಗಳೂರಿನಲ್ಲಿ ಹೆಚ್ಚುತ್ತಿದೆ. ಹಿಂದು ಪರ ಸಂಘಟನೆಗಳು ಧೈರ್ಯವಿದ್ದರೆ ಲವ್ ಜಿಹಾದ್ ಕಾನೂನು ಜಾರಿಗಾಗಿ ಇವರ ಸರಕಾರದ ವಿರುದ್ಧವೇ ಪ್ರತಿಭಟನೆ ಮಾಡಲಿ ಎಂದು ಶಾಸಕ ಯು.ಟಿ. ಖಾದರ್ ಸವಾಲ್ ಹಾಕಿದ್ದಾರೆ. 

The 'Love Jihad' ordinance: Adding legal teeth to polarization

ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಖಾದರ್, ಲವ್ ಜಿಹಾದ್ ಬಗ್ಗೆ ಸುದ್ದಿಗೋಷ್ಟಿ ಕರೆದು ಪೊಲೀಸರಿಗೆ ಸವಾಲು ಹಾಕುತ್ತಾರೆ. ಲವ್ ಜಿಹಾದ್ ಕಾನೂನು ತರುತ್ತೇವೆಂದು ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಕಾರ್ಯಕಾರಿಣಿ ಮಾಡಿ ಹೇಳಿಕೊಂಡಿದ್ದ ಬಿಜೆಪಿ ಸರ್ಕಾರ ಆನಂತರ ಸುಮ್ಮನಾಗಿದ್ದು ಯಾಕೆ..?  ಇವರಿಗೆ ಲವ್ ಜಿಹಾದ್ ವಿಚಾರದಲ್ಲಿ ಕಾನೂನು ತರಬಹುದಲ್ವಾ.. ಅದು ಬಿಟ್ಟು ಸಂಘಟನೆಗಳ ಹೆಸರಲ್ಲಿ ನೈತಿಕ ಪೊಲೀಸ್ ಕೆಲಸ ಮಾಡುತ್ತಿದ್ದಾರೆ‌. ಪೊಲೀಸರು ಸವಾಲು ಹಾಕುವ ಸಂಘಟನೆಗಳ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ. ಪೊಲೀಸರ ವೈಫಲ್ಯದ ಕಾರಣ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ. ಕಾರ್ಯಕರ್ತರು ಬೀದಿಯಲ್ಲಿ ಹೊಡೆದಾಡುವಂತಾಗಿದೆ ಎಂದು ಖಾದರ್ ಹೇಳಿದರು. 

5 reasons why Hindus needs Bajrang Dal & VHP more than ever – HMP.News

ಪಬ್ ಜೀ ಯಂತಹ ವೈಲಂಟ್ ಆಗಿರುವ ವಿಡಿಯೋ ಗೇಮ್ ಗಳು ಸಣ್ಣ ಮಕ್ಕಳ ಮೇಲೆ ಪ್ರಭಾವ ಬೀರುತ್ತಿದೆ. ಬ್ಯಾನ್ ಆದ ಆಟಗಳು ಹೇಗೆ ಮತ್ತೆ ಚಾಲ್ತಿಯಲ್ಲಿವೆ, ಗೊತ್ತಿಲ್ಲ. ಒಂದ್ಕಡೆ ಸರಕಾರ ಬ್ಯಾನ್ ಮಾಡಿದೆ ಅಂತಾರೆ, ಇಲ್ಲಿ ಮಕ್ಕಳು ಅದನ್ನೇ ಆಡುತ್ತಾರೆ. ಈ ಗೇಮ್ ನಿಂದಾಗಿ ವಿದ್ಯಾರ್ಥಿಗಳ ಮನಸ್ಥಿತಿ ವಿಕಾರವಾಗುತ್ತಿದೆ. ವಿದ್ಯಾರ್ಥಿಗಳು, ಯುವಕರು ಈ ವಿಡಿಯೋ ಗೇಮ್ ಆಟಕ್ಕೆ ಅಡಿಕ್ಟ್ ಆಗುತ್ತಿದ್ದಾರೆ. ಮಕ್ಕಳ ವ್ಯಕ್ತಿತ್ವ ವೈಲೆಂಟ್ ಆಗುತ್ತಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಕ್ಷಣವೇ ಪಬ್ ಜಿಯಂತಹ ಆನ್ಲೈನ್ ಗೇಮ್ ಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.

U T Khader slams Bajrang Dal for violence in the name of Love Jihad. The organisation should fight for law but not to take law in their hands slamed Khader in Mangalore.